ಕರ್ನಾಟಕ

karnataka

ನಾನು ಮಾಂಸ ತಿನ್ನುತ್ತೇನೆ, ಅದು ನನ್ನ ಹ್ಯಾಬಿಟ್, ನೀವು ತಿನ್ನಲ್ವೇನಪ್ಪ... : ಸಿದ್ದರಾಮಯ್ಯ ಪ್ರಶ್ನೆ

By

Published : Aug 23, 2022, 2:06 PM IST

Updated : Aug 23, 2022, 7:12 PM IST

ಮಡಿಕೇರಿ ಚಲೋ ಮುಂದೂಡಿಕೆಯಾಗಿದೆ. ಎಲ್ಲರೊಂದಿಗೆ ಚರ್ಚಿಸಿ ಮುಂದಿನ ದಿನಾಂಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Madikeri Chalo has been postponed  Congress leader Siddaramaiah  Congress leader Siddaramaiah egg throwing case  ಮಡಿಕೇರಿ ಚಲೋ ಮುಂದೂಡಿಕೆ  ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ  ಕಾನೂನು ಪಾಲನೆ ಮಾಡುವ ದೃಷ್ಟಿಯಿಂದ ಮಡಿಕೇರಿ ಚಲೋ ಮುಂದೂಡಿಕೆ  ತಿಪಕ್ಷ ನಾಯಕ ಸಿದ್ದರಾಮಯ್ಯ  ಬಿಜೆಪಿ ಜಾಗೃತಿ ಸಮಾವೇಶ
ಸಿದ್ದರಾಮಯ್ಯ

ಬೆಂಗಳೂರು: ಮಾಂಸ ತಿನ್ನೋದು ಬಿಡೋದು ಅವರವರ ಹ್ಯಾಬಿಟ್. ನಾನು ಮಾಂಸ ತಿನ್ನುತ್ತೇನೆ. ಅದು ನನ್ನ ಹ್ಯಾಬಿಟ್. ನೀವು ತಿನ್ನಲ್ವೇನಪ್ಪ, ಇಲ್ಲಿ ಎಷ್ಟು ಜನ ತಿನ್ನಲ್ಲ. ನಾನು ದೇವಸ್ಥಾನಗಳಿಗೆ ಹೋಗ್ತೇನೆ. ನಮ್ಮೂರ ದೇವಸ್ಥಾನದಲ್ಲಿ ನಾನು ಕುಣಿಯಲಿಲ್ವೇ?. ಅನೇಕ ಬಾರಿ ತಿರುಪತಿ, ಚಾಮುಂಡಿ, ನಂಜನಗೂಡಿಗೆ ಹೋಗಿದ್ದೇನೆ. ಎಷ್ಟೋ ದೇವರಿಗೆ ಮಾಂಸದ ಎಡೆ ಇಡ್ತಾರೆ. ನಾನು ಕೋಳಿ, ಕುರಿ, ಮೇಕೆ ಅಷ್ಟೇ ತಿನ್ನೋದು. ಅವರನ್ನ ನೀವು ಕೇಳ್ರೀ. ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ನಾನ್ಯಾಕೆ ಕೈಹಾಕಲಿ. ದೇವಸ್ಥಾನದಲ್ಲಿ ನಿವೇನು ತಿಂದ್ರಿ ಅಂತ ಕೇಳ್ತಾರೇನ್ರೀ?.. ನಾನು ಅವತ್ತು ತಿಂದೇ ಇಲ್ಲ. ವೀಣಾ ಅಚ್ಚಯ್ಯ ಕೇಳಿದ್ರು, ನಾನೇ ತಿನ್ನಲಿಲ್ಲ. ನಾನು ಮಾಂಸ ಹಾರಿ, ಅವರು ತಂದಿದ್ರೂ ಸಹ ನಾನು ತಿನ್ನಲಿಲ್ಲ. ಆರೋಪ ಬಂದಿದ್ದಕ್ಕೆ ನಾನು ಹೇಳ್ದೆ. ಅವರ ಬುಡಕ್ಕೆ ಕೈಹಾಕ್ತೇನೆ ಅನ್ನೋ ಭಯವಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ನಾನೊಬ್ಬ ಮಾಜಿ ಮುಖ್ಯಮಂತ್ರಿಯೂ ಆಗಿದ್ದು ಕಾನೂನು ಪಾಲನೆ ಮಾಡುವ ದೃಷ್ಟಿಯಿಂದ ಮಡಿಕೇರಿ ಚಲೋ ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದರು.ಸರ್ಕಾರಕ್ಕೆ ನನ್ನ ಮೇಲೆ ಭಯ ಬಂದಿದೆ. ಹಾಗಾಗಿ ಸಾವರ್ಕರ್ ವಿಚಾರವನ್ನೇ ಮುಂದಿಟ್ಟುಕೊಂಡಿದ್ದಾರೆ. ಸಾಕಷ್ಟು ಬಾರಿ ನಾನು ಕೊಡಗಿಗೆ ಹೋಗಿದ್ದೆ. ಆಗ ಯಾಕೆ ಪ್ರತಿಭಟನೆ ಮಾಡಿಸಲಿಲ್ಲ. ಈಗ ನನ್ನನ್ನು ಹತ್ತಿಕ್ಕಲು ನೋಡುತ್ತಿದ್ದಾರೆ. ಕೊಡಗಿಗೆ ಬರಲಿ ಅಂತ ಭೋಪಯ್ಯ ಸವಾಲು ಹಾಕಿದ್ದಾರೆ. ನಾವು ಸ್ವತಂತ್ರ ಭಾರತದಲ್ಲಿ ಇದ್ದೇವಿ ತಾನೇ?. ಹಿಂದೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ರು. ಬಳ್ಳಾರಿ ಪಾದಯಾತ್ರೆ ಮಾಡಿದ್ವಿ. ಈಗ ಮಡಿಕೇರಿ ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.

ಶೀಘ್ರವೇ ಮತ್ತೊಂದು ದಿನಾಂಕ ನಿಗದಿ: ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಅನಗತ್ಯವಾಗಿ ನನ್ನ ವಿರುದ್ಧ ಕಾರಣ ಇಲ್ಲದೆ ಪ್ರತಿಭಟನೆ ಮಾಡಿದ್ದಾರೆ. ಈಗ ನಿಷೇಧಾಜ್ಞೆ ಹೇರಿದ್ದಾರೆ. ನಾವು ನಿಷೇಧಾಜ್ಞೆ ಉಲ್ಲಂಘನೆ ಮಾಡಬಹುದಿತ್ತು. ಆದ್ರೆ ನಾನು ಮಾಜಿ ಸಿಎಂ ಇದ್ದೇನೆ. ಕಾನೂನು ಪಾಲನೆ ಮಾಡಲೇಬೇಕು. ಈಗ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಮಡಿಕೇರಿ ಚಲೋ ಕಾರ್ಯಕ್ರಮ ಮುಂದೂಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು.

ಭಜರಂಗದಳದವರ ಮೇಲೆ ಕ್ರಮ ಇಲ್ಲ:ಸಿಎಂ ಹೋದಾಗ ಅಲ್ಲಿನ ಶಾಸಕರ ಕಳಪೆ ಕೆಲಸ ಗೊತ್ತಾಗುತ್ತೆ ಅಂತ ಅವೈಡ್ ಮಾಡಿದ್ದಾರೆ. ಅಲ್ಲಿ ಒಬ್ಬರು ಕೋಳಿಮೊಟ್ಟೆ ಎಸೆದ್ರು. ಅಲ್ಲಿಯೂ ಪೊಲೀಸರು ಸುಮ್ಮನೆ ನಿಂತಿದ್ರು. ಭಜರಂಗದಳದವರ ಮೇಲೆ ಕ್ರಮ ಜರುಗಿಸಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ವೆಂಟೆಂಡ್ ಡ್ಯಾಂನಿಂದ ತೊಂದರೆಯಾಗಿದೆ ಅಂತ ಜನ ಹೇಳ್ತಿದ್ರು. 2018-19ರಲ್ಲೂ ಮಳೆಯಿಂದ ಹಾನಿಯಾಗಿದೆ. ಇಷ್ಟೆಲ್ಲಾ ಆದ್ರೂ ಸರ್ಕಾರ ಮನೆಗಳನ್ನ ಕೊಟ್ಟಿಲ್ಲ. ನಾವು 750 ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆವು. ಅವನ್ನು ಬಿಟ್ಟರೆ ಒಂದೇ ಒಂದು ಮನೆ ನಿರ್ಮಿಸಿಲ್ಲ. ಕೆಲವರಿಗೆ 10 ಸಾವಿರ ಚೆಕ್ ಕೊಟ್ಟಿದ್ದಾರೆ. ಆ ಚೆಕ್ ಹಣ ಇನ್ನೂ ಅವರಿಗೆ ತಲುಪಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ನಾನೊಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕ: ಬಿಜೆಪಿ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ, ಮಾಡಲಿ. ಬಿಜೆಪಿ ಅಧ್ಯಕ್ಷ, ಶಾಸಕ ಸೇರಿ ಸಮಾವೇಶ ಮಾಡಿದ್ದಾರೆ. ಮಾಡಲಿ ಅದರ ಬಗ್ಗೆ ನಾನು‌ ಮಾತನಾಡಲ್ಲ. ಆದರೆ ನನ್ನ ಮೇಲೆ ಮೊಟ್ಟೆ ಎಸೆದಿದ್ದೇಕೆ?. ನನ್ನ ಮೇಲೆ ಕಲ್ಲು ಎಸೆದಿದ್ದೇಕೆ?. ನಮ್ಮ ಪ್ರತಿಭಟನೆ ತಪ್ಪು ದಾರಿಗೆ ಎಳೆಯೋಕೆ ಮಾಡ್ತಿದ್ದಾರೆ. ಆಗಸ್ಟ್ 26ರಂದು ಪ್ರತಿಭಟನೆ ಕರೆದಿದ್ದೆವು. ಈಗ ಅವರು 144 ಸೆಕ್ಷನ್ ಹಾಕಿದ್ದಾರೆ. ನನ್ನ ಪ್ರತಿಭಟನೆ ತಡೆಯೋಕೆ ಹಾಕಿದ್ದಾರೆ. ನಾನೊಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕ. ಹಾಗಾಗಿ ನಾನು ಇದನ್ನ ಉಲ್ಲಂಘಿಸೋಕೆ ಆಗಲ್ಲ. ಇವತ್ತು ಅಧ್ಯಕ್ಷರು, ಸ್ನೇಹಿತರ ಜೊತೆ ಚರ್ಚಿಸ್ತೇನೆ. ಡಿಸಿ ಆರ್ಡರ್ ಅಂದ್ರೆ ಗೌರ್ಮೆಂಟ್ ಆರ್ಡರ್. ಅದಕ್ಕೆ ಮಡಿಕೇರಿ ಚಲೋ ಪ್ರತಿಭಟನೆ ಮುಂದೂಡಿದ್ದೇನೆ. ಮುಂದೆ ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡ್ತೇವೆ ಎಂದು ಹೇಳಿದರು.

ಎಸ್​ಪಿ ಸುಮ್ಮನೆ ನಿಂತು ಬಿಟ್ಟಿದ್ದ : ಕಾಂಗ್ರೆಸ್ ಪಾದಯಾತ್ರೆ ಸರಿಯಲ್ಲ ಎಂಬ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಯಾವ ಪಾರ್ಟಿರೀ?. ಬಿಜೆಪಿಯವರು ಹೇಳಲೇಬೇಕಲ್ಲ. ಮೊದಲು ಪ್ರತಿಭಟನೆ ಘೋಷಿಸಿದ್ದು ನಾನು. ನಾನು ಹೇಳಿದ ಮೇಲೆ ಬಿಜೆಪಿಯವರು ಜಾಗೃತಿ‌ ಸಮಾವೇಶ ಮಾಡ್ತೇವೆ ಅಂತ ಹೇಳಿದ್ದು. ಜಾಗೃತಿ ಸಮಾವೇಶ ಮಾಡ್ತೇವೆ ಅಂತ ಹೇಳಿದ್ದೇಕೆ?.. ನನ್ನ ವಿರುದ್ಧ ಕುಶಾಲನಗರದಲ್ಲಿಯೂ ಪ್ರತಿಭಟನೆ ಮಾಡಿದ್ರು. ಐದಾರು ಕಡೆ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ‌. ಎಸ್​ಪಿ ಸುಮ್ಮನೆ ನಿಂತು ಬಿಟ್ಟಿದ್ದ. ಶನಿವಾರ ಸಂತೆಯಲ್ಲೂ ಪ್ರತಿಭಟನೆ ನಡೆಸಿದ್ರು. ಇಷ್ಟೆಲ್ಲಾ ಆದ್ರೂ ಎಸ್ಪಿ,ಡಿಸಿ ಕ್ರಮ ಜರುಗಿಸಲಿಲ್ಲ. ಹಾಗಾಗಿ ನನ್ನ ವಿರುದ್ಧ ಮಾಡಿದ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ ಎಂದು ಹೇಳಿದರು.

ಹೊಟ್ಟೆ ಉರಿ :ನನ್ನ‌ವರ್ಚಸ್ಸು ಕುಂದಿಸುವ ಪ್ರಯತ್ನ ಇದು. ದಾವಣಗೆರೆ ಕಾರ್ಯಕ್ರಮ ನೋಡಿ ಬಿಜೆಪಿ, ಆರ್​ ಎಸ್​ಎಸ್, ಭಜರಂಗದಳಕ್ಕೆ ಹೊಟ್ಟೆ ಉರಿ ಶುರುವಾಗಿದೆ. ನಾನು 2019ರಲ್ಲಿ ಕೊಡಗಿಗೆ ಹೋಗಿದ್ದೆ. ಎರಡು ಬಾರಿ ಅಲ್ಲಿ ಭೇಟಿ ಕೊಟ್ಡಿದ್ದೆ. ಆಗ ಯಾಕೆ ಕೊಡವರು ಯಾರೂ ಪ್ರತಿಭಟಿಸಿರಲಿಲ್ಲ. ಕೊಡಗಿನ ಜನ ಬಹಳ ಒಳ್ಳೆಯವರು. ಅವರು ಯಾಕೆ ಈ ರೀತಿ ಮಾಡ್ತಾರೆ. ಇದು ಮಾಡಿರೋದು ಬಿಜೆಪಿ, ಆರ್​ಎಸ್​ಎಸ್​ ಕಾರ್ಯಕರ್ತರು. ಬಿಜೆಪಿಯವರು ಜನರ ಕಷ್ಟದ ಬಗ್ಗೆ ಮಾತನಾಡ್ತಾರಾ?, ಜಿಎಸ್​ಟಿ ಬಗ್ಗೆ ಮಾತನಾಡಿದ್ರಾ?, ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ ಬಗ್ಗೆ ಮಾತನಾಡಿದ್ರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಮೊಟ್ಟೆ ಪ್ರಕರಣದಲ್ಲಿ ಸಿದ್ದರಾಮಯ್ಯರಿಂದ ಅನಗತ್ಯ ಗೊಂದಲ ಸೃಷ್ಟಿ: ಬಿಎಸ್​​ವೈ

Last Updated : Aug 23, 2022, 7:12 PM IST

ABOUT THE AUTHOR

...view details