ಕರ್ನಾಟಕ

karnataka

ನೆರೆ-ಬರ ಅಂತಾ ಒಳ್ಳೇ ಯೋಚನೆಗಳಿಗೆ ಕತ್ತರಿ ಹಾಕಿದ್ರೇ ಸುಮ್ನಿರಲ್ಲ- ಡಾ.ಜಿ ಪರಮೇಶ್ವರ್ ಎಚ್ಚರಿಕೆ

By

Published : Aug 16, 2019, 5:59 PM IST

ರಾಜ್ಯದಲ್ಲಿ ಅತಿವೃಷ್ಠಿ ಅನಾವೃಷ್ಠಿ ಉಂಟಾಗಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಾಜ್ಯದ ಬಗ್ಗೆ ಚೂರು ಅನುಕಂಪ ತೋರುತ್ತಿಲ್ಲ ಎಂದು ಡಾ. ಜಿ ಪರಮೇಶ್ವರ್​ ಕಿಡಿ ಕಾರಿದ್ದಾರೆ.

ಡಾ.ಜಿ. ಪರಮೇಶ್ವರ್

ಬೆಂಗಳೂರು: ನೆರೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಆರೋಪಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಅವರ ನಿವಾಸ ಕಾವೇರಿಯಲ್ಲಿ ಇಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಷ್ಟೇ ಬಂದು ಹೋಗಿದ್ದಾರೆ. ಆದರೆ, ಪರಿಹಾರ ಇನ್ನೂ ಬಂದಿಲ್ಲ ಎಂದರು. ಬೇರೆ ರಾಜ್ಯಗಳಂತೆ ನಮ್ಮನ್ನು ಕಾಣಲಿ. ಆದರೆ, ನಮ್ಮ ರಾಜ್ಯಕ್ಕೆ ಪರಿಹಾರ ಕೊಡುವ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುವುದು ಬೇಡ ಎಂದು ಹೇಳಿದರು.

ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲಿ ಯಾವುದೇ ಕದ್ದಾಲಿಕೆ ಆಗಿಲ್ಲ. ನಮ್ಮ ಗಮನಕ್ಕೆ ಬಂದಿಲ್ಲ. ಇದು ಗೃಹ ಸಚಿವರ ವ್ಯಾಪ್ತಿಗೆ ಬರವುದೂ ಇಲ್ಲ. ಅನುಮಾನಗಳೇನಾದರೂ ಇದ್ದರೆ ತನಿಖೆ ನಡೆಸಬಹುದು ಎಂದರು. ಭಯೋತ್ಪಾದಕರು‌ ಮತ್ತು ಕ್ರಿಮಿನಲ್ ಗಳ ಫೋನ್ ಟ್ಯಾಪಿಂಗ್ ಮಾಡುತ್ತಾರೆ. ಅದು ಗೃಹ ಇಲಾಖೆ ಅನುಮತಿ ಪಡೆದು ಟ್ಯಾಪಿಂಗ್ ಮಾಡುತ್ತಾರೆ. ಇದು ನನಗೆ ಗೊತ್ತಿರುವ ವಿಚಾರ. ಇದು ಹೊರತುಪಡಿಸಿ ಅವರು ಆರೋಪ ಮಾಡುತ್ತಿದ್ದಾರೆ. ಬೇಕಿದ್ರೆ ತನಿಖೆ ನಡೆಸಲಿ ಎಂದು ಹೇಳಿದ್ದಾರೆ.

ಈ ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಕಡಿತ ಮಾಡಿದರೆ ಸುಮ್ಮನೆ ಇರಲ್ಲ. ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳು ಎಲ್ಲರಿಗೂ ಅನುಕೂಲವಾಗಿವೆ. ಅವರು ಸಿಎಂ ಆಗಿದ್ದಾಗ ಇಂತಹ ಸಂದರ್ಭಗಳು ಬಂದಾಗ ಯಶಸ್ವಿಯಾಗಿ ಹಣ ಹೊಂದಾಣಿಕೆ ಮಾಡಿದ್ದಾರೆ. ಈಗಲೂ ಸಿಎಂ ಅದನ್ನು ಮಾಡಬೇಕು. ನೆರೆ, ಬರ ಅಂತಾ ನೆಪ ಹೇಳಿ ಯೋಜನೆ ಕಡಿತ ಮಾಡುವುದು ಬೇಡ. ಕಡಿತ ಮಾಡಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Intro:ಬೆಂಗಳೂರು : ನೆರೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆರೋಪಿಸಿದ್ದಾರೆ. Body:ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಅವರ ನಿವಾಸ ಕಾವೇರಿಯಲ್ಲಿ ಇಂದು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೆರೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಷ್ಟೇ ಬಂದು ಹೋಗಿದ್ದಾರೆ. ಆದರೆ, ಪರಿಹಾರ ಇನ್ನೂ ಬಂದಿಲ್ಲ ಎಂದರು.
ಬೇರೆ ರಾಜ್ಯಗಳಂತೆ ನಮ್ಮನ್ನು ಕಾಣಲಿ. ಆದರೆ ನಮ್ಮ ರಾಜ್ಯಕ್ಕೆ
ಪರಿಹಾರ ಕೊಡುವ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುವುದು ಬೇಡ ಎಂದು ಹೇಳಿದರು.
ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಫೋನ್ ಕದ್ದಾಲಿಕೆ ಮಾಡಿದ್ದಾರೆ ಅಂತ ಕೆಲವರು ಆರೋಪ ಮಾಡುತ್ತಿದ್ದಾರೆ. ನಾನು ಗೃಹ ಸಚಿವನಾಗಿದ್ದೇ ಅವಧಿಯಲ್ಲಿ ಯಾವುದೇ ಕದ್ದಾಲಿಕೆ ಆಗಿಲ್ಲ. ನಮ್ಮ ಗಮನಕ್ಕೆ ಬಂದಿಲ್ಲ. ಇದು ಗೃಹ ಸಚಿವರ ವ್ಯಾಪ್ತಿಗೆ ಬರಲ್ಲ. ಆ ರೀತಿ ಅನುಮಾನ ಇದ್ದರೆ ತನಿಖೆ ನಡೆಸಬಹುದು ಎಂದರು.
ಭಯೋತ್ಪಾದಕರು‌ ಮತ್ತು ಕ್ರಿಮಿನಲ್ ಗಳ ಫೋನ್ ಟ್ಯಾಪಿಂಗ್ ಮಾಡುತ್ತಾರೆ. ಅದು ಗೃಹ ಇಲಾಖೆ ಅನುಮತಿ ಪಡೆದು ಟ್ಯಾಪಿಂಗ್ ಮಾಡುತ್ತಾರೆ. ಇದು ನನಗೆ ಗೊತ್ತಿರುವ ವಿಚಾರ.
ಇದು ಹೊರತುಪಡಿಸಿ ಅವರು ಆರೋಪ ಮಾಡುತ್ತಿದ್ರೆ ಬೇಕಿದ್ರೆ ತನಿಖೆ ನಡೆಸಲಿ ಎಂದು ಹೇಳಿದರು.
ಈ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಕಡಿತ ಮಾಡಿದರೆ ಸುಮ್ಮನೆ ಇರಲ್ಲ. ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳು ಎಲ್ಲರಿಗೂ ಅನುಕೂಲವಾಗಿವೆ. ಅವರು ಸಿಎಂ ಆಗಿದ್ದಾಗ ಇಂತಹ ಸಂದರ್ಭಗಳು ಬಂದಾಗ ಯಶಸ್ವಿಯಾಗಿ ಹಣ ಹೊಂದಾಣಿಕೆ ಮಾಡಿದ್ದಾರೆ. ಈಗಲೂ ಸಿಎಂ ಆದು ಮಾಡಲಿ. ನೆರೆ, ಬರ ಅಂತ ನೆಪ ಹೇಳಿ ಯೋಜನೆ ಕಡಿತ ಮಾಡುವುದು ಬೇಡ. ಕಡಿತ ಮಾಡಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್, ಈಗ ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಅವರ ಜತೆ ಮಾತನಾಡಿ ಅಂತಿಮ ಮಾಡುತ್ತಾರೆ. ವಿಪಕ್ಷ ನಾಯಕನ್ನು ಅಂತಿಮ ಮಾಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.Conclusion:

ABOUT THE AUTHOR

...view details