ಕರ್ನಾಟಕ

karnataka

ರಾಮಮಂದಿರದ ಸಮೀಪ ಪ್ಲಾಟ್ ಖರೀದಿಸಿದ ಬಚ್ಚನ್

By ETV Bharat Karnataka Team

Published : Jan 15, 2024, 3:48 PM IST

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕೂ ಮುಂಚಿತವಾಗಿ, ಅಮಿತಾಬ್ ಬಚ್ಚನ್ ನಗರದಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಹೈದರಾಬಾದ್:ಇದೇ ತಿಂಗಳ (ಜನವರಿ) 22 ರಂದು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಇದಕ್ಕೂ ಕೆಲವೇ ದಿನಗಳ ಮೊದಲು ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಇಲ್ಲಿ ಸುಮಾರು 930 ಚದರ ಮೀಟರ್ (10,000 ಚದರ ಅಡಿ) ಭೂಮಿಯನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಬಹಿರಂಗಪಡಿಸಿದ್ದಾರೆ. ಮಂಬೈ ಮೂಲದ ಅಭಿನಂದನ್ ಲೋಧಾ (HoABL) ಅವರ ಡೆವಲಪರ್ ಹೋಮ್​ನಿಂದ ಪ್ಲಾಟ್ ಖರೀದಿಸಿದ್ದಾರೆ. ಇದರ ಮೌಲ್ಯ 14.50 ಕೋಟಿ.

ಈ ಜಾಗಕ್ಕೆ ಭಗವಾನ್ ರಾಮ ಮಂದಿರದಿಂದ ಕೇವಲ 15 ನಿಮಿಷ ಮತ್ತು ಹೊಸ ಶ್ರೀ ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30 ನಿಮಿಷದ ಪ್ರಯಾಣ ಸಾಕು. ವ್ಯಾಪಾರ ಪ್ರತಿನಿಧಿಯ ಪ್ರಕಾರ, HoABL ಸರಯೂ ನದಿಯ ಉದ್ದಕ್ಕೂ 'ದಿ ಸರಯು' ಎಂದು ಕರೆಯಲ್ಪಡುವ 7 ಸ್ಟಾರ್ ರೇಟೆಡ್ 51 ಎಕರೆ ಮಿಶ್ರ ಬಳಕೆಯ ಉನ್ನತ ಮಟ್ಟದ ಸಂಕೀರ್ಣವನ್ನು ಅಭಿವೃದ್ಧಿಪಡಿಸುತ್ತಿದೆ. "ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ನಗರವಾದ ಅಯೋಧ್ಯೆಯ ಸರಯೂಗಾಗಿ ಅಭಿನಂದನ್ ಲೋಧಾ ಅವರ ಮನೆಯೊಂದಿಗೆ ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇನೆ. ಅಯೋಧ್ಯೆಯು ವಯಸ್ಸಿಗೆ ಮೀರಿದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭೌಗೋಳಿಕ ಗಡಿಗಳನ್ನು ದಾಟುವ ಭಾವನಾತ್ಮಕ ಬಂಧವನ್ನು ಸೃಷ್ಟಿಸಿದೆ'' ಎಂದು ಬಚ್ಚನ್ ಅವರು ಹೇಳಿದ್ದಾರೆ.

"ಇದು ಅಯೋಧ್ಯೆಯ ಆತ್ಮಕ್ಕೆ ಹೃತ್ಪೂರ್ವಕ ಪ್ರಯಾಣದ ಆರಂಭವಾಗಿದೆ. ಅಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯು ಸಾಮರಸ್ಯದಿಂದ ನನ್ನೊಂದಿಗೆ ಆಳವಾಗಿ ಅನುರುಣಿಸುವ ಭಾವನಾತ್ಮಕ ವಸ್ತ್ರವನ್ನು ಹೆಣೆಯುತ್ತದೆ. ವಿಶ್ವದ ಆಧ್ಯಾತ್ಮಿಕ ರಾಜಧಾನಿಯಲ್ಲಿ ನನ್ನ ಮನೆಯನ್ನು ನಿರ್ಮಿಸಲು ನಾನು ಉತ್ಸುಕನಾಗಿದ್ದೇನೆ" ಎಂದು ಬಚ್ಚನ್ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಅವರು ಪ್ರಯಾಗ್​ರಾಜ್​ (ಹಿಂದೆ ಅಲಹಾಬಾದ್) ನಲ್ಲಿ ಹುಟ್ಟಿ, ಅಲ್ಲಿಯೇ ಶಿಕ್ಷಣ ಪಡೆದುಕೊಂಡಿದ್ದರು.

ಜನವರಿ 22 ರಂದು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು ಹಲವಾರು ಗಣ್ಯರನ್ನು ಆಹ್ವಾನಿಸಲಾಗಿದೆ. ರಜನಿಕಾಂತ್, ಚಿರಂಜೀವಿ, ಅಕ್ಷಯ್ ಕುಮಾರ್, ಆಲಿಯಾ ಭಟ್, ರಣಬೀರ್ ಕಪೂರ್, ರಣದೀಪ್ ಹೂಡಾ, ಲಿನ್ ಲೈಶ್ರಾಮ್, ಜಾಕಿ ಶ್ರಾಫ್, ಟೈಗರ್ ಶ್ರಾಫ್, ಕಂಗನಾ ರನೌತ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್, ಸಂಜಯ್ ಲೀಲಾ ಬನ್ಸಾಲಿ, ಸನ್ನಿ ಡಿಯೋಲ್, ರಾಜ್‌ಕುಮಾರ್ ಹಿರಾನಿ, ಆಯುಷ್ಮಾನ್, ಎ ಕೆ ಮಧುರ್ ಭಂಡಾರ್ಕರ್, ಪ್ರಭಾಸ್, ಮೋಹನ್ ಲಾಲ್, ಧನುಷ್, ಯಶ್ ಮತ್ತು ರಿಷಬ್ ಶೆಟ್ಟಿ ಹೀಗೆ ಪಟ್ಟಿ ಮುಂದುವರಿಯುತ್ತದೆ. ರಾಮಾಯಣದಲ್ಲಿ ಭಗವಾನ್ ರಾಮ ಮತ್ತು ಸೀತೆಯ ಪಾತ್ರ ನಿರ್ವಹಿಸಿದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖಾಲಿಯಾ ಅವರಿಗೂ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ:ಮಾಲ್ಡೀವ್ಸ್‌ ಟಿಕೆಟ್‌ ರದ್ದುಗೊಳಿಸಿ, ಲಕ್ಷದ್ವೀಪ ಪ್ರವಾಸ ಕೈಗೊಂಡ ನಟ ನಾಗಾರ್ಜುನ

ABOUT THE AUTHOR

...view details