ಕರ್ನಾಟಕ

karnataka

ನಾವು ಅರ್ಹರೋ, ಅನರ್ಹರೋ ಸುಪ್ರೀಂ ತೀರ್ಮಾನಿಸುತ್ತೆ: ಎಂಟಿಬಿ

By

Published : Aug 28, 2019, 4:22 AM IST

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ನೀವು ಸಹ ನಮ್ಮ ಜೊತೆಯಲ್ಲಿ ಬಂದು ಪೂಜೆ ಮಾಡಿ ಅದಕ್ಕೆ ನಮ್ಮ ವಿರೋಧವಿಲ್ಲ. ನಾವು ಅರ್ಹರೋ ಅಥವಾ ಅನರ್ಹರೋ ಎಂಬುದನ್ನು ಸುಪ್ರೀಂ ಕೋರ್ಟ್​ ತೀರ್ಮಾನಿಸುತ್ತೆ ಎಂದು ಎಂಟಿಬಿ ನಾಗರಾಜ್​ ಕಿಡಿಕಾರಿದ್ದಾರೆ.

ಎಂಟಿಬಿ ನಾಗರಾಜ್​ ಕಿಡಿಎಂಟಿಬಿ ನಾಗರಾಜ್​ ಕಿಡಿ

ಹೊಸಕೋಟೆ: ಅಭಿವೃದ್ಧಿ ಕಾರ್ಯ ಮಾಡುವುದು ಸಂವಿಧಾನ ವಿರೋಧಿಯೇ? ನಾವು ಅರ್ಹರೋ ಅಥವಾ ಅನರ್ಹರೋ ಎಂಬುದನ್ನು ಸುಪ್ರೀಂ ಕೋರ್ಟ್​ ತೀರ್ಮಾನಿಸುತ್ತೆ ಎಂದು ಎಂಟಿಬಿ ನಾಗರಾಜ್​ ಟಾಂಗ್ ನೀಡಿದ್ದಾರೆ.

ಅಭಿವೃದ್ಧಿ ಕಾರ್ಯ ಮಾಡುವುದು ಸಂವಿಧಾನ ವಿರೋಧಿಯೇ?

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ನೀವು ಸಹ ನಮ್ಮ ಜೊತೆಯಲ್ಲಿ ಬಂದು ಪೂಜೆ ಮಾಡಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅಭಿವೃದ್ಧಿ ಸಹಿಸದೇ ಕೇವಲ ರಾಜಕೀಯ ಮಾಡಿದರೆ ಒಳಿತಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರು ಉತ್ತರ ನೀಡಲಿದ್ದಾರೆ ಎಂದರು.

ಜನ ಕಾರ್ಯಕ್ರಮಕ್ಕೆ ಕರೆಯುತ್ತಾರೆ ನಾನು ಹೋಗುತ್ತೇನೆ. ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲಿಸುತ್ತೇನೆ. ಅದನ್ನು ಸಂವಿಧಾನ ವಿರೋಧಿ ಎನ್ನುತ್ತಾರೆ. ಕಾಮಗಾರಿ ಪರಿಶೀಲನೆ ಮಾಡುವುದು ತಪ್ಪಾ? ಅಭಿವೃದ್ಧಿ ಕಾರ್ಯ ಮಾಡುವುದು ಸಂವಿಧಾನ ವಿರೋಧಿಯಾ ಎಂದು ಎಂಟಿಬಿ ಪ್ರಶ್ನಿಸಿದರು.

Intro:ಹೊಸಕೋಟೆ :

ತಾಲ್ಲೂಕಿನ ಅಭಿವೃದ್ದಿ ಸಹಿಸದ ಜನಪ್ರತಿನಿಧಿಗಳು.

ಇವರ ಕಾಲದಲ್ಲಿ ಯಾವುದೇ ಅಭಿವೃದ್ದಿ ಕಾರಗಳನ್ನು ಮಾಡಿಲ್ಲ . ಈಗ ಹೊಸಕೋಟೆ ನಗರದಲ್ಲಿ ಹೆಚ್ಚಿನ ಅಭಿವೃದ್ದಿ ಕಾವ್ಯಗಳನ್ನು ಮಾಡಿ ಪಟ್ಟಣವನ್ನು ಅಭಿವೃದ್ದಿ ದಾರಿಯತ್ತ ಕೊಂಡೊಯ್ಯುತ್ತಿರುವ ಕಾರಣ ಇದನ್ನು ಸಹಿಸಲಾರದೆ ಈ ರೀತಿಯಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ . ಟಿ . ಬಿ . ನಾಗರಾಜ್ ಹೇಳಿದರು . ಹೊಸಕೋಟೆ ತಾಲೂಕಿನಲ್ಲಿ ನಡೆಸುತ್ತಿರುವ ಕೆಲಸ ಕಾರ್ಯನಿರ್ವಹಿಸುವ ಬಗ್ಗೆ ಮಾಜಿ ಸಚಿವ ಎಂ . ಟಿ . ಬಿ . ನಾಗರಾಜ್ ವಿರುದ್ಧ ನೀಡುವ ದೂರಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ಅಭಿವೃದ್ದಿಯಲ್ಲಿ ರಾಜಕೀಯ ಬೇಡ,ನೀವು ಸಹ ಬಂದು ನಮ್ಮ ಜೊತೆಯಲ್ಲಿ ಪೂಜೆ ಮಾಡುವ ಆಸೆ ಇದ್ದರೆ ಬಂದು ಮಾಡಿ ಅದಕ್ಕೆ ನಮ್ಮ ವಿರೋಧವಿಲ್ಲ . ಆದರೆ ನೀವು ಕೇವಲ ಅಭಿವೃದ್ಧಿ ಸಹಿಸದೇ ಕೇವಲ ರಾಜಕೀಯ ಮಾಡಿದರೆ ಒಳಿತಲ್ಲ . ಇಷ್ಟು ದಿನಗಳ ಕಾಲ ಸುಮಾರು 30 ವರ್ಷಗಳು ಅಧಿಕಾರದಲ್ಲಿದ್ದು ತಾಲೂಕಿನಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದವರು . ಆದರೆ ನಿಮ್ಮ ಕಾಲದಲ್ಲಿ ನೀವು ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೀರ ಇದಕ್ಕೆ ಯಾರೂ ಅಡ್ಡಿ ಪಡಿಸಿಲ್ಲ ಆದರೆ ಈಗ ಅಭಿವೃದ್ಧಿ ವಿಚಾರದಲ್ಲಿ ಈರೀತಿಯಾಗಿ ಅಡ್ಡಿಪಡಿಸುವುದು
ಒಳಿತಲ್ಲ . Body:ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರ ಉತ್ತರ ನೀಡಲಿದ್ದಾರೆ . ಹೊಸಕೋಟೆ ಪಟ್ಟಣದಲ್ಲಿ ನಡೆಸುತ್ತಿರುವ ಕೆಲಸ ಕಾರ್ಯಗಳನ್ನು ಸಹಿಸಲಾಗದೆ ಈ ರೀತಿಯಾಗಿ ಮಾಡುತ್ತಿದ್ದಾರೆ . ನನ್ನ ವಿರುದ್ಧ ಈ ರೀತಿಯಾಗಿ ದೂರು ನೀಡಲು ಅವರು ಏನು ಎಂ. ಪಿ.ನ ಅಥವಾ ಎಂ.ಎಲ್.ಎ. ನಾ ಅವರು ಯಾರು ಕೇಳಲು , ಈ ಹಿಂದೆ ಬಚ್ಚೇಗೌಡರು ಅಧಿಕಾರಾವಧಿಯಲ್ಲಿದ್ದಾಗ ತಾಲೂಕಿಗೆ ಇಷ್ಟೊಂದು ಅಭಿವೃದ್ಧಿ ಮಾಡಬೇಕಿತ್ತು . ಆದರೆ ಆಗ ಯಾಕೆ ಮಾಡಲಿಲ್ಲ . ಈ ರೀತಿಯಾಗಿ ಈಗ ಮಾಡುತ್ತಿರುವ ಕೆಲಸ ಕಾವ್ಯಗಳನ್ನು ಸಹಿಸದೆ ವಿರೋಧ ಮಾಡುವುದು ಎಷ್ಟರ ಮಟ್ಟಿಗೆ ಸರಿ , ಜನಪ್ರತಿನಿಧಿಗಳು ಜನ ಸೇವೆ ಮಾಡುವಲ್ಲಿ ರಾಜಕೀಯ ಮಾಡಬಾರದು . Conclusion:ಇಷ್ಟು ದಿನಗಳ ಹೊಸಕೋಟೆ ತಾಲೂಕು ಇವರಿಗೆ ಕಾಣಿಸಲಿಲ್ಲ ಇಷ್ಟು ದಿನಗಳ ಕಾಲ ತಾಲೂಕಿನ ಅಭಿವೃದ್ದಿ ಯಾಕೆ ಮಾಡಲಿಲ್ಲ . ಈಗಾ ನೂರಾರು ಕೋಟಿ ಅನುದಾನವನ್ನು ತಾಲೂಕಿಗೆ ತಂದು ಅಭಿವೃದ್ದಿ ಮಾಡಿದ್ದೇನೆ . ನಾನು ಈಗ ಏನು ನನ್ನ ಸ್ವಂತ ಕೆಲಸ ಮಾಡುತ್ತಿಲ್ಲ . ಸಾರ್ವಜನಿಕರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ .ಆದರೆ ಈ ರೀತಿಯಾದ ಅಭಿವೃದ್ದಿಗಳನ್ನು ಸಹಿಸಲಾಗದೆ ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ . ಇದು ಅವರಿಗೆ ಸಂಜಸವಲ್ಲ ಎಂದು ಶರತ್‌ ಬಚ್ಚೇಗೌಡ ಅವರು ನೀಡಿರುವ ದೂರಿಗೆ ಕಾರವಾಗಿ ಉತ್ತರ ಕೊಟ್ಟಿದ್ದಾರೆ.

ABOUT THE AUTHOR

...view details