ಕರ್ನಾಟಕ

karnataka

ಪ್ರತ್ಯೇಕ ಅಪಘಾತ.. ನದಿಗೆ ಉರುಳಿ ಬಿದ್ದ ಯಾತ್ರಾರ್ಥಿಗಳ ವಾಹನ, ಚಾಲಕ ಸಾವು, ರಸ್ತೆ ಬಂದ್​

By

Published : Jun 29, 2023, 11:29 AM IST

ಉತ್ತರಾಖಂಡನ ಚಮೋಲಿ ಜಿಲ್ಲೆಯಲ್ಲಿ ಎರಡು ರಸ್ತೆ ಅಪಘಾತಗಳು ಸಂಭವಿಸಿವೆ. ಅಪಘಾತವೊಂದರಲ್ಲಿ ವಾಹನದ ಚಾಲಕ ಮೃತಪಟ್ಟಿದ್ರೆ, ಮತ್ತೊಂದು ಅಪಘಾತದಲ್ಲಿ ರಾಜಸ್ಥಾನದಿಂದ ಬಂದಿದ್ದ ಯಾತ್ರಾರ್ಥಿಗಳ ವಾಹನ ನಾಲೆಗೆ ಉರುಳಿ ಬಿದ್ದಿದೆ.

Two vehicles fell into ditch in Chamoli  vehicles fell into ditch in Chamoli  vehicles fell into ditch  National Highway block due to debris  debris on National Highway in Chamoli  National Highway block in Chamoli  ನಾಲೆಗೆ ಉರುಳಿ ಬಿದ್ದ ವಾಹನ  ರಸ್ತೆ ಅಪಘಾತದಲ್ಲಿ ಚಾಲಕ ಸಾವು  ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್  ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ  ಉತ್ತರಾಖಂಡನ ಚಮೋಲಿ ಜಿಲ್ಲೆ  ಚಮೋಲಿ ಜಿಲ್ಲೆಯಲ್ಲಿ ಎರಡು ರಸ್ತೆ ಅಪಘಾತ  ಅಪಘಾತವೊಂದರಲ್ಲಿ ವಾಹನದ ಚಾಲಕ ಮೃತ
ನದಿಗೆ ಉರುಳಿ ಬಿದ್ದ ಯಾತ್ರಾರ್ಥಿಗಳ ವಾಹನ

ಚಮೋಲಿ, ಉತ್ತರಖಂಡ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಚಾಲಕ ಸಾವನ್ನಪ್ಪಿದ್ದು, 11 ಯಾತ್ರಾರ್ಥಿಗಳ ವಾಹನವೊಂದು ನಾಲೆಗೆ ಉರುಳಿ ಬಿದ್ದಿದೆ.

ನಾಲೆಗೆ ಉರುಳಿ ಬಿದ್ದ ವಾಹನ: ಮಂಡಲ್ ಗೋಪೇಶ್ವರ್ ಮೋಟಾರು ಮಾರ್ಗದ ಮಂಡಲ್ ಬಳಿ ವಾಹನವೊಂದು ಅಪಘಾತಕ್ಕೀಡಾಗಿದೆ. ವಾಹನದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಬೆಳಗ್ಗೆ ಕೇದಾರನಾಥದಿಂದ ಗೋಪೇಶ್ವರ ಕಡೆಗೆ ಬರುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಮಂಡಲ್ ಬಳಿಯ ಕಂದಕಕ್ಕೆ ಬಿದ್ದಿದೆ. ಈ ಅಪಘಾತದ ಬಗ್ಗೆ ಗೋಪೇಶ್ವರ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜೇಂದ್ರ ಸಿಂಗ್ ರೌಟೇಲಾ ತಿಳಿಸಿದ್ದಾರೆ.

ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ವಾಹನದಲ್ಲಿದ್ದವರೆಲ್ಲರೂ ಸುರಕ್ಷಿತವಾಗಿದ್ದಾರೆ. ವಾಹನದಲ್ಲಿದ್ದ ಎಲ್ಲಾ 11 ಜನರನ್ನು ಸ್ಥಳೀಯ ಜನರು ಮತ್ತು ಮಂಡಲ್ ಚೌಕಿ ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಎಲ್ಲ ಸವಾರರು ರಾಜಸ್ಥಾನದವರು. ಈ ಜನರು ಕೇದಾರನಾಥದಿಂದ ಬದರಿನಾಥಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ರಸ್ತೆ ಅಪಘಾತದಲ್ಲಿ ಚಾಲಕ ಸಾವು: ಚಮೋಲಿಯ ಠಾಣಾ ನಂದನಗರ ಘಾಟ್ ಪ್ರದೇಶದ ಸೀಟೆಲ್ ರಸ್ತೆಯ ಪಾರ್ಕಿಂಗ್ ಬಳಿ ವಾಹನವೊಂದು ರಸ್ತೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿದೆ. ಸ್ಥಳದಲ್ಲೇ ಯುಕೆ 04 ಸಿಎ 1254 ವಾಹನವು ರಸ್ತೆಯಿಂದ 150 ಮೀಟರ್ ಕೆಳಗೆ ನಂದಾಕಿನಿ ನದಿಗೆ ಬಿದ್ದಿದೆ. ಈ ಅಪಘಾತದಲ್ಲಿ ನೈನಿತಾಲ್ ನಿವಾಸಿ 24 ವರ್ಷದ ಚಾಲಕ ಪವನ್​ ಎಂಬಾತ ಯುವಕ ಸಾವನ್ನಪ್ಪಿದ್ದಾರೆ.

ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್: ಮತ್ತೊಂದೆಡೆ ಬೆಟ್ಟದಿಂದ ಭಾರೀ ಪ್ರಮಾಣದ ಮಣ್ಣು ಹರಿದು ಬರುತ್ತಿರುವುದರಿಂದ ಬದರಿನಾಥ ರಾಷ್ಟ್ರೀಯ ಹೆದ್ದಾರಿ 07ರಲ್ಲಿ ಅಡಚಣೆಯಾಗಿದೆ. ಬದರಿನಾಥ ಮತ್ತು ಹೇಮಕುಂಡಕ್ಕೆ ಬರುವ ಪ್ರಯಾಣಿಕರು ಈ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದಾರೆ. ಪೊಲೀಸರು ರಸ್ತೆ ತೆರೆಯುವವರೆಗೆ ಪ್ರಯಾಣಿಸುವ ಇತರ ಪ್ರಯಾಣಿಕರನ್ನು ಕರ್ಣಪ್ರಯಾಗ, ಗೌಚಾರ್ ಮತ್ತು ಪಿಪಾಲ್ಕೋಟಿಯಲ್ಲಿ ನಿಲ್ಲಿಸಿದ್ದಾರೆ. ರಸ್ತೆ ಮೇಲೆ ಬಿದ್ದ ಮಣ್ಣಿನ ಅವಶೇಷಗಳನ್ನು ತೆರೆಯುವ ಕೆಲಸವನ್ನು ಎನ್‌ಎಚ್‌ಐಡಿಸಿಎಲ್ ಪ್ರಾರಂಭಿಸಿದೆ. ಈ ಮಾರ್ಗದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸುಮಾರು 4 ರಿಂದ 5 ಗಂಟೆಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಓದಿ:ಆನೇಕಲ್: ಬ್ಯಾರಿಕೇಡ್​ಗೆ ಡಿಕ್ಕಿಯಾಗಿ ಬಿದ್ದ ಕಂಟೈನರ್; ಚಾಲಕ, ಕ್ಲೀನರ್ ಸಾವು

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ:ದಾತಿಯಾ ಜಿಲ್ಲೆಯಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿತ್ತು. ದುರ್ಸಾದಾ ಪೊಲೀಸ್ ಠಾಣೆ ವ್ಯಾಪ್ತಿಯ ಬುಹಾರಾ ನದಿಯಲ್ಲಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಇನ್ನು ಈ ಅಪಘಾತದಲ್ಲಿ 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಪಘಾತ ಮಾಹಿತಿ ಪಡೆದು ಜಿಲ್ಲಾಧಿಕಾರಿ ಹಾಗೂ ಅಧೀಕ್ಷಕ ಪ್ರದೀಪ್ ಶರ್ಮಾ ಸ್ಥಳಕ್ಕೆ ದೌಡಾಯಿಸಿದ್ದರು. ಇದರೊಂದಿಗೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಈ ದೊಡ್ಡ ಘಟನೆಯ ಬಗ್ಗೆ ಗಮನ ಹರಿಸಿದ್ದರು.

ABOUT THE AUTHOR

...view details