ಕರ್ನಾಟಕ

karnataka

ವೆಬ್​ ಡಿಸೈನರ್​ನನ್ನೇ ಕಿಡ್ನ್ಯಾಪ್​ ಮಾಡಿದ ವೆಬ್​ ಸೈಟ್​ ಮಾಲೀಕ.. ಮುಂದೆ ನಡೆದಿದ್ದೇನು ಗೊತ್ತಾ?

By

Published : Apr 28, 2022, 10:11 AM IST

Three people arrested for Kidnap case in Bengaluru, Man kidnap in Bengaluru, Bengaluru crime news, ಬೆಂಗಳೂರಿನಲ್ಲಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಬಂಧನ, ಬೆಂಗಳೂರಿನಲ್ಲಿ ವ್ಯಕ್ತಿ ಕಿಡ್ನ್ಯಾಪ್​, ಬೆಂಗಳೂರು ಅಪರಾಧ ಸುದ್ದಿ,
ವೆಬ್​ ಡಿಸೈನರ್​ನ್ನೇ ಕಿಡ್ನ್ಯಾಪ್​ ಮಾಡಿದ ವೆಬ್​ ಸೈಟ್​ ಮಾಲಿಕ ()

ವೆಬ್​ ಸೈಟ್​ ಮಾಲೀಕನೊಬ್ಬ ವೆಬ್​ ಡಿಸೈನರ್​ನನ್ನು ಚಾಣಾಕ್ಷತನಿಂದ ತಾನಿದ್ದ ಸ್ಥಳಕ್ಕೆ ಕರೆಸಿ ಕಿಡ್ನ್ಯಾಪ್​ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಸಂಚಲನ ಮೂಡಿಸುತ್ತಿದೆ.

ಬೆಂಗಳೂರು:ಕಂಪನಿ ವೆಬ್ ಸೈಟ್ ಡೇಟಾ ಅಳಿಸುವಂತೆ ಮಾಡಿ ಲಕ್ಷಾಂತರ ರೂಪಾಯಿಗೆ ನಷ್ಟಕ್ಕೆ ಕಾರಣವಾಗಿದ್ದ ವ್ಯಕ್ತಿಯನ್ನು ವಾಮ ಮಾರ್ಗದಿಂದ ಕರೆಯಿಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಬೆದರಿಸಿ ಸುಲಿಗೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್​​​ಗೆ ಒಳಗಾದ ಅಜಯ್ ಪಾಂಡೆ ಎಂಬಾತ ದೂರು ನೀಡಿದ ಮೇರೆಗೆ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದು ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದಾರೆ‌.

ಏನಿದು ಘಟನೆ:ಚೈತನ್ಯಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿಯ ಮಾಲೀಕನಾಗಿದ್ದ. ಉದ್ಯಮಕ್ಕೆ ವೆಬ್​ಸೈಟ್ ಸಿದ್ದಪಡಿಸುವಂತೆ ಅಜಯ್ ಪಾಂಡೆಗೆ ಚೈ ಸೂಚಿಸಿದ್ದ. ಇದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದ‌.‌‌ ಒಂದು ವರ್ಷದ ತರುವಾಯ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯಗೆ ಹೆಚ್ಚುವರಿ ಹಣ ಕೇಳಿದ್ದ. ಆದರೆ, ಹಣ ನೀಡದ ಚೈತನ್ಯ ವಿರುದ್ಧ ಅಸಮಾನಧಾನಗೊಂಡ ಪಾಂಡೆ ವೆಬ್​ಸೈಟ್​ನಲ್ಲಿರುವ ಡೇಟಾ ಅಳಿಸಿ ಕಂಪ್ಲೀಟ್ ಶಟ್​ಡೌನ್ ಆಗುವಂತೆ ಮಾಡಿದ್ದ. ಇದರಿಂದ ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಚೈತ್ಯನ ಕೆಂಡಕಾರಿದ್ದ.

ಅಪಹರಣ ಪ್ರಕರಣದ ಆರೋಪಿ ಬಂಧನ

ಅಲ್ಲದೇ ಒಂದು ವರ್ಷಗಳಿಂದ ಪಾಂಡೆ ದೂರ ಸರಿದಿದ್ದ. ವಾಮಮಾರ್ಗದಿಂದ ಪಾಂಡೆಯನ್ನ ಸಂಪರ್ಕಿಸಿದ್ದ ಆರೋಪಿಗಳು ಏಪ್ರಿಲ್ 23ರಂದು ಯಲಹಂಕದ ಬಿಬಿ ರಸ್ತೆಗೆ ಕರೆಯಿಸಿಕೊಂಡಿದ್ದಾರೆ. ನಷ್ಟದ ಹಣ ವಸೂಲಿಗೆ ಮಾಲಿಕ ಚೈತನ್ಯ ಕಿಡ್ನ್ಯಾಪ್ ದಾರಿ ಕಂಡುಕೊಂಡಿದ್ದ. ಆರೋಪಿಗಳು ಪಾಂಡೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಹಣ ನೀಡುವಂತೆ ಬೆದರಿಸಿದ್ದರು.

ಅಪಹರಣ ಪ್ರಕರಣದ ಆರೋಪಿ ಬಂಧನ

ಆರೋಪಿಗಳಿಗೆ ಹೆದರಿದ ಪಾಂಡೆ ಪರಿಚಿತ ವ್ಯಕ್ತಿಯಿಂದ 6.35 ಲಕ್ಷ ವರ್ಗಾಯಿಸಿಕೊಂಡಿದ್ದ. ಬಳಿಕ ಹಣ ನೀಡಿದ ಮೇಲೆ ಪಾಂಡೆ ಆರೋಪಿಗಳಿಂದ ಮುಕ್ತಿ ಹೊಂದಿದ್ದ. ಬಳಿಕ ನೇರ ಪೊಲೀಸ್​ ಠಾಣೆಗೆ ತೆರಳಿದ್ದ ಪಾಂಡೆ ನನ್ನ ಕಿಡ್ನ್ಯಾಪ್​ ಮಾಡಿ, ಪಿಸ್ತೂಲ್ ತೋರಿಸಿ, ಬೆದರಿಸಿ ಹಣ ಪಡೆದಿದ್ದಾರೆ ಎಂದು ದೂರು ನೀಡಿದ್ದ.

ಅಪಹರಣ ಪ್ರಕರಣದ ಆರೋಪಿ ಬಂಧನ

ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಪಿಸ್ತೂಲ್ ಬಳಕೆಯಾಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ABOUT THE AUTHOR

...view details