ಕರ್ನಾಟಕ

karnataka

ಪೊಲೀಸರನ್ನು ಕಾಂಗ್ರೆಸ್ಸೀಕರಣ ಮಾಡುವ ಪ್ರಯತ್ನ: ಆರಗ ಜ್ಞಾನೇಂದ್ರ

By

Published : May 24, 2023, 12:40 PM IST

ಮಂಗಳವಾರ (ನಿನ್ನೆ) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳ ಸಭೆ ನಡೆದಿತ್ತು.

Former Home Minister Araga Gyanendra
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: "ಪೊಲೀಸರನ್ನು ಕಾಂಗ್ರೆಸ್ಸೀಕರಣ ಮಾಡುವ ಪ್ರಯತ್ನವನ್ನು ನಿನ್ನೆಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಧರ್ಮ, ಜಾತಿ ಆಧಾರದ ಮೇಲೆ ಯಾರೂ ಏನೂ ಮಾಡುವುದಿಲ್ಲ. ನಿನ್ನೆ ನೀವು ಹೀಗೆಯೇ ಇರಬೇಕು. ನಾವು ಹೇಳಿದಂತೆ ಮಾಡಬೇಕು ಎಂದು ಪೊಲೀಸರಿಗೆ ಒಂದು ತರಹ ಧಮ್ಕಿ ಹಾಕಿದ್ದೀರಿ" ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಅಧಿಕೃತ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾನೂನು ಮೀರಿಯೂ ಇವರು ಹೇಳಿದವರ ಮೇಲೆ ಕೇಸ್ ಹಾಕಬೇಕು. ಇವರು ಹೇಳಿದವರನ್ನು ಬಿಡಬೇಕು. ಹಿಂದೆಯೂ ಕೂಡಾ ಇವರು ಈ ರೀತಿ ಮಾಡಿದ್ದರು. ಪಿಎಫ್ಐ ಸಂಘಟನೆಯನ್ನು ಸಾಕಿ ಬೃಹದಾಕಾರವಾಗಿ ಬೆಳೆಸಿದ್ದರು. ಅದರ ಪರಿಣಾಮ ಇಡೀ ದೇಶ, ರಾಜ್ಯದಲ್ಲಿ ಬೀರಿ ಶಾಂತಿ ಸುವ್ಯವಸ್ಥೆ ಹಾಳಾಗಿತ್ತು. ಯಾವ ಸಮುದಾಯವನ್ನು ತುಷ್ಟೀಕರಣ ಮಾಡಲು ನಿನ್ನೆ ಈ ರೀತಿ ಮಾತಾಡಿದರು ಅಂತಾ ಜನಕ್ಕೆ ಗೊತ್ತಾಗುತ್ತಿದೆ. ಮುಂದೆಯೂ ಕೂಡಾ ಈ ರೀತಿ ಇವರು ಮಾತಾಡ್ತಾರೆ. ಇದು ಅಶ್ಚರ್ಯ ಏನಲ್ಲ" ಎಂದು ಹೇಳಿದರು.

ಪೊಲೀಸರು ಕೇಸರಿ ಶಾಲು ಹಾಕಿದ ಬಗ್ಗೆ ಡಿಸಿಎಂ ಎಚ್ಚರಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, "ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕೇಸರಿ ಶಲ್ಯನೋ, ಏನೋ ಹಾಕ್ತಾರೆ, ಇವರಿಗೆ ಕೇಸರಿ ಅಲರ್ಜಿ ಇದೆ ಅಂತಾ ಹೇಳಿದರೆ ಇವರು ಕೇಸರಿಯನ್ನೇ ನಿಷೇಧ ಮಾಡಲಿ, ಕೇಸರಿ ಬಣ್ಣವನ್ನೇ ನಿಷೇಧ ಮಾಡಲಿ. ಕೇಸರೀಕರಣ ಅನ್ನುವಂತಹದ್ದು ಎಲ್ಲಿದೆ? ಅವರಿಗೆ ಏನು ಅಲರ್ಜಿ ಹೇಳಲಿ" ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಶಾಂತಿ ಸುವ್ಯವಸ್ಥೆ ಹದಗೆಟ್ಟರೆ ಪೊಲೀಸ್ ಅಧಿಕಾರಿಗಳೇ ಹೊಣೆ: ಸಿಎಂ, ಡಿಸಿಎಂ ಎಚ್ಚರಿಕೆ

ನೈತಿಕ ಪೊಲೀಸ್‌ಗಿರಿಗೆ ಅವಕಾಶ ಇಲ್ಲ ಎಂಬ ಸಿಎಂ ಎಚ್ಚರಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಕಾನೂನಿನಲ್ಲಿ ತಪ್ಪು ನಡೆದರೆ ಕ್ರಮ ಕೈಗೊಳ್ಳಬೇಕು. ಇದು ಯಾವ ಸಮುದಾಯದ ತುಷ್ಟೀಕರಣ, ಯಾವ ಸಮುದಾಯವನ್ನು‌ ತುಳಿಯಲು ಅಂತಾ ಗೊತ್ತಾಗುತ್ತದೆ. ಬಜರಂಗದಳ ರಾಷ್ಟ್ರ ವಿರೋಧಿ ಕೃತ್ಯ ಮಾಡಲಿಲ್ಲ, ಕೊಲೆ ಸುಲಿಗೆ ಮಾಡಲಿಲ್ಲ. ಪಿಎಫ್​ಐ ಅದನ್ನೆಲ್ಲ ಮಾಡಿತ್ತು. ಅದಕ್ಕೆ ಕೇಂದ್ರ ಸರ್ಕಾರ ನಿಷೇಧ ಮಾಡಿತ್ತು. ಇದರ ಬಗ್ಗೆ ಬಜರಂಗದಳದ ಹಿರಿಯರು ಕುಳಿತು ಮಾತನಾಡುತ್ತಾರೆ" ಎಂದರು.

ನಿನ್ನೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಿಎಂ, ಡಿಸಿಎಂ ಖಡಕ್​ ಸೂಚನೆ ನೀಡಿದ್ದರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಟ್ಟರೆ ಅದಕ್ಕೆ ಪೊಲೀಸರೇ ಹೊಣೆ, ಸೈಬರ್​ ಅಪರಾಧಗಳಿಗೂ ಕಡಿವಾಣ ಹಾಬೇಕು ಎಂದು ತಿಳಿಸಿದ್ದರು. ಪೊಲೀಸ್​ ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡುವುದಿಲ್ಲ ಎಂದು ಡಿಕೆಶಿ ಖಡಕ್​ ವಾರ್ನಿಂಗ್​ ಕೊಟ್ಟಿದ್ದರು.

ಇದನ್ನೂ ಓದಿ:ಕಲಬುರಗಿ ಜಿಲ್ಲೆಯಲ್ಲಿ‌ ಅಕ್ರಮಗಳಿಗೆ ಕಡಿವಾಣ ಹಾಕಿ: ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್‌ ಸೂಚನೆ

ABOUT THE AUTHOR

...view details