ಕರ್ನಾಟಕ

karnataka

ಭಾರತದ ಬ್ಯಾಟಿಂಗ್​ ಬಲ ಮೆಚ್ಚಿದ ಆಫ್ರಿಕಾ ನಾಯಕ.. ತವರಿನಲ್ಲಿ ಸೋಲಿಸುವುದು ಕಷ್ಟ: ತೆಂಬಾ ಬವುಮಾ

By

Published : Sep 27, 2022, 5:52 PM IST

ದಕ್ಷಿಣ ಆಫ್ರಿಕಾ ಮತ್ತು ಭಾರತ ಮಧ್ಯೆ ನಾಳೆಯಿಂದ 3 ಪಂದ್ಯಗಳ ಟಿ-20 ಸರಣಿ ಆರಂಭವಾಗಲಿದೆ. ಕೇರಳದ ತಿರುವನಂತಪುರಂನಲ್ಲಿ ಮೊದಲ ಪಂದ್ಯ ನಡೆಯಲಿದೆ.

temba-bavuma-on-indian-team
ಭಾರತದ ಬ್ಯಾಟಿಂಗ್​ ಬಲ ಮೆಚ್ಚಿದ ಆಫ್ರಿಕಾ ನಾಯಕ

ತಿರುವನಂತಪುರಂ, ಕೇರಳ:ಟಿ20 ವಿಶ್ವಕಪ್​ ಸಿದ್ಧತೆಯಲ್ಲಿರುವ ಭಾರತ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ನಡೆದ 3 ಪಂದ್ಯಗಳ ಸರಣಿಯನ್ನು 2-1 ರಿಂದ ವಿಕ್ರಮ ಸಾಧಿಸಿದ ಬಳಿಕ ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಶುರುವಾಗುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡ ಕೇರಳದ ತಿರುವನಂತಪುರಂಗೆ ಬಂದಿಳಿದಿದೆ. ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ ಬಲಿಷ್ಠ ಭಾರತವನ್ನು ಅದರದ್ದೇ ನೆಲದಲ್ಲಿ ಎದುರಿಸಲಿದೆ. ಹೀಗಾಗಿ ನಾಳೆ ನಡೆಯುವ ಪಂದ್ಯಕ್ಕಾಗಿ ಅಭ್ಯಾಸವನ್ನೂ ಆರಂಭಿಸಿದೆ.

ಇನ್ನು ತಿರುವನಂತಪುರಂಗೆ ಬಂದಿಳಿದ ಹರಿಣಗಳ ತಂಡದ ನಾಯಕ ತೆಂಬಾ ಬವುಮಾ ಭಾರತದ ಬ್ಯಾಟಿಂಗ್​, ಬೌಲಿಂಗ್​ ಪಡೆಯ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ. ಭಾರತವನ್ನು ಅದರದ್ದೇ ನೆಲದಲ್ಲಿ ಸೋಲಿಸುವುದು ಕಷ್ಟ. ಅದರಲ್ಲೂ ಭಾರತ ವಿಶ್ವಶ್ರೇಷ್ಠ ಬ್ಯಾಟರ್​ಗಳನ್ನು ಹೊಂದಿದೆ ಎಂದು ಹೊಗಳಿದ್ದಾರೆ.

ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬವುಮಾ, "ಜಸ್ಪ್ರೀತ್ ಬೂಮ್ರಾ ಅವರಂತಹ ಭಾರತೀಯ ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪವರ್‌ಪ್ಲೇ ವೇಳೆ ಯಾರ್ಕರ್​ ಸ್ಪೆಷಲಿಸ್ಟ್​ಗಳನ್ನು ಎದುರಿಸುವುದು ಯಾವುದೇ ಬ್ಯಾಟ್ಸ್​ಮನ್​ಗೆ ಕಷ್ಟವೇ ಸರಿ. ಭಾರತೀಯ ಬ್ಯಾಟಿಂಗ್ ಲೈನ್‌ಅಪ್ ಭೇದಿಸುವುದು ತುಂಬಾ ಕಠಿಣ. ಆರಂಭಿಕ ಓವರ್‌ಗಳಲ್ಲಿ ಅವರನ್ನು ಕಟ್ಟಿ ಹಾಕುವುದು ಸುಲಭ ಸಾಧ್ಯವಲ್ಲ ಎಂದೆಲ್ಲಾ ಮೆಚ್ಚುಗೆಯ ಮಾತನ್ನಾಡಿದರು.

ತಿರುವನಂತಪುರಂ ಮೈದಾನ ಬೌಲರ್​ಗಳಿಗೂ ನೆರವಾಗಲಿದೆ. ಮುಂಬರುವ ಟಿ20 ವಿಶ್ವಕಪ್​ಗೆ ತಂಡ ಉತ್ತಮವಾಗಿ ಸಿದ್ಧತೆ ನಡೆಸುತ್ತಿದೆ. ಕಳೆದ ಸರಣಿಯಲ್ಲಿ ನಮ್ಮ ತಂಡ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿತ್ತು. ಈ ಬಾರಿಯೂ ಅದೇ ಗತ್ತನ್ನು ಮುಂದುವರಿಸಲಾಗುವುದು ಎಂದು ತಂಡದ ಬಗ್ಗೆ ಭರವಸೆ ಮಾತನ್ನಾಡಿದರು.

ಓದಿ:India and South Africa T20 Match: ತಿರುವನಂತಪುರಂಗೆ ಬಂದಿಳಿದ ಉಭಯ ತಂಡಗಳ ಆಟಗಾರರು

ABOUT THE AUTHOR

...view details