ಕರ್ನಾಟಕ

karnataka

ಸ್ಟಾರ್​ ವಾರ್​​ಗೆ ಟ್ವಿಸ್ಟ್​ ಕೊಟ್ಟ​ ಕಿಚ್ಚ ಸುದೀಪ್​ ಟ್ವೀಟ್​: ಏನಿದೆ ಗೊತ್ತಾ ಆ ಟ್ವೀಟ್​ನಲ್ಲಿ...?

By

Published : Sep 21, 2019, 12:28 PM IST

ಇದೀಗ ಮತ್ತೆ ಟ್ವೀಟ್​ ಮಾಡಿರುವ ಕಿಚ್ಚ ಸುದೀಪ್​​​, ಮೇಲೊಬ್ಬ ಇದ್ದಾನೆ ಅನ್ನೋದು ಒಂದಡೆ, ನ್ಯಾಯ ಅನ್ನೋದು ಇನ್ನೊಂದೆಡೆ,  ತಪ್ಪು ಮಾಡಿದವರು ಈ ಎರಡು ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮ, ಚಿತ್ರರಂಗದಲ್ಲಿರುವ ನನ್ನ ಗೆಳೆಯರು ಹಾಗೂ ನನ್ನ ಎಲ್ಲಾ  ಸ್ನೇಹಿತರು ತಮ್ಮ ದನಿಯೆತ್ತಿದಕ್ಕೆ ಧನ್ಯವಾದಗಳು ಎಂದಿರುವುದು ಕುತೂಹಲ ಕೆರಳಿಸಿದೆ.

ಕಿಚ್ಚ ಸುದೀಪ್​​​

ಸ್ಟಾರ್​ ವಾರ್​ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸ್ಟಾರ್​ ನಟರು ಮಾಡುತ್ತಿರುವ ಟ್ವೀಟ್​​ಗಳು ಕೂಡ ಅಭಿಮಾನಿಗಳಲ್ಲಿ ಒಂದು ರೀತಿಯ ಆತಂಕ ಹಾಗೂ ಆಶ್ಚರ್ಯಗಳನ್ನು ಮೂಡಿಸುತ್ತಿವೆ.

ಹೌದು ಈ ಹಿಂದೆ ದರ್ಶನ್​ ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರ ಬೇಡಿ ಎಂದು ವಾರ್ನಿಂಗ್​ ಮಾಡಿದ್ದರು. ಆದ್ರೆ ಯಾರಿಗೆ ಎಂದು ಪ್ರಸ್ತಾಪ ಮಾಡಿರಲಿಲ್ಲ.

ನಿನ್ನೆ ಸುದೀಪ್​ ಕೂಡ ಒಂದು ಟ್ವೀಟ್​ ಮಾಡಿದ್ದು, ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದು ಹೇಳಿದ್ದರು. ಇದೀಗ ಮತ್ತು ಟ್ವೀಟ್​ ಮಾಡಿರುವ ಕಿಚ್ಚ ಸುದೀಪ್​​​, ಮೇಲೊಬ್ಬ ಇದ್ದಾನೆ ಅನ್ನೋದು ಒಂದಡೆ, ನ್ಯಾಯ ಅನ್ನೋದು ಇನ್ನೊಂದೆಡೆ, ತಪ್ಪು ಮಾಡಿದವರು ಈ ಎರಡು ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ... 😊🙏 ಮಾಧ್ಯಮ, ಚಿತ್ರರಂಗದಲ್ಲಿರುವ ನನ್ನ ಗೆಳೆಯರು ಹಾಗೂ ನನ್ನ ಎಲ್ಲ ಸ್ನೇಹಿತರು ತಮ್ಮ ದನಿಯೆತ್ತಿದಕ್ಕೆ ಧನ್ಯವಾದಗಳು ಎಂದಿರುವುದು ಕುತೂಹಲ ಕೆರಳಿಸಿದೆ.

Intro:Body:Conclusion:

ABOUT THE AUTHOR

...view details