ಕರ್ನಾಟಕ

karnataka

ಸಿಎಂ ಸುಖ್ವಿಂದರ್​ ಸಿಂಗ್ ಸುಖು ಭೇಟಿ ಮಾಡಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ

By ETV Bharat Karnataka Team

Published : Oct 25, 2023, 7:14 AM IST

ಭಾರತ ತಂಡದ ಬ್ಯಾಟರ್​ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಅವರನ್ನು ಭೇಟಿ ಮಾಡಿದರು.

Etv virat-kohli-meets-himachal-cm-sukhvinder-singh-sukhu-in-dharamshala
ಸಿಎಂ ಸುಖ್ವಿಂದರ್​ ಸಿಂಗ್ ಸುಖು ಭೇಟಿ ಮಾಡಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ

ಧರ್ಮಶಾಲಾ(ಹಿಮಾಚಲ ಪ್ರದೇಶ): ಭಾರತ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರು ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಎಕ್ಸ್​ನಲ್ಲಿ ಸುಖು ಅವರು ವಿರಾಟ್​ ಕೊಹ್ಲಿ ಜೊತೆ ಮಾತುಕತೆ ನಡೆಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಿಎಂ ಸುಖು ಎಕ್ಸ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ, ಭಾರತ ಕ್ರಿಕೆಟ್​ ತಂಡದ ಲೆಜೆಂಡರಿ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರನ್ನು ಧರ್ಮಶಾಲಾದಲ್ಲಿ ಭೇಟಿ ಮಾಡಿದೆ. ಈ ವೇಳೆ ಕ್ರಿಕೆಟ್​ ಬಗ್ಗೆ ಚರ್ಚೆ ನಡೆಸಿದೆವು. ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಇನ್ನಿಂಗ್ಸ್​ ಆಡಿದ ವಿರಾಟ್​ ಕೊಹ್ಲಿ ಅವರಿಗೆ ಅಭಿನಂದನೆಗಳು. ಈ ಸಂಬಂಧ ರಾಜ್ಯದ ಜನರ ಪರವಾಗಿ ಭಾರತದ ವಿಶ್ವಕಪ್​ ಗೆಲುವಿನ ಅಭಿಯಾನಕ್ಕೆ ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭ ಕಾಂಗ್ರೆಸ್​ ನಾಯಕರಾದ ರಾಜೀವ್​ ಶುಕ್ಲಾ, ತೇಜಿಂದರ್​ ಬಿಟ್ಟು,ಧರ್ಮಶಾಲಾ ಶಾಸಕ ಸುಧೀರ್​ ಶರ್ಮಾ, ಸಿಎಂ ರಾಜಕೀಯ ಸಲಹೆಗಾರ ಸುನಿಲ್​ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿನ್ಮಯಾನಂದ ಆಶ್ರಮಕ್ಕೆ ಭೇಟಿ ನೀಡಿದ ಕೊಹ್ಲಿ : ಕಳೆದ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಎರಡು ದಿನಗಳ ಬಿಡುವಿನಲ್ಲಿ ಭಾರತ ತಂಡದ ಆಟಗಾರರು ಧರ್ಮಶಾಲಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ನಡುವೆ ವಿರಾಟ್​ ಕೊಹ್ಲಿ ಸಿದ್ಭಾದಿಯಲ್ಲಿರುವ ಸ್ವಾಮಿ ಚಿನ್ಮಯಾನಂದರ ಚಿನ್ಮಯ್ ತಪೋವನ್​ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಕೊಹ್ಲಿ ಆಶ್ರಮದಲ್ಲಿ ಕೆಲಕಾಲ ಕಳೆದರು. ಸಿಧ್​ಬರಿಯನ್ನು ಸಿದ್ಧರ ತಪೋವನ ಎಂದು ಪರಿಗಣಿಸಲಾಗಿದೆ. ಇಲ್ಲಿಯೇ ಚಿನ್ಮಯಾನಂದರ ಆಶ್ರಮವಿದೆ. ಈ ಆಶ್ರಮದಲ್ಲಿ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆ. ಈ ಆಶ್ರಮದಿಂದ ಧವಳಧರ್​ ಪರ್ವತದ ಸುಂದರ ನೋಟ ಕಾಣಸಿಗುತ್ತದೆ.

ಭಾರತ ತಂಡವು ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ವಿರೋಚಿತ ಗೆಲುವು ಸಾಧಿಸಿದೆ. ಸದ್ಯ ಭಾರತ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ಭಾರತ ಎಲ್ಲ ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದಿತ್ಯವಾರ ಇಲ್ಲಿನ ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದಲ್ಲಿ 104 ಎಸೆತದಲ್ಲಿ 95 ರನ್​ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದಕ್ಕೂ ಮುನ್ನ ವಿರಾಟ್​ ಬಾಂಗ್ಲಾ ವಿರುದ್ಧ ತನ್ನ ಏಕದಿನ ಪಂದ್ಯಾಟದ 48ನೇ ಶತಕವನ್ನು ಪೂರೈಸಿದ್ದರು. ಸಚಿನ್​ ದಾಖಲೆ ಸರಿಗಟ್ಟಲು ವಿರಾಟ್​ ಕೊಹ್ಲಿಗೆ ಒಂದು ಶತಕದ ಅವಶ್ಯಕತೆ ಇದೆ. ವಿಶ್ವಕಪ್​ನಲ್ಲಿ ವಿರಾಟ್​​ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ತಾವು ಆಡಿರುವ ಪಂದ್ಯಗಳಿಂದ 354ರನ್​ ಗಳಿಸಿ ರನ್​ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಆಡಿದ ಐದು ಇನ್ನಿಂಗ್ಸ್​ಗಳಲ್ಲಿ ಒಂದು ಶತಕ ಮತ್ತು 3 ಅರ್ಧ ಶತಕ ಹೊಂದಿದೆ. ಇಂದು ಭಾರತ ತಂಡವು ಲಖನೌಗೆ ಪ್ರಯಾಣ ಬೆಳೆಸಲಿದೆ.​

ಇದನ್ನೂ ಓದಿ :ಡಿಕಾಕ್, ಕ್ಲಾಸೆನ್‌ ಅಬ್ಬರಕ್ಕೆ ಮಣಿದ ಬಾಂಗ್ಲಾ; ಮಹಮದುಲ್ಲಾ ಏಕಾಂಗಿ ಹೋರಾಟ ವ್ಯರ್ಥ; ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ದ.ಆಫ್ರಿಕಾ

ABOUT THE AUTHOR

...view details