ಆನೇಕಲ್(ಬೆಂಗಳೂರು): ಪ್ರಾಣಿಗಳ ಜೀವತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿಯಲ್ಲಿ ಬೆಂಗಾಲ್ ಹುಲಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಐದು ವರ್ಷ ಆರು ತಿಂಗಳ ವಯಸ್ಸಿನ 'ಶಿವು' ಮೃತ ಹುಲಿಯಾಗಿದ್ದು, ಚರ್ಮ ಮತ್ತು ಎಲುಬಿಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತಿತ್ತು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಗೋಮಾಂಸ ನಿಷೇಧ ಹಿನ್ನೆಲೆ ಪ್ರಾಣಿಗಳಿಗೆ ಮಾಂಸ ನೀಡುವುದನ್ನು ನಿಲ್ಲಿಸಲಾಗಿತ್ತು. ಇದರಿಂದ ಹುಲಿ ಅಶಕ್ತವಾಗಿತ್ತಂತೆ. ಇದನ್ನು ಗಮನಿಸಿದ್ದ ಪಶು ವೈದ್ಯರು ಮತ್ತೆ ಗೋ ಮಾಂಸ ನೀಡುವುದನ್ನು ಆರಂಭಿಸಿದ್ದರು. ಆದರೂ ವರ್ಷಗಳ ಕಾಲ ಪೌಷ್ಠಿಕ ಮಾಂಸ ನೀಡದ ಕಾರಣ ಹುಲಿ ನಿತ್ರಾಣಗೊಂಡಿತ್ತು. ಜೊತೆಗೆ ಆಗಾಗ ಕೋಳಿ ಮಾಂಸ ನೀಡುತ್ತಿದ್ದದ್ದೂ ಕೂಡ ಹುಲಿ ಅನಾರೋಗ್ಯಕ್ಕೆ ಕಾರಣ ಎಂದು ಪ್ರಾಣಿಪ್ರಿಯರು ಶಂಕಿಸಿದ್ದಾರೆ.