ಕರ್ನಾಟಕ

karnataka

ಕಾನೂನು ಸುವ್ಯವಸ್ಥೆ ಇಲ್ಲದ್ದೂ ಪರೇಶ್ ಮೇಸ್ತಾ ಸಾವಿಗೆ ಕಾರಣ: ಅಶ್ವತ್ಥ ನಾರಾಯಣ

By

Published : Oct 4, 2022, 7:37 PM IST

KN_BNG_04_
ಸಿ.ಎನ್​ ಅಶ್ವತ್ಥನಾರಾಯಣ ()

ಪರೇಶ್ ಮೇಸ್ತಾ ಸಾವಿನ ಸಾಕ್ಷ ನಾಶವಾಗಿದೆಯೋ ಏನೋ ಎಂಬುದರ ಬಗ್ಗೆ ನಮ್ಮ ಪಕ್ಷ ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಹಲ್ಲೆ ಸರ್ವೇ ಸಾಮಾನ್ಯವಾಗಿತ್ತು ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚಿನ ಉತ್ತೇಜನ ಕೊಡಲಾಗಿತ್ತು ಕಾನೂನು ಸುವ್ಯವಸ್ಥೆ ಇಲ್ಲದಿದ್ದ ವಿಚಾರ ಕೂಡಾ ಪರೇಶ್ ಮೇಸ್ತಾ ಸಾವಿಗೆ ಕಾರಣ ಆಗಿತ್ತು ಸಾಕ್ಷಿ ನಾಶ ಆಗಿದೆಯೋ ಏನೋ ಎಂಬುದನ್ನು ಕೂಡಾ ನೋಡುವ ಕೆಲಸ ನಮ್ಮ ಪಕ್ಷದಿಂದ ಆಗುತ್ತದೆ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್ ಮೇಸ್ತಾ ವರದಿ ವಿಚಾರ ಕುರಿತು ತನಿಖೆ ನಡೆದು ವರದಿ ಈಗ ತಾನೆ ಬಂದಿದೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ಪಡೆಯುತ್ತೇವೆ. ಪಕ್ಷದ ನಾಯಕರು ನಿಲುವು ತಿಳಿಸಿದ್ದಾರೆ. ಒಟ್ಟಾರೆ ಹಿಂದೂಗಳು, ನಮ್ಮ ಪಕ್ಷದ ಕಾರ್ಯಕರ್ತರ ಹತ್ಯೆ, ಹಲ್ಲೆ ಕಾಂಗ್ರೆಸ್ ಅವಧಿಯಲ್ಲಿ ಸರ್ವೇ ಸಾಮಾನ್ಯವಾಗಿತ್ತು.

ಸಾಕಷ್ಟು ಪ್ರಾಣ ಹಾನಿಯಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚಿನ ಕಾನೂನು ಸುವ್ಯವಸ್ಥೆ ಸರಿ ಇಲ್ಲದ ಕಾರಣವಾಗಿ ಹತ್ಯೆ ನಡೆದಿದೆ. ಪರೇಶ್ ಮೇಸ್ತಾ ಸಾವಿನ ತನಿಖೆ ನಡೆಯುತ್ತಲೇ ಇದೆ. ವರದಿ ಪೂರ್ಣ ಬರಲಿ ಎಂದರು. ಬಿಜೆಪಿ ಮುಖಕ್ಕೆ ಬಡಿದ ತಪರಾಕಿ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಬೇರೆ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಿದ್ದರಾಮಯ್ಯ ಜವಾಬ್ದಾರಿ ತೆಗೆದುಕೊಳ್ಳುತ್ತಾರಾ? ಹಾಗೊಂದು ವೇಳೆ ಸಿದ್ದರಾಮಯ್ಯ ಜವಾಬ್ದಾರಿ ತೆಗೆದುಕೊಂಡರೆ ಉಳಿದ ಚರ್ಚೆ ಮಾಡೋಣ ಎಂದರು.

ಆರ್ಥಿಕತೆಯಲ್ಲಿ ಇಂಗ್ಲೆಂಡ್​ಗಿಂತ ಮುಂದಿದ್ದೇವೆ:ದತ್ತಾತ್ರೇಯ ಹೊಸಬಾಳೆ ಅಸಮಾನತೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕೋವಿಡ್ ಬಂದ ನಂತರ ಸಮಾಜದಲ್ಲಿ ಹಲವು ಚಟುವಟಿಕೆ ನಿಂತಿದ್ದವು‌. ಆಗ ಬೇಡಿಕೆ ಕೊರತೆ, ನಿಷ್ಕ್ರಿಯತೆ ಆಗಿತ್ತು, ಬೇಡಿಕೆ ಹೆಚ್ಚಿತ್ತು. ಸವಾಲಿನ ಸಂದರ್ಭದಲ್ಲಿ ತಮ್ಮ ವಹಿವಾಟು ಮಾಡಿಕೊಡಲು ಅವಕಾಶ ಇತ್ತು. ಸವಾಲುಗಳನ್ನ ಬಗೆಹರಿಸೋ ಕ್ರಮ ಆಗಿದೆ.

ಆರ್ಥಿಕವಾಗಿ ಇಂಗ್ಲೆಂಡ್‌ಗಿಂತ ಮುಂದೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶ ಇದೆ. ಬೇರೆ ಬೇರೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಆದರೆ, ಭಾರತದಲ್ಲಿ ಆ ಪರಿಸ್ಥಿತಿ ಇಲ್ಲ. ಮುಂದಿನ ದಿನದಲ್ಲಿ ಹೆಚ್ಚಿನ ಉದ್ಯೋಗ ಸಿಗಲಿದೆ. ಆವಿಷ್ಕಾರ, ಮಾನವ ಸಂಪನ್ಮೂಲ ವಿಶ್ವಕ್ಕೆ ಕೊಡುವ ಕೆಲಸ ಆಗಲಿದೆ. ಈಕ್ವಾಲಿಟಿ ಅನ್ನೋದು ಕೂಡ ಕಾಣಬಹುದು.

ವ್ಯವಸಾಯದಲ್ಲಿ ಆದಾಯ ಹೆಚ್ಚಿಸುವುದು. ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲರನ್ನೂ ಸಮಾನವಾಗಿ ತರುವ ಕ್ರಮ ಆಗಲಿದೆ. ಮೊದಲೆಲ್ಲ ಐಟಿ ವಂಚನೆ ಆಗ್ತಿತ್ತು ಅದನ್ನ ತಡೆಯಲಾಗಿದೆ. ಎಲ್ಲವನ್ನೂ ಸರಿಪಡಿಸೋ ಮೂಲಕ ಸಮಸ್ಯೆ ಬಗೆಹರಿಸೋ ಕೆಲಸ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದೆ.

ಆದರೆ, ಕಾಂಗ್ರೆಸ್ ಪಕ್ಷ ಅಪ್ರಸ್ತುತವಾಗಿರೋ ಪಕ್ಷ. ಜನ ತಿರಸ್ಕರಾ ಮಾಡಿದ್ದಾರೆ‌. ಭಾರತ್ ತೋಡೋ ಮಾಡಿದ್ದಾರೆ. ಕಾಶ್ಮೀರ, ಅಸ್ಸಾಂ ಸೇರಿದಂತೆ ವಿವಿಧ ಭಾಗದಲ್ಲಿ ತೋಡೊ ಮಾಡಿದರು. ಸಮಾಜದ ವಿರುದ್ಧವಾಗಿ ನಿಲುವು ತೆಗೆದುಕೊಂಡರು. ಎಲ್ಲ ಕ್ಷೇತ್ರದಲ್ಲಿ ವಿಫಲವಾಗಿರೋ ಪಕ್ಷ ಕಾಂಗ್ರೆಸ್. ಭ್ರಷ್ಟಾಚಾರ ಹೆಚ್ಚಲು ಕಾರಣವಾದ ಪಕ್ಷ ಕಾಂಗ್ರೆಸ್. ಅಧಿಕಾರ ದುರುಪಯೋಗ ಮಾಡಿಕೊಂಡವರು ಇವರು. ಮುಂದೆ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದರು.

ಇದನ್ನೂ ಓದಿ:ಪರೇಶ್ ಮೇಸ್ತ ಕೇಸ್​​​​​ನಲ್ಲಿ ಸಿದ್ದರಾಮಯ್ಯ ಸರ್ಕಾರದಿಂದ ಸಾಕ್ಷಿನಾಶ : ರವಿಕುಮಾರ್

ABOUT THE AUTHOR

...view details