ಕರ್ನಾಟಕ

karnataka

ಲಂಚ ಪಡೆಯವಾಗ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಜೂನಿಯರ್‌‌ ಇಂಜಿನಿಯರ್

By

Published : May 11, 2022, 12:04 PM IST

ಮೈಸೂರು ಮಹಾನಗರ ಪಾಲಿಕೆ ಜೂನಿಯರ್ ಇಂಜಿನಿಯರೊಬ್ಬರು ಲಂಚ ಪಡೆಯವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ..

Mysore
ಗುರು ಸಿದ್ದಯ್ಯ-ಮೈಸೂರು ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್​​

ಮೈಸೂರು :ಲಂಚ ಸ್ವೀಕರಿಸುತ್ತಿದ್ದ ಪಾಲಿಕೆಯ ಜೂನಿಯರ್ ಇಂಜಿನಿಯರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 4ರ ಜೂನಿಯರ್ ಇಂಜಿನಿಯರ್ ಗುರು ಸಿದ್ದಯ್ಯ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಮೈಸೂರಿನ ಗೋಕುಲಂ ನಿವಾಸಿಯೊಬ್ಬರ ಮನೆ ನಿರ್ಮಾಣ ಮಾಡಲು ನಕ್ಷೆ ನೀಡುವ ಸಂಬಂಧ ಗುರುಸಿದ್ದಯ್ಯ ಲಂಚ ಕೇಳಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details