ಕರ್ನಾಟಕ

karnataka

ಹೊಸಕೋಟೆಗೆ ಸೋಮವಾರ ಸಿಎಂ ಎಂಟ್ರಿ!  ರಂಗೇರಲಿದೆ ರಣಕಣ

By

Published : Nov 16, 2019, 10:03 PM IST

Updated : Nov 16, 2019, 11:43 PM IST

ಸಿಎಂ ಯಡಿಯೂರಪ್ಪ ಉಪಸಮರದ‌ ಅಖಾಡಕ್ಕೆ ಇಳಿಯುತ್ತಿದ್ದು, ಹೊಸಕೋಟೆಯಿಂದ ತಮ್ಮ ಪ್ರಚಾರ‌‌ ಕಾರ್ಯ ಆರಂಭಿಸಲಿದ್ದಾರೆ.

ಹೊಸಕೋಟೆ ರಣಕಣಕ್ಕೆ‌ ಸಿಎಂ ಬಿಎಸ್​​ವೈ

ಬೆಂಗಳೂರು:ಸಿಎಂ ಯಡಿಯೂರಪ್ಪ ಉಪ ಸಮರದ‌ ಅಖಾಡಕ್ಕೆ ಇಳಿಯುತ್ತಿದ್ದು, ಹೊಸಕೋಟೆಯಿಂದ ತಮ್ಮ ಪ್ರಚಾರ‌‌ ಕಾರ್ಯ ಆರಂಭಿಸಲಿದ್ದಾರೆ.

ರೆಬೆಲ್ ಬಿಜೆಪಿಗೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ವಲಸೆ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ನಡುವೆ ಜಿದ್ದಾಜಿದ್ದಿನ ಫೈಟ್​ ಏರ್ಪಟ್ಟಿದೆ. ಹೊಸಕೋಟೆ ಕ್ಷೇತ್ರ ಪ್ರತಿಷ್ಠೆ ಹಾಗೂ ಸವಾಲಿನ ಕಣವಾಗಿದೆ‌. ಹೀಗಾಗಿ ಸಿಎಂ ಯಡಿಯೂರಪ್ಪ ಸೋಮವಾರ ಹೊಸಕೋಟೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಂಟಿಬಿ ಪರ ಮತಯಾಚನೆ ಮಾಡಲಿದ್ದಾರೆ.

ಈಗಾಗಲೇ ಎಂಟಿಬಿ ಹೊಸಕೋಟೆಗೆ ಪ್ರಚಾರಕ್ಕೆ ಬರುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಇದೀಗ ಸಿಎಂ ಯಡಿಯೂರಪ್ಪ ತಮ್ಮ ಮೊದಲ ಉಪಸಮರದ ಪ್ರಚಾರ ಕಾರ್ಯವಾಗಿ ಹೊಸಕೋಟೆಯ ರಣಕಣಕ್ಕೆ ಇಳಿಯಲಿದ್ದಾರೆ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಮತ ನೀಡುವಂತೆ ಮನವಿ ಮಾಡಲಿದ್ದಾರೆ. ಇತ್ತ ಬಿಜೆಪಿ ರೆಬೆಲ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಮನವೊಲಿಕೆ ಯತ್ನ ವಿಫಲವಾಗುತ್ತಿದ್ದರೆ, ಅತ್ತ ಜೆಡಿಎಸ್ ಶರತ್ ಬಚ್ಚೇಗೌಡಗೆ ಬೆಂಬಲ ನೀಡಲು ಮುಂದಾಗಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಎಂಟಿಬಿ ನಾಗರಾಜ್ ಗೆ ಹಿನ್ನಡೆಯಾಗುವ ಸಾಧ್ಯತೆ ಇರುವ ಕಾರಣ ಸಿಎಂ ಬಿಎಸ್​​​ವೈ ಹೊಸಕೋಟೆಯ ಅಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ಶರತ್ ಬಚ್ಚೇಗೌಡರಿಗೆ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದ್ದಾರೆ.

Intro:Body:KN_BNG_03_HOSAKOTE_CMCAMPAIGN_SCRIPT_7201951

ಸೋಮವಾರ ಹೊಸಕೋಟೆ ರಣಕಣಕ್ಕೆ‌ ಇಳಿಯಲಿದ್ದಾರೆ ಸಿಎಂ ಯಡಿಯೂರಪ್ಪ!

ಬೆಂಗಳೂರು: ಸಿಎಂ ಯಡಿಯೂರಪ್ಪ ಉಪಸಮರದ‌ ಅಖಾಡಕ್ಕೆ ಇಳಿಯುತ್ತಿದ್ದು, ಹೊಸಕೋಟೆಯಿಂದ ತಮ್ಮ ಪ್ರಚಾರ‌‌ ಕಾರ್ಯ ಆರಂಭಿಸಲಿದ್ದಾರೆ.

ರೆಬೆಲ್ ಬಿಜೆಪಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ವಲಸೆ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಹೊಸಕೋಟೆ ಕ್ಷೇತ್ರ ಬಿಜೆಪಿಗೆ ಪ್ರತಿಷ್ಠೆ ಹಾಗೂ ಸವಾಲಿನ ಕಣವಾಗಿದೆ‌. ಹೀಗಾಗಿ ಸಿಎಂ ಯಡಿಯೂರಪ್ಪ ಸೋಮವಾರ ಹೋಸಕೋಟೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಂಟಿಬಿ ಪರ ಮತಯಾಚನೆ ಮಾಡಲಿದ್ದಾರೆ.

ಈಗಾಗಲೇ ಎಂಟಿಬಿ ಹೊಸಕೋಟೆಗೆ ಪ್ರಚಾರಕ್ಕೆ ಬರುವಂತೆ ಸಿಎಂರಲ್ಲಿ ಮನವಿ ಮಾಡಿದ್ದರು. ಇದೀಗ ಸಿಎಂ ಯಡಿಯೂರಪ್ಪ ತಮ್ಮ ಮೊದಲ ಉಪಸಮರದ ಪ್ರಚಾರ ಕಾರ್ಯವಾಗಿ ಹೊಸಕೋಟೆ ಯ ರಣಕಣಕ್ಕೆ ಇಳಿಯಲಿದ್ದಾರೆ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆ ಮತ ನೀಡುವಂತೆ ಮನವಿ ಮಾಡಲಿದ್ದಾರೆ.

ಇತ್ತ ಬಿಜೆಪಿ ರೆಬೆಲ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಮನವೊಲಿಕೆ ಯತ್ನ ವಿಫಲವಾಗುತ್ತಿದ್ದರೆ, ಅತ್ತ ಜೆಡಿಎಸ್ ಶರತ್ ಬಚ್ಚೇಗೌಡಗೆ ಬೆಂಬಲ ನೀಡಲು ಮುಂದಾಗಿರುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಎಂಟಿಬಿ ನಾಗರಾಜ್ ಗೆ ಹಿನ್ನಡೆಯಾಗುವ ಸಾಧ್ಯತೆ ಇರುವ ಕಾರಣ ಸಿಎಂ ಯಡಿಯೂರಪ್ಪ ಹೊಸಕೋಟೆಯ ಅಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ಶರತ್ ಬಚ್ಚೇಗೌಡರಿಗೆ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದ್ದಾರೆ.Conclusion:
Last Updated :Nov 16, 2019, 11:43 PM IST

ABOUT THE AUTHOR

...view details