ಕರ್ನಾಟಕ

karnataka

ಜಿಎಸ್​ಟಿ ನಷ್ಟ ಪರಿಹಾರ: ಕೇಂದ್ರದ 1.06 ಲಕ್ಷ ಕೋಟಿ ರೂ.ಯಲ್ಲಿ ರಾಜ್ಯಕ್ಕೆ ಸಿಕ್ಕಿದೆಷ್ಟು?

By

Published : Mar 9, 2021, 1:23 PM IST

Updated : Mar 9, 2021, 1:34 PM IST

ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯದ 1.10 ಲಕ್ಷ ಕೋಟಿ ರೂ. ಕೊರತೆ ನೀಗಿಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರವು ಎರವಲು ಪಡೆದು ನೀಡುತ್ತಿದೆ.

GST
GST

ನವದೆಹಲಿ:ಜಿಎಸ್​ಟಿ ನಷ್ಟ ಪರಿಹಾರದ ಕೊರತೆ ನೀಗಿಸಲು ಹಣಕಾಸು ಸಚಿವಾಲಯದ ಖರ್ಚು ಇಲಾಖೆಯು 19ನೇ ಸಾಪ್ತಾಹಿಕ ಕಂತಿನ ಹಣ ಬಿಡುಗಡೆ ಮಾಡಿದೆ.

ಜಿಎಸ್​ಟಿ ಪರಿಹಾರದ ಕೊರತೆ ಪೂರೈಸಲು ರಾಜ್ಯಗಳಿಗೆ 2,104 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ 2,103.95 ಕೋಟಿ ರೂ. 7 ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. 0.05 ಕೋಟಿ ರೂ.ಯನ್ನು ಕೇಂದ್ರ ಪ್ರದೇಶ ಪುದುಚೇರಿಗೆ ಕೊಡಲಾಗಿದೆ.

ಇಲ್ಲಿಯವರೆಗೆ ಒಟ್ಟು ಅಂದಾಜು ಜಿಎಸ್​​ಟಿ ಪರಿಹಾರದ ಕೊರತೆಯ 96 ಪ್ರತಿಶತವನ್ನು ರಾಜ್ಯಗಳು ಮತ್ತು ಯುಟಿಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 97,242.03 ಕೋಟಿ ರೂ. ರಾಜ್ಯಗಳಿಗೆ ಹಾಗೂ 3 ಯುಟಿಗಳಿಗೆ 8,861.97 ಕೋಟಿ ರೂ. ನೀಡಲಾಗಿದೆ.

ಇದನ್ನೂ ಓದಿ: 2020ರಲ್ಲಿ ದೇಶದ 10 ಸಾವಿರ ಕಂಪನಿಗಳ ಬಾಗಿಲು ಬಂದ್​​​: ಇದ್ರಲ್ಲಿ ಕರ್ನಾಟಕದವು ಎಷ್ಟು ಗೊತ್ತೇ?

ಜಿಎಸ್‌ಟಿ ಅನುಷ್ಠಾನದಿಂದ ಉಂಟಾದ ಆದಾಯದ 1.10 ಲಕ್ಷ ಕೋಟಿ ರೂ. ಕೊರತೆ ನೀಗಿಸಲು ಕೇಂದ್ರವು 2020ರ ಅಕ್ಟೋಬರ್‌ನಲ್ಲಿ ವಿಶೇಷ ಸಾಲ ಪಡೆಯುವ ವಿಂಡೋ ಸ್ಥಾಪಿಸಿತ್ತು. ರಾಜ್ಯಗಳು ಮತ್ತು ಯುಟಿಗಳ ಪರವಾಗಿ ಕೇಂದ್ರವು ಎರವಲು ಪಡೆದು ನೀಡುತ್ತಿದೆ.

ಈ ವಾರ ಬಿಡುಗಡೆಯಾದ ಮೊತ್ತವು ರಾಜ್ಯಗಳಿಗೆ ಒದಗಿಸಲಾದ 19ನೇ ಕಂತಾಗಿದೆ. ಈ ವಾರದಲ್ಲಿ ಶೇ 5.8594ರಷ್ಟು ಬಡ್ಡಿದರದಲ್ಲಿ ಎರವಲು ಪಡೆಯಲಾಗಿದೆ. ಇಲ್ಲಿಯವರೆಗೆ 1,06,104 ಕೋಟಿ ರೂ. ಕೇಂದ್ರ ಸರ್ಕಾರವು ವಿಶೇಷ ಎರವಲು ವಿಂಡೋ ಮೂಲಕ ಸರಾಸರಿ ಶೇ 4.8842ರಷ್ಟು ಬಡ್ಡಿದರದಲ್ಲಿ ಎರವಲು ಪಡೆದಿದೆ.

Last Updated :Mar 9, 2021, 1:34 PM IST

ABOUT THE AUTHOR

...view details