ಕರ್ನಾಟಕ

karnataka

ಸಚಿವ ಸಂಪುಟ ವಿಸ್ತರಣೆ ವಿಚಾರ... ಎಂಟಿಬಿ ನಾಗರಾಜ್ ಹೇಳಿದ್ದೇನು?

By

Published : Jan 25, 2020, 1:55 AM IST

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚಿಸಲು 17 ಮಂದಿ ಸೇರಿ ಸಭೆ ಸೇರುತ್ತೇವೆ. ಸಭೆ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಂಟಿಬಿ ನಾಗರಾಜ್​​ ತಿಳಿಸಿದ್ದಾರೆ.

mtb nagraj reaction on minister post
ಎಂಟಿಬಿ ನಾಗರಾಜ್ ಪ್ರತಿಕ್ರಿಯೆ

ಹೊಸಕೋಟೆ(ಬೆಂಗಳೂರು): ಉಪಚುನಾವಣೆಯಲ್ಲಿ ಸೋತವರ ಬಗ್ಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಬಗ್ಗೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬ ಸಿಎಂ ಯಡಿಯೂರಪ್ಪನವರ ಹೇಳಿಕೆಗೆ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಎಂಟಿಬಿ ನಾಗರಾಜ್ ಪ್ರತಿಕ್ರಿಯೆ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ. ಇಂದು 17 ಮಂದಿ ಸೇರಿ ಸಭೆ ಸೇರುತ್ತೇವೆ, ಸಭೆ ನಂತರ ಮುಂದಿನ ತೀರ್ಮಾನ ತೆಗೆದುಕೊಂಡು ತದನಂತರ ಸಿಎಂ ಭೇಟಿ ಮಾಡುತ್ತೇವೆ ಎಂದು ತಿಳಿಸಿದ್ರು.

ಯಡಿಯೂರಪ್ಪನವರ ತೀರ್ಮಾನಕ್ಕೆ ನಾನು ಬದ್ದ, ಅವರ ಬಳಿ ‌ಮಾತನಾಡಿಯೇ ನಾವು ರಾಜೀನಾಮೆ ನೀಡಿದ್ದು, ಅವರ ತಿರ್ಮಾನಕ್ಕೆ ನಮ್ಮ ಸಹಮತ ಇದೆ ಎಂದರು. ಇದರ ಮಧ್ಯೆ ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಹಾಗೂ ಹೆಚ್​ ವಿಶ್ವನಾಥ್​ಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನುತ್ತಿವೆ ಮೂಲಗಳು.

Intro:ಹೊಸಕೋಟೆ:

ಸಚಿವ ಸಂಪುಟ ವಿಸ್ತರಣೆ ವಿಚಾರ ಎಂಟಿಬಿ ನಾಗರಾಜ್ ಹೇಳಿದ್ದೇನು..?

ಉಪ ಚುನಾವಣೆಯಲ್ಲಿ ಸೋತವರ ಬಗ್ಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಬಗ್ಗೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬ ಸಿಎಂ ಯಡಿಯೂರಪ್ಪ ನವರ ಹೇಳಿಕೆಗೆ ಎಂಟಿಬಿ ನಾಗರಾಜ್ ಅವರು ಮಾತನಾಡಿ
ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ. ನಾಳೆ 17 ಮಂದಿ ಸೇರಿ ಸಭೆ ಸೇರುತ್ತೇವೆ, ಸಭೆ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ,
ನಂತರ ಸಿಎಂ ರನ್ನು‌ ಭೇಟಿ ಮಾಡುತ್ತೆವೆ ಎಂದರು.Body:ಯಡಿಯೂರಪ್ಪ ತೀರ್ಮಾನಕ್ಕೆ ನಾನು ಬದ್ದ, ಯಡಿಯೂರಪ್ಪ ನವರ ಬಳಿ ‌ಮಾತನಾಡಿಯೇ ನಾವು ರಾಜಿನಾಮೆ ನೀಡಿದ್ದು, ಅವರ ತಿರ್ಮಾನಕ್ಕೆ ನಮ್ಮ‌ ಸಹಮತ ಇದೆ ಎಂದರು.
Conclusion:ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್​, ಎಚ್​ ವಿಶ್ವನಾಥ್​ಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನುತ್ತಿವೆ ಮೂಲಗಳು. ಎಂಎಲ್​ಸಿ ಆಗಿ ಸಚಿವರಾಗಬಹುದು ಎನ್ನುವ ಕನಸನ್ನು ಇವರು ಕಂಡಿದ್ದರು. ಆದರೆ, ಈ ಕನಸು ನನಸಾಗುವುದು ಅನುಮಾನ ಎನ್ನಲಾಗಿದೆ

ABOUT THE AUTHOR

...view details