ಕರ್ನಾಟಕ

karnataka

ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ: 25 ಲಕ್ಷ ರೂ. ಧೋಖಾ

By

Published : Nov 23, 2022, 5:00 PM IST

ಮಹಿಳೆಯ ಖಾತೆಗಳ ಮೂಲಕ ಮಿತಿಮೀರಿದ ವಹಿವಾಟು ನಡೆಯಲಾರಂಭಿಸಿದ್ದರಿಂದ ಪಾತಕಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಇಮೇಲ್ ಹಾಗೂ ಮೊಬೈಲ್ ಮೂಲಕ ನೋಟಿಸ್ ಕಳುಹಿಸಿದ್ದಾಳೆ. ಸಂದೇಶದಲ್ಲಿ ಮೂರು ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದಾದ ಬಳಿಕ ಮಹಿಳೆಯ ಪತಿಗೆ ಎಲ್ಲವೂ ಗೊತ್ತಾಗಿದೆ. ಮಹಿಳೆ ತನಗಾದ ಸಂಕಟವನ್ನು ಆತನ ಬಳಿ ಹೇಳಿಕೊಂಡಿದ್ದು, ನಂತರ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Fraud on name of Dawood Ibrahim in Patna
fraud-from-patna-women-on-name-of-underworld-don-dawood-ibrahim

ಪಾಟ್ನಾ (ಬಿಹಾರ): ಮಧ್ಯವಯಸ್ಕ ಮಹಿಳೆಯೊಬ್ಬಳಿಗೆ ಅಂಡರ್​ವರ್ಲ್ಡ್​ ಡಾನ್ ದಾವೂದ್ ಇಬ್ರಾಹಿಂ ಹೆಸರಲ್ಲಿ ಬೆದರಿಕೆ ಹಾಕಿ 20 ರಿಂದ 25 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ರಾಜಧಾನಿ ಪಾಟ್ನಾದ ಕಂಕಡಬಾಗ್ ಪ್ರದೇಶದ ನ್ಯೂ ಚಿತ್ರಗುಪ್ತ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಮಹಿಳೆಯ ಖಾತೆಯಿಂದ ಕ್ರಿಮಿನಲ್‌ಗಳು ಮೂರು ಕೋಟಿ ವಹಿವಾಟು ನಡೆಸಿದ್ದು, ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಮೂಲಕ ವಹಿವಾಟು ನಡೆಸಲಾಗಿದೆ.

ಮಹಿಳೆಯ ಹೇಳಿಕೆಯ ಮೇರೆಗೆ ಪಾಟ್ನಾದ ಪತ್ರಕಾರ್ ನಗರ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಸೇರಿದಂತೆ ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರಕಾರ್ ನಗರ ಪೊಲೀಸರ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಎಫ್‌ಐಆರ್ ನಂತರ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಅಷ್ಟಕ್ಕೂ ಆರೋಪಿ ಮಹಿಳೆಯನ್ನು ಟ್ರ್ಯಾಕ್ ಮಾಡಿದ್ದು ಹೇಗೆ? ಆರೋಪಿಯು ಆಕೆಗೆ ಹೇಗೆ ಪರಿಚಯ? ಇದು ವಂಚನೆ ಪ್ರಕರಣವಾ? ಮಹಿಳೆ ಬೇರೆ ಗ್ಯಾಂಗ್‌ಗೆ ಸೇರಿದವಳಾ ಹೇಗೆ ಎಂಬೆಲ್ಲ ವಿಷಯಗಳ ಬಗ್ಗೆ ಈಗ ತನಿಖೆ ನಡೆಯುತ್ತಿದೆ.

7-8 ವರ್ಷಗಳಿಂದ ಮಹಿಳೆಗೆ ವಂಚನೆ:ಪತ್ರಕಾರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಹಣ ಲಪಟಾಯಿಸಿದ ಆರೋಪಿಗಳು ಕಳೆದ 5 ರಿಂದ 7 ವರ್ಷಗಳಿಂದ ಮಹಿಳೆಗೆ ವಂಚಿಸುತ್ತಿದ್ದರು. ಪ್ರತಿ ಬಾರಿಯೂ ಆಕೆಯ ಮಕ್ಕಳು ಮತ್ತು ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ತನ್ನ ಮಕ್ಕಳು ಮುಂಬೈ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಆಕೆಯ ಬ್ಯಾಂಕ್​ ಖಾತೆಯನ್ನು ಬಳಸುತ್ತಿದ್ದ ಖದೀಮರು, ಮಹಿಳೆಗೆ ಆಕೆಯ ಮಕ್ಕಳು ಈಗ ಯಾವ ಬಟ್ಟೆ ಧರಿಸಿದ್ದಾರೆ ಮತ್ತು ಅವರು ಯಾವ ಸಮಯದಲ್ಲಿ ಎಲ್ಲಿದ್ದಾರೆ ಎಂದು ಹೇಳುತ್ತಿದ್ದರು. ಇದಾದ ನಂತರ ಆಕೆ ಮಕ್ಕಳನ್ನು ವಿಚಾರಿಸಿದಾಗ ಖದೀಮರು ಹೇಳಿದ್ದು ಸತ್ಯ ಎಂದು ಗೊತ್ತಾಗುತ್ತಿತ್ತು. ಇದರಿಂದ ಮಹಿಳೆಯಲ್ಲಿ ಭಯ ಹುಟ್ಟಿಕೊಂಡಿತ್ತು. ಆದರೆ, ಮಕ್ಕಳು ಮತ್ತು ಕುಟುಂಬದ ಸುರಕ್ಷತೆಯ ಕಾರಣ ಆಕೆ ಕುಟುಂಬ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಂಡಿಲ್ಲ ಎನ್ನಲಾಗಿದೆ.

ಮಹಿಳೆಯ ಖಾತೆಯಿಂದ ಮಿತಿಮೀರಿದ ವಹಿವಾಟು:ಕೊನೆಗೆ ಮಹಿಳೆಯ ಖಾತೆಗಳ ಮೂಲಕ ಮಿತಿಮೀರಿದ ವಹಿವಾಟು ನಡೆಯಲಾರಂಭಿಸಿದ್ದರಿಂದ ಪಾತಕಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಇಮೇಲ್ ಹಾಗೂ ಮೊಬೈಲ್ ಮೂಲಕ ನೋಟಿಸ್ ಕಳುಹಿಸಿದ್ದಾಳೆ. ಸಂದೇಶದಲ್ಲಿ ಮೂರು ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದಾದ ಬಳಿಕ ಮಹಿಳೆಯ ಪತಿಗೆ ಎಲ್ಲವೂ ಗೊತ್ತಾಗಿದೆ. ಮಹಿಳೆ ತನಗಾದ ಸಂಕಟವನ್ನು ಆತನ ಬಳಿ ಹೇಳಿಕೊಂಡಿದ್ದು, ನಂತರ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

19 ಆರೋಪಿಗಳನ್ನ ಹೆಸರಿಸಿರುವ ಮಹಿಳೆ:ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಈ ಪ್ರಕರಣದಲ್ಲಿ ಮಹಿಳೆ ತನಗೆ ಕರೆ ಮಾಡುತ್ತಿದ್ದ 19 ಆರೋಪಿಗಳನ್ನು ಹೆಸರಿಸಿದ್ದಾಳೆ. ಇದರೊಂದಿಗೆ ಎಫ್‌ಐಆರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗಿದೆ. ಮಹಿಳೆಯ ಪ್ರಕಾರ, ಹಣ ಪಡೆದ ಆರೋಪಿಗಳು ತಮಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿದ್ದಾರಂತೆ.

ಅಲ್ಲದೆ ಮನೆಯ ಮೇಲೆ ದಾಳಿ ಮಾಡಿ ಪತಿಯನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮಹಿಳೆ ಖದೀಮರ ಒತ್ತಾಯಕ್ಕೆ ಮಣಿದು ಐಸಿಐಸಿಐ ಬ್ಯಾಂಕ್‌ನಲ್ಲಿ ಎರಡು ಖಾತೆಗಳನ್ನು ತೆರೆದಿದ್ದು, ಅಪರಾಧಿಗಳು ಮಹಿಳೆಗೆ ಪಾಸ್‌ವರ್ಡ್ ಮತ್ತು ಒಟಿಪಿ ಕೇಳುತ್ತಿದ್ದರು. ಪ್ರಕರಣದ ಬಗ್ಗೆ ದೂರು ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪತ್ರಕಾರ್ ನಗರ ಪೊಲೀಸ್ ಠಾಣೆ ಪ್ರಭಾರಿ ಮನೋರ್ಜನ್ ಭಾರ್ತಿ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ: 'ಅಫ್ತಾಬ್ ನನ್ನ ಕೊಲೆ ಮಾಡ್ತಾನೆ, ಕಾಪಾಡಿ..' 2020ರಲ್ಲಿ ಶ್ರದ್ಧಾ ಬರೆದ ಪತ್ರ ಇಲ್ಲಿದೆ ನೋಡಿ

ABOUT THE AUTHOR

...view details