ಕರ್ನಾಟಕ

karnataka

ಬೈಕ್ ಸವಾರರನ್ನು ಬಚಾವ್ ಮಾಡಲು ಹೋಗಿ ಮರಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್

By

Published : Nov 23, 2022, 1:11 PM IST

Updated : Nov 23, 2022, 2:11 PM IST

ನೆಲಮಂಗಲ ತಾಲೂಕಿನ ಕಲ್ಗಟ್ಟ ಗ್ರಾಮದ ಬಳಿ ಕೆಎಸ್​ಆರ್​ಟಿಸಿ ಬಸ್​ವೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಾಗಳಾಗಿವೆ.

ksrtc bus hits a tree
ಕೆಎಸ್​ಆರ್​ಟಿಸಿ ಬಸ್

ನೆಲಮಂಗಲ: ರಸ್ತೆಗೆ ಅಡ್ಡವಾಗಿ ಬಂದ ಬೈಕ್ ಸವಾರರನ್ನು ಬಚಾವ್ ಮಾಡಲು ಹೋಗಿ ಕೆಎಸ್​ಆರ್​ಟಿಸಿ ಬಸ್​ವೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ನೆಲಮಂಗಲ ತಾಲೂಕಿನ ಕಲ್ಗಟ್ಟ ಗ್ರಾಮದ ಬಳಿ ನಡೆದಿದೆ. ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೋಟದಿಂದ ಮೇವು ತೆಗೆದುಕೊಂಡು ಬರುತ್ತಿದ್ದ ಬೈಕ್ ಹಠಾತ್ ರಸ್ತೆಗೆ ಅಡ್ಡವಾಗಿ ಬಂದಿದೆ. ಬೈಕ್ ಸವಾರನ ಪ್ರಾಣ ಉಳಿಸಲು ಚಾಲಕ ಯತ್ನಿಸಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್​ನಲ್ಲಿ ಬೆಂಗಳೂರಿನ ಶಾಲಾ ಕಾಲೇಜ್​ಗಳಿಗೆ ಹೊರಟಿದ್ದ ವಿದ್ಯಾರ್ಥಿಗಳಿದ್ದರು.

ಮರಕ್ಕೆ ಗುದ್ದಿದ ಕೆಎಸ್​ಆರ್​ಟಿಸಿ ಬಸ್

ಇದನ್ನೂ ಓದಿ:ರಾಯಚೂರು: ನಡು ರಸ್ತೆ ಮೇಲೆ ಧಗಧಗನೆ ಹೊತ್ತಿ ಉರಿದ ಕಾರು

ಬೇಗೂರು-ನಿಡವಂದ ರಸ್ತೆ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯು ಅಪಘಾತಗಳಿಗೆ ಕಾರಣವಾಗಿವೆ. ರಸ್ತೆಯ ಅಗಲೀಕರಣ ನಡೆಯುತ್ತಿದ್ದರೂ ಕೂಡ ರಸ್ತೆ ಬದಿಯ ಮರ ಮತ್ತು ವಿದ್ಯುತ್​ ಕಂಬಗಳನ್ನು ತೆರವು ಮಾಡಿಲ್ಲ. ರಸ್ತೆ ಪಕ್ಕದಲ್ಲಿ ಹಳ್ಳ ಗುಂಡಿಗಳೇ ತುಂಬಿದ್ದು, ಈಗಾಗಲೇ 12 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated :Nov 23, 2022, 2:11 PM IST

ABOUT THE AUTHOR

...view details