ಕರ್ನಾಟಕ

karnataka

ದೇವನಹಳ್ಳಿಯಲ್ಲಿ ಬಸ್ ಹತ್ತಲು ನೂಕುನುಗ್ಗಲು: ಸಾಮಾಜಿಕ ಅಂತರ ಮರೆತು ಪ್ರಯಾಣ

By

Published : May 19, 2020, 10:16 AM IST

Updated : May 19, 2020, 10:44 AM IST

ಲಾಕ್​ಡೌನ್​ನಿಂದಾಗಿ ಕಳೆದ ಮೂರು ತಿಂಗಳಿಂದ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇಂದಿನಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಬೆಳಗ್ಗೆಯಿಂದಲೇ ಬಿಎಂಟಿಸಿ ಸೇವೆ ಆರಂಭವಾಗಿದೆ. ಇಂದು ದೇವನಹಳ್ಳಿಯಲ್ಲಿ ಬಸ್​​ ಹತ್ತಲು ಜನರು ಮುಗಿಬಿದ್ದಿದ್ದು ಕಂಡುಬಂದಿದೆ. ಪ್ರಯಾಣಿಕರು ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ.

Transport service started in Devanahalli
ಬಸ್ ಹತ್ತಲು ನೂಕುನುಗ್ಗಲು

ದೇವನಹಳ್ಳಿ:ರಾಜ್ಯಾದ್ಯಂತ ಇಂದಿನಿಂದ ಸಾರ್ವಜನಿಕ ಸಾರಿಗೆ ಆರಂಭವಾಗಿದ್ದು, ಬಸ್​ ನಿಲ್ದಾಣದಲ್ಲಿ ಬಸ್​ ಹತ್ತಲು ಜನರು ಮುಗಿಬಿದ್ದಿದ್ದಾರೆ.

ಬಸ್​ ನಿಲ್ದಾಣದಲ್ಲಿ ಬಸ್​ ಹತ್ತಲು ಜನರು ಮುಗಿಬಿದ್ದ ಜನತೆ

ಲಾಕ್​ಡೌನ್​ನಿಂದಾಗಿ ಕಳೆದ ಮೂರು ತಿಂಗಳಿಂದ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇಂದಿನಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಬೆಳಗ್ಗೆಯಿಂದಲೇ ಬಿಎಂಟಿಸಿ ಸೇವೆ ಆರಂಭವಾಗಿದೆ. ಬೆಂಗಳೂರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್​ ನಿಲ್ದಾಣಕ್ಕೆ ಆಮಿಸಿದ್ದ ದೃಶ್ಯಗಳು ಕಂಡು ಬಂದಿವೆ.

ಬಸ್​​ ಕಾಯುತ್ತ ನಿಂತಿರುವ ಜನತೆ

ಬಸ್ ಬಂದ ತಕ್ಷಣವೇ ಸೀಟ್ ಹಿಡಿಯಲು ನಾ ಮುಂದು, ತಾ ಮುಂದು ಎನ್ನುತ್ತ ಬಸ್ ಹತ್ತಲು ಪ್ರಯಾಣಿಕರು ಮುಂದಾದರು. ಈ ವೇಳೆ ನೂಕುನುಗ್ಗಲು ಉಂಟಾಗಿತ್ತು. ಅಲ್ಲದೆ ಬಸ್​ ಹತ್ತಿದ ನಂತರ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಕ್ಕ ಪಕ್ಕದಲ್ಲೇ ಕುಳಿತಿದ್ದರು. ಇದನ್ನು ಕಂಡ ಬಸ್​ ನಿರ್ವಾಹಕರು ಒಂದು ಸೀಟ್​​ನಲ್ಲಿ ಒಬ್ಬಬ್ಬರೇ ಕುಳಿತುಕೊಳ್ಳುವಂತೆ ಸೂಚಿಸಿದರು.

Last Updated :May 19, 2020, 10:44 AM IST

ABOUT THE AUTHOR

...view details