ಕರ್ನಾಟಕ

karnataka

ಕಳುವಾದ ಬೈಕ್​: ಹುಡುಕಿ ಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಿದ ಮಾಲೀಕ

By

Published : Oct 28, 2021, 8:45 PM IST

ಬೈಕ್​ ಕಳೆದುಕೊಂಡ ಮಾಲೀಕ ತಮ್ಮ ವಾಹನದ ಬಗ್ಗೆ ಮಾಹಿತಿ ನೀಡಿದರವರಿಗೆ ಹತ್ತು ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Bike owner announced 10 thousand cash prize who search his vehicle
ವಾಹನ ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಮಾಲೀಕ

ಚಿಂತಾಮಣಿ:ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೈಕ್​ ಕಳೆದುಕೊಂಡ ಮಾಲೀಕ ತಮ್ಮ ವಾಹನದ ಬಗ್ಗೆ ಮಾಹಿತಿ ನೀಡಿದವರಿಗೆ ಹತ್ತು ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಜೆಜೆಆರ್ ನಗರದ ನಿವಾಸಿ ಅನಾನ್‌ ಇಬ್ರಾಹಿಂ ಬಿನ್ ಆರಿಫುಲ್ಲಾ ಇಬ್ರಾಹಿಂ ಅ.18 ರಂದು ಉರುಸ್ ನಿಮಿತ್ತ ಮಾವನ ಮನೆಗೆ ತೆರಳಿದ್ದರು.

ಈ ವೇಳೆ ಮುರುಗಮಲ ಉರುಸ್ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಹಿಂದಿರುವ ವೇಳೆ ಅವರ ಬೈಕ್​ ಕಳ್ಳತನವಾಗಿತ್ತು. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿದ್ದಾರೆ.

ದೂರಿನ ಪ್ರತಿ

ಈ ನಡುವೆ ತಮ್ಮ ವಾಹನದ ಸಂಪೂರ್ಣ ವಿವರಗಳನ್ನು ನೀಡಿರುವ ಮಾಲೀಕ, ಬೈಕ್​ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಬಹುಮಾನ ನಿಡುವ ಭರವಸೆ ನೀಡಿದ್ದಾರೆ.

ವಾಹನದ ಮಾಹಿತಿ :

ಗಾಡಿ ಸಂಖ್ಯೆ: KA:02 JZ: 8362

ನೀಲಿ ಬಣ್ಣದ ಆಕ್ಸೆಸ್ ದ್ವಿಚಕ್ರ ವಾಹನ

ದೂರವಾಣಿ ಸಂಖ್ಯೆ: 9880895879

ABOUT THE AUTHOR

...view details