ಕರ್ನಾಟಕ

karnataka

ಬೆಂಗಳೂರು ಗಲಭೆಗೂ ರುದ್ರೇಶ್​ ಕೊಲೆಗೂ ಏನು ಸಂಬಂಧ? ಪ್ರಕರಣದ ಇನ್​ಸೈಡ್ ಸ್ಟೋರಿ

By

Published : Aug 17, 2020, 5:03 PM IST

ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣ ಇದೀಗ ಬೇರೆ ಮಜಲುಗಳನ್ನ ಪಡೆಯುತ್ತಿದೆ. 2016ರಲ್ಲಿ ನಡೆದ ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆ ಪ್ರಕರಣ, ಬಾಂಬೆ ನಂಟು, ಭಯೋತ್ಪಾದಕರ ಕೈವಾಡ ಹೀಗೆ... ಹಲವು ಮಜಲುಗಳನ್ನ ಪಡೆಯುತ್ತಿದ್ದು, ಪ್ರಕರಣದ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ.

An Inside Story of the Bengaluru riots
ಗಲಭೆಯ ಇನ್​ಸೈಡ್ ಸ್ಟೋರಿ

ಬೆಂಗಳೂರು:ಡಿ ಜೆ‌ ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರಕರಣ ಸದ್ಯ ಹಲವು ಮಜಲುಗಳನ್ನ ಪಡೆಯುತ್ತಿದೆ. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ 2016ರ ಶಿವಾಜಿನಗರದ ಕಾಮರಾಜ ರಸ್ತೆ ಬಳಿ ನಡೆದ ಆರ್​ಎಸ್​ಎಸ್​ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಕೂಡ ತಳಕು ಹಾಕಿಕೊಂಡಿದೆ.

ಪ್ರಕರಣದ ತನಿಖೆ ಇದೀಗ ಸಿಸಿಬಿಯ ಎಟಿಸಿ ಎಸಿಪಿ ವೇಣುಗೋಪಲ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಪ್ರಕರಣದ ಗಂಭೀರತೆ ಇನ್ನಷ್ಟು ಹೆಚ್ಚಾಗಿದೆ.

ಗಲಭೆಯ ಇನ್​ಸೈಡ್ ಸ್ಟೋರಿ

ರುದ್ರೇಶ್ ಕೊಲೆ ಪ್ರಕರಣದಲ್ಲಿ ಎಸ್​ಡಿಪಿಐ ಪಾತ್ರ ಇದ್ದುದರಿಂದ ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜಿಬುಲ್ಲಾ, ವಾಸೀಮ್ ಅಹ್ಮದ್ ಹಾಗೂ ಇರ್ಮಾಮ್ ಪಾಷಾ ಎಂಬ ಪ್ರಮುಖ ಆರೋಪಿಗಳನ್ನ ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಮೀಯುದ್ದೀನ್​ ಎಂಬಾತನ ಹೆಸರು ಸಹ ತಳಕು ಹಾಕಿಕೊಂಡಿತ್ತು. ನಂತರ ಸಮೀಯುದ್ದೀನ್ ಜಾಮೀನು ಪಡೆದು‌ ಹೊರಬಂದಿದ್ದ. ಆದರೆ, ಕೆಲ ಸಂಘಟನೆಗಳು‌ ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮದ‌‌‌ ಸ್ಥಳಕ್ಕೆ ತೆರಳಿ ಹಲವರ ಮೇಲೆ ಹಲ್ಲೆ ಮಾಡಲು ಪ್ರಯತ್ನಪಟ್ಟಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಗಲಭೆಯಲ್ಲಿ ಸುಟ್ಟು ಕರಕಲಾದ ಬೈಕ್​

ಮತ್ತೊಂದೆಡೆ ಸಮೀಯುದ್ದೀನ್​ಗೆ ಬಾಂಬೆ ನಂಟು ಇರುವ ಗುಮಾನಿ ಸಹ‌ ಇದೆ ಎನ್ನಲಾಗುತ್ತಿದೆ. ಬಾಂಬೆ ನಂಟು ಯಾಕೆ? ಡಿ ಜೆ ಹಳ್ಳಿ‌ ಮತ್ತು ಕೆ ಜಿ ಹಳ್ಳಿ ಘಟನೆಗೆ ಕುಮ್ಮಕ್ಕು ನೀಡಿದವರು ಯಾರು? ಅನ್ನೋದರ ಬಗ್ಗೆ ತನಿಖೆ ಚುರುಕುಗೊಂಡಿದೆ.

ಗಲಭೆಯಲ್ಲಿ ಸುಟ್ಟು ಕರಕಲಾದ ಪೊಲೀಸ್​ ವಾಹನ

ಎನ್​ಐಎ ಎಂಟ್ರಿ ಕೊಡುವ ಸಾಧ್ಯತೆ:

ರುದ್ರೇಶ್ ಕೊಲೆ ಪ್ರಕರಣವನ್ನ ಎನ್​ಐಎ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿಗಳಿಗೆ(ಮೊಹಮ್ಮದ್ ಸಾದಿಕ್, ಮೊಹಮ್ಮದ್ ಮುಜಿಬುಲ್ಲಾ, ವಾಸೀಮ್ ಅಹ್ಮದ್ ಹಾಗೂ ಇರ್ಮಾಮ್ ಪಾಷಾ) ಜಾಮೀನು ಸಿಗದ ರೀತಿಯಲ್ಲಿ ಮೇಲ್ಮನವಿ ಅರ್ಜಿಯನ್ನ ಹೈಕೋರ್ಟ್​ಗೆ ಹಾಕುತ್ತಲೇ ಇದೆ. ಸದ್ಯ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರಕರಣ ಕೂಡ ಗಂಭೀರತೆ ಪಡೆದಿದ್ದು, ಸಮೀಯುದ್ದೀನ್​ ಕೈವಾಡ ಇರುವ ಮೇರೆಗೆ ಎಟಿಎಸ್ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಯೋತ್ಪಾದಕರ ಕೈವಾಡವಿದೆ ಎಂಬ ಮಾಹಿತಿ ಕೂಡ ಲಭಿಸಿದ್ದು, ಎನ್​ಐಎ ಟೇಕ್ ಓವರ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ABOUT THE AUTHOR

...view details