ಕರ್ನಾಟಕ

karnataka

ಲಂಡನ್​​ನಲ್ಲಿ ಬಸವಣ್ಣ ಪ್ರತಿಮೆಗೆ ವಿಜಯ್ ಪ್ರಕಾಶ್ ನಮನ: ವಚನ ಗಾಯನ

By

Published : Oct 16, 2022, 8:30 PM IST

Updated : Oct 16, 2022, 9:11 PM IST

ಲಂಡನ್​​ನಲ್ಲಿನ ವಿಶ್ವಜ್ಯೋತಿ ಬಸವವೇಶ್ವರರ ಪ್ರತಿಮೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಗೌರವ ಸಲ್ಲಿಸಿದರು.

singer-vijay-prakash-tribute-to-basaveshwara-statue-in-london
ಲಂಡನ್​​ನಲ್ಲಿ ಬಸವಣ್ಣ ಪ್ರತಿಮೆಗೆ ವಿಜಯ್ ಪ್ರಕಾಶ್ ನಮನ: ಪ್ರಸಿದ್ಧ ವಚನ ಗಾಯನ

ಲಂಡನ್​ (ಇಂಗ್ಲೆಡ್​): ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಲಂಡನ್​​ನಲ್ಲಿ ವಿಶ್ವಜ್ಯೋತಿ ಬಸವವೇಶ್ವರರ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದಾರೆ. ಈ ವೇಳೆ ಬಸವಣ್ಣನವರ ವಚನವನ್ನು ವಿಜಯ್ ಪ್ರಕಾಶ್ ವಾಚಿಸಿದ್ದಾರೆ.

ಪತ್ನಿ ಸಮೇತವಾಗಿ ಬಸವಣ್ಣನವರ ಪ್ರತಿಮೆಗೆ ಗೌರವ ಅರ್ಪಿಸಿದ ವಿಜಯ್​ ಪ್ರಕಾಶ್, ಸಮಾಜ ಸುಧಾರಣೆಗೆ ಬಸವಣ್ಣನವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಜೊತೆಗೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ಎಂಬ ಪ್ರಸಿದ್ಧ ವಚನವನ್ನು ಅವರು ಹಾಡಿದರು.

ಲಂಡನ್​​ನಲ್ಲಿ ಬಸವಣ್ಣ ಪ್ರತಿಮೆಗೆ ವಿಜಯ್ ಪ್ರಕಾಶ್ ನಮನ

ಭಾರತೀಯರು ಮತ್ತು ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರು ಭಾರತ ಮತ್ತು ಕರ್ನಾಟಕದ ಆದರ್ಶ ಪುರುಷ. ಅವರ ಪ್ರತಿಮೆಯನ್ನು ಬ್ರಿಟನ್ ಸಂಸತ್ತಿನ ಮುಂದೆ ನೋಡುವುದೇ ಪ್ರತಿಯೊಬ್ಬ ಭಾರತೀಯ ಹಾಗೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಪ್ರತಿಮೆ ಸ್ಥಾಪಿಸಲು ಪರಿಶ್ರಮ ಪಟ್ಟ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್​ ಕಾರ್ಯವನ್ನು ವಿಜಯ್​ ಪ್ರಕಾಶ್ ಶ್ಲಾಘಿಸಿದರು. ಬ್ರಿಟನ್​ನಲ್ಲಿ ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯನ್ನು ಹರಡುತ್ತಿರುವ ಬ್ರಿಟಿಷ್ ಕನ್ನಡ ಸಮುದಾಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಲಂಡನ್​​ನಲ್ಲಿ ಬಸವಣ್ಣ ಪ್ರತಿಮೆಗೆ ವಿಜಯ್ ಪ್ರಕಾಶ್ ನಮನ

ಈ ಕಾರ್ಯಕ್ರಮವನ್ನು ಬಸವ ಸಮಿತಿ ಯುಕೆ ಮತ್ತು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್​ನಿಂದ ಆಯೋಜಿಸಲಾಗಿತ್ತು. 2015ರ ನವೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣವರ ಐತಿಹಾಸಿಕ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಇದನ್ನೂ ಓದಿ:ಕಿತ್ತೂರು ಉತ್ಸವದ ವೀರಜ್ಯೋತಿಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ

Last Updated :Oct 16, 2022, 9:11 PM IST

ABOUT THE AUTHOR

...view details