ಕರ್ನಾಟಕ

karnataka

ತುಮಕೂರಿನ ದೇವಸ್ಥಾನದಲ್ಲಿ ಬೆತ್ತಲಾಗಿ ಮಾನಸಿಕ ಅಸ್ವಸ್ಥನಿಂದ ದಾಂಧಲೆ..

By

Published : Jan 15, 2022, 1:17 PM IST

A Mentally ill person messed the things of tumkur temple
ತುಮಕೂರಿನ ದೇವಸ್ಥಾನದಲ್ಲಿ ಬೆತ್ತಲಾಗಿ ಮಾನಸಿಕ ಅಸ್ವಸ್ಥನಿಂದ ದಾಂಧಲೆ ()

ದೇವರ ಮೈಮೇಲಿದ್ದ ಹೂವಿನ ಹಾರಗಳನ್ನು ಕೊರಳಿಗೆ ಸುತ್ತಿಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಈತನನ್ನು ಕಿಬ್ಬನಹಳ್ಳಿ ಪೊಲೀಸ್ ರಾಣೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ತುಮಕೂರು: ಮಾನಸಿಕ ಅಸ್ವಸ್ಥನೊಬ್ಬ ಬೆತ್ತಲಾಗಿ ಸಿಕ್ಕ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ದಾಂಧಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಪೌರಾಣಿಕ ಹಿನ್ನೆಲೆಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ. ದಾಂಧಲೆ ನಡೆಸಿರುವಾತನನ್ನು ದೇವೇಗೌಡ ಹೆಸರಿನ ಮಾನಸಿಕ ಅಸ್ವಸ್ಥ ಎಂದು ಗುರುತಿಸಲಾಗಿದೆ.

ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿದ್ದ ನೀರು ತುಂಬಿಸುವ ಪಾತ್ರೆಗಳನ್ನು ಹಾಗೂ ಕುರ್ಚಿಗಳನ್ನು ಎಸೆದು ಪುಡಿ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಈತ ದೇಗುಲದ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಚಕ್ರದ ವಾಹನಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ.

ದೇವಸ್ಥಾನದಲ್ಲಿ ಬೆತ್ತಲಾಗಿ ಮಾನಸಿಕ ಅಸ್ವಸ್ಥನಿಂದ ದಾಂಧಲೆ

ಇದನ್ನೂ ಓದಿ:ಅಪಘಾತ ಪ್ರಕರಣಗಳ ಹಾಟ್ ಸ್ಪಾಟ್ ಆದ ಸಿಲಿಕಾನ್ ಸಿಟಿ : ಅಂಕಿ-ಅಂಶಗಳಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ದೇವರ ಮೈಮೇಲಿದ್ದ ಹೂವಿನ ಹಾರಗಳನ್ನು ಕೊರಳಿಗೆ ಸುತ್ತಿಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಈತನನ್ನು ಕಿಬ್ಬನಹಳ್ಳಿ ಪೊಲೀಸ್ ರಾಣೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details