ಕರ್ನಾಟಕ

karnataka

ಟಿವಿಎಸ್​ ವಾಹನಕ್ಕೆ ಓಮ್ನಿ ಡಿಕ್ಕಿ... ವ್ಯಕ್ತಿ ಸಾವು!

By

Published : Sep 6, 2020, 5:14 AM IST

ನಿಧಾನವಾಗಿ ಸಾಗುತ್ತಿದ್ದ ಟಿವಿಎಸ್​ ವಾಹನಕ್ಕೆ ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರ ವಲಯದಲ್ಲಿ ನಡೆದಿದೆ.

man died in road accident, man died in road accident in Bangalore, Bangalore road accident, Bangalore road accident news, ಅಪಘಾತದಲ್ಲಿ ವ್ಯಕ್ತಿ ಸಾವು, ಬೆಂಗಳೂರು ಅಪಘಾತದಲ್ಲಿ ವ್ಯಕ್ತಿ ಸಾವು, ಬೆಂಗಳೂರು ರಸ್ತೆ ಅಪಘಾತ, ಬೆಂಗಳೂರು ರಸ್ತೆ ಅಪಘಾತ ಸುದ್ದಿ,
ಟಿವಿಎಸ್​ ವಾಹನಕ್ಕೆ ಓಮ್ನಿ ಡಿಕ್ಕಿ

ಆನೇಕಲ್: ನಿಧಾನವಾಗಿ ಚಲಿಸುತ್ತಿದ್ದ ಟಿವಿಎಸ್​ಗೆ ವೇಗವಾಗಿ ಚಲಿಸುತ್ತಿದ್ದ ಮಾರುತಿ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಆನೇಕಲ್-ಅತ್ತಿಬೆಲೆ ಮುಖ್ಯ ರಸ್ತೆಯ ಜನಾಧನ್ ಶುಭಾ ಅಪಾರ್ಟ್​ಮೆಂಟ್​ ಮುಂಭಾಗದಲ್ಲಿ ಸಂಭವಿಸಿದೆ.

ಆನೇಕಲ್ ಕಡೆಯಿಂದ ವೇಗವಾಗಿ ಬಂದ ಮಾರುತಿ ವಾಹನ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಟಿವಿಎಸ್ ವಾಹನಕ್ಕೆ ಗುದ್ದಿದೆ. ಎಂ ಮೇಡಹಳ್ಳಿಯ ನಿವಾಸಿ ಮುನಿರಾಜು (48) ತಲೆಗೆ ತೀವ್ರಗಾಯವಾಗಿ ಆನೇಕಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details