ಕರ್ನಾಟಕ

karnataka

ವಾಮಾಚಾರ ಮಾಡಿ ಮದುವೆ ಮಾಡಿಕೊಂಡ ಆರೋಪ: ಕಾರಿನಲ್ಲಿ ಕೂರಿಸಿಕೊಂಡು ಯುವಕನಿಗೆ ಥಳಿತ

By

Published : Oct 21, 2021, 6:54 AM IST

ಶಹಾಬಜಾರ್ ತಾಂಡಾ ನಿವಾಸಿ ಖಾಸಿಪತಿ ಎಂಬಾತ ತಮ್ಮ ಮನೆಯ ಯುವತಿಗೆ ವಾಮಾಚಾರ ಮಾಡಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಯುವತಿಯ ಸಂಬಂಧಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

assault on young man at kalaburagi
ಕಲಬುರಗಿಯಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಕಲಬುರಗಿ: ವಾಮಾಚಾರ ಮಾಡಿ ತಮ್ಮ ಮನೆಯ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಯುವಕನಿಗೆ ಮನಬಂದಂತೆ ಥಳಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೈರಲ್​ ವಿಡಿಯೋ

ಘಟನೆಯ ವಿವರ:

ಶಹಾಬಜಾರ್ ತಾಂಡಾ ನಿವಾಸಿ ಖಾಸಿಪತಿ ಎಂಬಾತನನ್ನು ಯುವತಿಯ ಸಂಬಂಧಿಕರು ಕಾರಿನಲ್ಲಿ ಕೂರಿಸಿಕೊಂಡು, ವಾಹನ ಚಲಿಸುತ್ತಿರುವಾಗಲೇ ಹಲ್ಲೆ ಮಾಡಿದ್ದಾರೆ. ಬಳ್ಳಾರಿ ಮೂಲದ ಯುವತಿಯನ್ನು ಖಾಸಿಪತಿ ಎಂಬಾತ ಮದುವೆಯಾಗಿದ್ದನಂತೆ. ವಾಮಾಚಾರ ಮಾಡಿ, ಮನೆಯವರಿಗೆ ಹೇಳದೆ ಯುವತಿ ಮನೆಬಿಟ್ಟು ಬರುವಂತೆ ಮಾಡಿ ಮದುವೆಯಾಗಿದ್ದಾನೆ ಎಂಬುದು ಯುವತಿ ಕಡೆಯವರ ಆರೋಪ.

ಇದನ್ನೂ ಓದಿ:ಫಲ್ಗುಣಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಬಾಲಕ ಸಾವು

ಈ ಹಿನ್ನೆಲೆಯಲ್ಲಿ ಯುವತಿ ಕುಟುಂಬದ ನಾಲ್ವರು ಯುವಕರು ಸೇರಿ ಖಾಸಿಪತಿಗೆ ಕಾರಿ​​‌ನಲ್ಲೇ ಕೂರಿಸಿಕೊಂಡು ಮನಸೋಇಚ್ಛೆ ಹೊಡೆದಿದ್ದಲ್ಲದೇ, ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ‌. ಕಲಬುರಗಿಯ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details