ಕರ್ನಾಟಕ

karnataka

ಮಳೆ ಅವಾಂತರ.. ದಾವಣಗೆರೆಯಲ್ಲಿ ರಸ್ತೆಗಳು ಜಲಾವೃತ.. ವಾಹನ ಸವಾರರ ಪರದಾಟ..

By

Published : Nov 20, 2021, 3:50 PM IST

ನಲ್ಲೂರಿನ ಕೆರೆ ತುಂಬಿದ ಪರಿಣಾಮ ಮನೆ, ಹೋಟೆಲ್​ಗಳು ಜಲಾವೃತವಾಗಿ ನಿನ್ನೆ ರಾತ್ರಿ ಜನರು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ಮುಂದುವರೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ..

davanagere rain news
ದಾವಣಗೆರೆಯಲ್ಲಿ ಮಳೆ

ದಾವಣಗೆರೆ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ(rain in davanagere) ಅವಾಂತರವನ್ನೇ ಸೃಷ್ಟಿಸಿದೆ. ಜಿಲ್ಲೆಯ ಚನ್ನಗಿರಿ, ನಲ್ಲೂರಿನಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ.

ದಾವಣಗೆರೆಯಲ್ಲಿ ಮಳೆ-ರಸ್ತೆಗಳೆಲ್ಲ ಜಲಾವೃತ..

ನಲ್ಲೂರಿನ ಕೆರೆ ತುಂಬಿ ಕೋಡಿ ಬಿದ್ದಿರುವ ಪರಿಣಾಮ ರಸ್ತೆ ಜಲಾವೃತವಾಗಿವೆ. ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಭಾಗದಲ್ಲಿ ಬೆಳೆದಿದ್ದ ಅಡಿಕೆ, ಮೆಕ್ಕೆಜೋಳ ಬೆಳೆ ಮಳೆಯಿಂದ ನೆಲಕಚ್ಚಿವೆ‌. ಅಡಿಕೆ ತೋಟಗಳು ಜಲಾವೃತವಾಗಿದ್ದು, ರೈತರು ಹೈರಾಣಾಗಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು : ಹಳ್ಳದಲ್ಲಿ ಕೊಚ್ಚಿ ಹೋದ ಸ್ಕೂಟರ್​ ಸವಾರ

ನಲ್ಲೂರಿನ ಕೆರೆ ತುಂಬಿದ ಪರಿಣಾಮ ಮನೆ, ಹೋಟೆಲ್​ಗಳು ಜಲಾವೃತವಾಗಿ ನಿನ್ನೆ ರಾತ್ರಿ ಜನರು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ಮುಂದುವರೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ABOUT THE AUTHOR

...view details