ಕರ್ನಾಟಕ

karnataka

ಸಂಬಂಧದಲ್ಲಿ ಬಿರುಕು​​ ವದಂತಿಗೆ ತೆರೆ: ಅಭಿಷೇಕ್ ಟೀಮ್​​​​​ಗೆ ಸಪೋರ್ಟ್ ಮಾಡಲು ಬಂದ ಐಶ್ವರ್ಯಾ ರೈ

By ETV Bharat Karnataka Team

Published : Jan 7, 2024, 4:54 PM IST

ಶನಿವಾರ ಸಂಜೆ ನಡೆದ ಜೈಪುರ್ ಪಿಂಕ್ ಪ್ಯಾಂಥರ್ಸ್‌ vs ಯು ಮುಂಬಾ ಪಂದ್ಯದಲ್ಲಿ ಬಚ್ಚನ್​ ಫ್ಯಾಮಿಲಿ ಉಪಸ್ಥಿತರಿದ್ದರು.

Bachchan family
ಬಚ್ಚನ್​ ಫ್ಯಾಮಿಲಿ

ಬಚ್ಚನ್ ಕುಟುಂಬ ಬಾಲಿವುಡ್​ನ ಪವರ್​ಫುಲ್​​ ಕುಟುಂಬವಾಗಿ ಗುರುತಿಸಿಕೊಂಡಿದೆ. ಪರಸ್ಪರರು ಪ್ರತಿಭೆ, ಕೆಲಸಗಳಿಗೆ ಬೆಂಬಲ ಸೂಚಿಸುತ್ತ ಬಂದಿದ್ದಾರೆ. ಈಗಾಗಲೇ ಇಂತಹ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಶನಿವಾರ ರಾತ್ರಿ ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಯಾ ಬಚ್ಚನ್ ಹೊರತುಪಡಿಸಿ ಇಡೀ ಬಚ್ಚನ್ ಕುಟುಂಬ ಹಾಜರಾಗಿತ್ತು. ಮುಂಬೈನಲ್ಲಿ ನಡೆದ ಈ ಕಬಡ್ಡಿ ಪಂದ್ಯದಲ್ಲಿ ಐಶ್ವರ್ಯಾ ರೈ ಬಚ್ಚನ್, ಅಮಿತಾಭ್​​ ಬಚ್ಚನ್, ಅಭಿಷೇಕ್​​ ಬಚ್ಚನ್​​ ಮತ್ತು ಆರಾಧ್ಯ ಬಚ್ಚನ್ ಉಪಸ್ಥಿತರಿದ್ದರು.

ನಟ ಅಭಿಷೇಕ್ ಬಚ್ಚನ್ ನೇತೃತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್‌ ತಂಡಕ್ಕೆ ಹುರಿದುಂಬಿಸುವ ಸಲುವಾಗಿ ಇವರೆಲ್ಲರೂ ಆಗಮಿಸಿದ್ದರು. ಈಗಾಗಲೇ ಹಾಲಿ ಚಾಂಪಿಯನ್ ಆಗಿದ್ದ ಈ ತಂಡ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 10ರ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಸೋಲಿಸಿತು. ಸ್ಟಾರ್ ಸ್ಪೋರ್ಟ್ಸ್ ಐಶ್ವರ್ಯಾ ರೈ, ಅಮಿತಾಭ್​​ ಬಚ್ಚನ್ ಮತ್ತು ಆರಾಧ್ಯ ಅವರ ಉತ್ಸಾಹಭರಿತ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಬಚ್ಚನ್ ಫ್ಯಾಮಿಲಿ ಮೆಂಬರ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಶರ್ಟ್ಸ್ ಧರಿಸಿ ಬಂದಿದ್ದರು. ಯು ಮುಂಬಾ ತಂಡದ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ ತೀವ್ರ ಪೈಪೋಟಿ ನಡೆಸಿತ್ತು. ಯು ಮುಂಬಾ ತಂಡವನ್ನು ಸೋಲಿಸುತ್ತಿದ್ದಂತೆ, ಬಚ್ಚನ್​ ಫ್ಯಾಮಿಲಿ ಎದ್ದು ಚಪ್ಪಾಳೆ ತಟ್ಟುವುದನ್ನು ವೈರಲ್​ ವಿಡಿಯೋಗಳಲ್ಲಿ ಕಾಣಬಹುದು. ಅಭಿಷೇಕ್ ಬಚ್ಚನ್​​ ಮತ್ತು ಬಂಟಿ ವಾಲಿಯಾ ಅವರು ಜೈಪುರ ಪಿಂಕ್ ಪ್ಯಾಂಥರ್ಸ್‌ನ ಮಾಲೀಕರು. ಈ ತಂಡ 2014ರಿಂದ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿತು. ನಿನ್ನೆಯ ಮ್ಯಾಚ್​ನಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಜೈಪುರ್ ಪಿಂಕ್ ಪ್ಯಾಂಥರ್ಸ್‌ ಗೆಲುವಿನ ನಗೆ ಬೀರಿತು.

ಇದನ್ನೂ ಓದಿ:ಮಾದಕ ವಸ್ತು ನಿಷೇಧ ಕುರಿತು ಜಾಗೃತಿಗೆ ಸಪ್ತಮಿ ಗೌಡ ಸಾಥ್

2023ರ ವರ್ಷ ಬಚ್ಚನ್ ಕುಟುಂಬಕ್ಕೆ ಬಹಳ ವಿಷೇಷವಾಗಿತ್ತು. ಅಮಿತಾಭ್ ಅವರ ಮೊಮ್ಮಗ ಅಗಸ್ತ್ಯ ನಂದಾ, ಜೋಯಾ ಅಖ್ತರ್ ಅವರ ದಿ ಆರ್ಚೀಸ್‌ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂಬೈನಲ್ಲಿ ನಡೆದ ಗ್ರ್ಯಾಂಡ್ ಪ್ರೀಮಿಯರ್ ಈವೆಂಡ್​ನಲ್ಲಿ ಇಡೀ ಬಚ್ಚನ್‌ ಕುಟುಂಬ ಆಗಮಿಸಿ ಎಲ್ಲರ ಗಮನ ಸೆಳೆದಿತ್ತು. ಬಳಿಕ ಮೊಮ್ಮಗಳು ಆರಾಧ್ಯ ಅವರ ಶಾಲೆಯ ವಾರ್ಷಿಕ ಸಮಾರಂಭದಲ್ಲಿಯೂ ಜಯಾ ಬಚ್ಚನ್​ ಹೊರತುಪಡಿಸಿ ಎಲ್ಲರೂ ಕಾಣಿಸಿಕೊಂಡರು. ಆರಾಧ್ಯ ಅವರ ಪ್ರತಿಭೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಮೊಮ್ಮಗಳ ಬಗ್ಗೆ ಅಮಿತಾಭ್​​ ಬಚ್ಚನ್​​ ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗೆ ತಮ್ಮ ಕುಟುಂಬಸ್ಥರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಪರಸ್ಪರ ಬೆಂಬಲ ಸೂಚಿಸುತ್ತಾರೆ.

ಇದನ್ನೂ ಓದಿ:'ಅನಿಮಲ್'ನಂತಹ ಸಿನಿಮಾಗಳ ಯಶಸ್ಸು 'ಅಪಾಯಕಾರಿ': ಜಾವೇದ್ ಅಖ್ತರ್

ಅಭಿಷೇಕ್​​ ಐಶ್ವರ್ಯಾ ನಡುವೆ ಬಿರುಕು ಮೂಡಿದೆ. ಡಿವೋರ್ಸ್​ ಪಡೆಯಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಸದ್ದು ಮಾಡುತ್ತಿದೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ ಬಚ್ಚನ್​ ಕುಟುಂಬಸ್ಥರು. ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆಯುತ್ತಾ ಬಂದಿದ್ದಾರೆ.

ABOUT THE AUTHOR

...view details