ವಯನಾಡು(ಕೇರಳ):ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಎನ್ಕೌಂಟರ್ನಲ್ಲಿ ಮಾವೋವಾದಿ ಸಂಘಟನೆ ನಾಯಕಿಯ ಹತ್ಯೆಯಾಗಿದೆ ಎಂಬ ಪೋಸ್ಟರ್ಗಳು ಕಂಡುಬಂದಿವೆ. ಕಣ್ಣೂರು-ವಯನಾಡು ಗಡಿಯ ಅರಳಂ ಅರಣ್ಯ ಪ್ರದೇಶದಲ್ಲಿ ಕಳೆದ ತಿಂಗಳು ಪೊಲೀಸರು ಹಾಗೂ ಮಾವೋವಾದಿಗಳ ಮಧ್ಯೆ ಎನ್ಕೌಂಟರ್ ಜರುಗಿದೆ ಎಂದು ಹೇಳಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು:ಆಂಧ್ರಪ್ರದೇಶದ ಲಕ್ಷ್ಮೀ ಅಲಿಯಾಸ್ ಕವಿತಾ ಮೃತ ಮಾವೋವಾದಿ. ನವೆಂಬರ್ 13ರಂದು ಅಯ್ಯನ್ಕುನ್ನು ಎಂಬಲ್ಲಿ ನಡೆದ ಎನ್ಕೌಂಟರ್ನಲ್ಲಿ ಈಕೆ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪಶ್ಚಿಮ ಘಟ್ಟದ ಅರಣ್ಯದಲ್ಲಿ ಕವಿತಾ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ. ತಮ್ಮ ನಾಯಕಿಯ ಸಾವಿಗೆ ಮಾವೋವಾದಿ ಗುಂಪು ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಪೋಸ್ಟರ್ಗಳಲ್ಲಿ ಎಚ್ಚರಿಸಲಾಗಿದೆ.
ಮೂಲಗಳ ಪ್ರಕಾರ, ನ.13ರಂದು ಬೆಳಿಗ್ಗೆ ಅಯ್ಯನ್ಕುನ್ನುವಿನಲ್ಲಿ ಪೊಲೀಸ್ ಇಲಾಖೆಯ ಥಂಡರ್ ಬೋಲ್ಟ್ ಕಮಾಂಡೋ ಪಡೆ ಶೋಧ ಕೈಗೊಂಡಿತ್ತು. ಈ ವೇಳೆ, ಮಾವೋವಾದಿ ಗಂಪೊಂದು ಮೊದಲು ಗುಂಡಿನ ದಾಳಿ ನಡೆಸಿತ್ತು. ತಕ್ಷಣವೇ ಥಂಡರ್ ಬೋಲ್ಟ್ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದರು. ಇದಾದ ಬಳಿಕ ಅಂದೇ ಘಟನೆಯನ್ನು ಖಚಿತಪಡಿಸಿದ್ದ ಡಿಐಜಿ ಪುಟ್ಟ ವಿಮಲಾದಿತ್ಯ, ಅರಳಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕೆಲ ಮಾವೋವಾದಿಗಳು ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯ ಬಳಿಕ ಪೊಲೀಸರು ಬಂದೂಕುಗಳು ಸೇರಿದಂತೆ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು.