ಕರ್ನಾಟಕ

karnataka

ಕೆಂಪೇಗೌಡರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿರಿಸುವುದು ಸರಿಯಲ್ಲ: ಎಂ ಬಿ ಪಾಟೀಲ್

By

Published : Nov 12, 2022, 4:12 PM IST

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೂಡ ಆಹ್ವಾನ ನೀಡಿಲ್ಲ. ಕೆಂಪೇಗೌಡ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮ ಆಗಿತ್ತು. ಕೆಂಪೇಗೌಡ ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಒಂದು ಜಾತಿಗೆ ಅವರನ್ನು ಸೇರಿಸುತ್ತಿರುವುದು ತಪ್ಪು.

Limiting Kempegowdas to one community is not right: MB Patil
ಕೆಂಪೇಗೌಡರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿಸುವುದು ಸರಿಯಲ್ಲ: ಎಂ ಬಿ ಪಾಟೀಲ್

ಬೆಂಗಳೂರು: ಕೆಂಪೇಗೌಡರು ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಅವರನ್ನು ಒಂದು ಜಾತಿಗೆ ಸೀಮಿತವಾಗಿಸುವುದು ತಪ್ಪು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿ ಬಿಜೆಪಿ ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಿದೆ.

ಇದಕ್ಕೆ ಪ್ರತಿಪಕ್ಷದ ನಾಯಕರನ್ನು ಶಿಷ್ಟಾಚಾರದ ಪ್ರಕಾರ ಕರೆಯಬೇಕು. ಅವರನ್ನು ಆ ರೀತಿ ಕರೆಯದೇ ಇದ್ದದ್ದು ತಪ್ಪು. ಪ್ರಜಾಪ್ರಭುತ್ವದಲ್ಲಿ ಕೆಲವೊಂದು ಹಕ್ಕು ಇವೆ. ಅವುಗಳ ಉಲ್ಲಂಘನೆ ಆಗಿದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೂಡ ಆಹ್ವಾನ ನೀಡಿಲ್ಲ. ಕೆಂಪೇಗೌಡ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮ ಆಗಿತ್ತು. ಕೆಂಪೇಗೌಡ ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಒಂದು ಜಾತಿಗೆ ಅವರನ್ನು ಸೇರಿಸುತ್ತಿರುವುದು ತಪ್ಪು ಎಂದರು.

ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಿಎಂ .ಎಸ್.ಎಂ ಕೃಷ್ಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗೋಕೆ ಪ್ರಮುಖ ಕಾರಣ, ಅವರಿಗೂ ಆಹ್ವಾನ ನೀಡಬೇಕಿತ್ತು. ಕೆಂಪೇಗೌಡ ಈ ನಾಡಿನ ಆಸ್ತಿ, ಎಲ್ಲರನ್ನೂ ಕರೆದು ಹಬ್ಬ ರೀತಿಯಲ್ಲಿ ಮಾಡಬೇಕಿತ್ತು ಎಂದರು. ಹಾಗೆ ಮಾತನಾಡಿದ ಅವರು ಮಹದಾಯಿ, ಕೃಷ್ಣ ಮೇಲ್ದಂಡೆ ಅನುಷ್ಠಾನಕ್ಕೆ ಪಾದಯಾತ್ರ ವಿಚಾರ ಮಾತನಾಡಿ, ಪಕ್ಷದ ಮುಂದೆ ಈ ಹೋರಾಟ ಮಾಡಬೇಕು ಅಂತ ಚರ್ಚೆ ಇದೆ.

ಆದರೆ ಸದ್ಯ ಸಮಯವಿಲ್ಲ, ಶಾಸಕರು ಕ್ಷೇತ್ರದಲ್ಲಿ ಇರಬೇಕು. ಸಿದ್ದರಾಮಯ್ಯ, ಡಿಕೆಶಿ ಬಸ್ ಯಾತ್ರೆ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ಹೋರಾಟದ ಚಿಂತನೆ ಮತ್ತು ಮಹದಾಯಿ, ಕೃಷ್ಣ ಭಾಗದ ಕ್ಷೇತ್ರದಲ್ಲಿ ಹೋರಾಟದ ಚಿಂತನೆ ನಡೆಯುತ್ತಿದೆ ಎಂದು ವಿವರಿಸಿದರು.

ಮುಂದೆ ಬಸವಣ್ಣ ಪ್ರತಿಮೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಚರ್ಚೆ ಬಹಳ ದಿನಗಳಿಂದ ಇದೆ. ಬಸವಣ್ಣ ಈ ನಾಡಿನ ಆಸ್ತಿ. ಅವರ ಪ್ರತಿಮೆ ಆದಷ್ಟು ಬೇಗ ಆಗಬೇಕು. ಬಸವಣ್ಣ ಕೂಡ ಒಂದು ಸಮುದಾಯಕ್ಕೆ ಸಿಮೀತವಾದ ವ್ಯಕ್ತಿ ಅಲ್ಲ. ಹಾಗೆ ಕನಕದಾಸರು, ಕುವೆಂಪು, ರಾಣಿ ಚೆನ್ನಮ್ಮ ಇವರಂತೆ ಹಲವಾರು ಮಹಾತ್ಮರು ಈ ನಾಡಿನವರು ಅವರ ಪ್ರತಿಮೆಗೆಳನ್ನು ಸಹ ಸರ್ಕಾರ ಬೇರೆ ಜಾಗದಲ್ಲಿ ನಿರ್ಮಿಸಲಿ ಎಂದು ಸಲಹೆ ಇತ್ತರು.

ಇದನ್ನೂ ಓದಿ:ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್​ಡಿಡಿ ನಿರ್ಲಕ್ಷ್ಯ ಆರೋಪ: ಹೆಚ್‍ಡಿಕೆ ಗರಂ

ABOUT THE AUTHOR

...view details