ಕರ್ನಾಟಕ

karnataka

GST ನಷ್ಟ ಪರಿಹಾರ: 13ನೇ ಕಂತಿನಡಿ 6,000 ಕೋಟಿ ರೂ. ಸಾಲ ಎತ್ತಿ ರಾಜ್ಯಗಳಿಗೆ ಬಿಡುಗಡೆ

By

Published : Jan 25, 2021, 3:39 PM IST

ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ. ಈ ವಾರ ಶೇ 5.30ರಷ್ಟು ಬಡ್ಡಿ ದರದಡಿ ಸಾಲ ಎತ್ತಲಾಗಿದೆ ಎಂದು ಜಿಎಸ್​ಟಿ ಮಂಡಳಿ ತಿಳಿಸಿದೆ..

GST shortfall
GST shortfall

ನವದೆಹಲಿ:ಜಿಎಸ್‌ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು 13ನೇ ಸುತ್ತಿನ ಕಂತಿನಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 6,000 ಕೋಟಿ ರೂ. ಬಿಡುಗಡೆ ಮಾಡಿದೆ. ಹಂಚಿಕೆ ಮಾಡಲಾದ ಒಟ್ಟು ಮೊತ್ತ 78,000 ಕೋಟಿ ರೂ.ಯಷ್ಟಾಗಿದೆ.

ಈವರೆಗೆ,ಒಟ್ಟು ಅಂದಾಜು ಜಿಎಸ್​ಟಿ ಪರಿಹಾರ ಕೊರತೆಯ 70 ಪ್ರತಿಶತವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯದಲ್ಲಿನ ಅಂದಾಜು 1.10 ಲಕ್ಷ ಕೋಟಿ ರೂ.ಗಳ ಕೊರತೆ ಪೂರೈಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು.

ಜಿಎಸ್​​ಟಿ ಪರಿಹಾರದ ಕೊರತೆಯನ್ನು ಪೂರೈಸಲು 13ನೇ ಸಾಪ್ತಾಹಿಕ ಕಂತಿನಡಿ 6,000 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಹಣದಲ್ಲಿ 23 ರಾಜ್ಯಗಳಿಗೆ 5,516.60 ಕೋಟಿ ರೂ. ಹಾಗೂ 483.40 ಕೋಟಿ ರೂ. ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು & ಕಾಶ್ಮೀರ ಮತ್ತು ಪುದುಚೇರಿ) ಬಿಡುಗಡೆ ಮಾಡಲಾಗಿದೆ. ಈ ವಾರ ಶೇ. 5.30ರಷ್ಟು ಬಡ್ಡಿ ದರದಡಿ ಸಾಲ ಎತ್ತಲಾಗಿದೆ ಎಂದು ಜಿಎಸ್​ಟಿ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಬಡವರನ್ನು ನುಂಗಿ, ಸಿರಿವಂತರ ಜೇಬು ತುಂಬಿಸಿದ ಕೊರೊನಾ: ಭಾರತೀಯ ಉದ್ಯಮಿಗಳ ಸಂಪತ್ತು ಶೇ 35% ವೃದ್ಧಿ!

ಉಳಿದ ಐದು ರಾಜ್ಯಗಳಾದ ಅರುಣಾಚಲಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಜಿಎಸ್​​ಟಿ ಅನುಷ್ಠಾನದಿಂದ ಆದಾಯದಲ್ಲಿ ಅಂತರ ಇಲ್ಲ ಎಂದು ಹೇಳಿದೆ.

13 ಹಂತಗಳಲ್ಲಿ ಸಾಲ ಮಾಡಿದ ಕೇಂದ್ರ ಸರ್ಕಾರವು ಅಕ್ಟೋಬರ್ 23, ನವೆಂಬರ್ 2, ನವೆಂಬರ್ 9, ನವೆಂಬರ್ 23, ಡಿಸೆಂಬರ್ 1, ಡಿಸೆಂಬರ್ 7, ಡಿಸೆಂಬರ್ 14, ಡಿಸೆಂಬರ್ 21, ಡಿಸೆಂಬರ್ 28, ಜನವರಿ 1, ಜ.11, ಜ.18 ಮತ್ತು 25ರಂದು ರಾಜ್ಯಗಳಿಗೆ ಹಣ ಬಿಡುಗಡೆ ಮಾಡಿದೆ.

ABOUT THE AUTHOR

...view details