ಕರ್ನಾಟಕ

karnataka

ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ

By ETV Bharat Karnataka Team

Published : Dec 28, 2023, 5:01 AM IST

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ.

Etv Bharat
Etv Bharat

ಇಂದಿನ ಪಂಚಾಂಗ :

ದಿನಾಂಕ: 28-12-2023 , ಗುರುವಾರ

ಸಂವತ್ಸರ: ಶುಭಕೃತ್

ಆಯನ: ದಕ್ಷಿಣಾಯಣ

ಋತು: ಶಿಶಿರ

ಮಾಸ: ಮಾರ್ಗಶಿರ

ಪಕ್ಷ:ಕೃಷ್ಣ

ತಿಥಿ:ಪ್ರತಿಪತ್​

ನಕ್ಷತ್ರ: ಪುನರ್ವಸು

ಸೂರ್ಯೋದಯ: ಮುಂಜಾನೆ 06:39 ಗಂಟೆಗೆ

ಅಮೃತಕಾಲ: ಬೆಳಿಗ್ಗೆ 09:29 ರಿಂದ 10:54 ಗಂಟೆ ತನಕ

ವರ್ಜ್ಯಂ: ಸಂಜೆ 6:15 ರಿಂದ 7:50 ಗಂಟೆ ವರೆಗೆ

ದುರ್ಮುಹೂರ್ತ:ಬೆಳಗ್ಗೆ 10:39 ರಿಂದ 11:27 ಗಂಟೆ ತನಕ ಮತ್ತು ಮಧ್ಯಾಹ್ನ 03:27 ರಿಂದ 04:15 ಗಂಟೆ ತನಕ

ರಾಹುಕಾಲ: ಮಧ್ಯಾಹ್ನ 01:44 ರಿಂದ 03:09 ಗಂಟೆ ವರೆಗೆ

ಸೂರ್ಯಾಸ್ತ: ಸಂಜೆ 05:59 ಗಂಟೆಗೆ

ಇಂದಿನ ರಾಶಿ ಭವಿಷ್ಯ :

ಮೇಷ :ಇಂದು ನಿಮಗೆ ಸುಂದರ ಮತ್ತು ವಿದೇಶಿ ವಸ್ತುಗಳ ಮೇಲೆ ಕಣ್ಣಿರುತ್ತದೆ. ಈ ವಿಷಯಗಳಲ್ಲಿ ನೀವು ವ್ಯಾಪಾರ ಪ್ರಾರಂಭಿಸುವ ಸಾಧ್ಯತೆಯೂ ಇರುತ್ತದೆ. ಆದಾಗ್ಯೂ, ನೀವು ಅದರ ಕುರಿತು ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಆದರೆ ನಿಮ್ಮ ಆಯ್ಕೆಯನ್ನು ಮುಕ್ತವಾಗಿರಿಸಿಕೊಳ್ಳುತ್ತೀರಿ.

ವೃಷಭ :ನೀವು ಉದ್ಯೋಗದಲ್ಲಿ ಸಾಕಷ್ಟು ಕೆಲಸಗಳಿಂದ ಒತ್ತಡಕ್ಕೆ ಸಿಲುಕುತ್ತೀರಿ. ಆದರೆ, ನೀವು ತುಂಬಾ ಕಾಳಜಿ ವಹಿಸುವವರೊಂದಿಗೆ ಹೊರಗಡೆ ಸುತ್ತಾಡಿ ಆನಂದಿಸಲು ನಿಮಗೆ ನೆರವಾಗುತ್ತದೆ. ನೀವು ಎಲ್ಲವನ್ನೂ ಮರೆತು ಆನಂದಿಸುವುದು ಸೂಕ್ತ, ಅದು ನಿಮಗೆ ನಿಜಕ್ಕೂ ಅಗತ್ಯವಾಗಿದೆ.

ಮಿಥುನ :ಈ ದಿನ ನೀವು ಶಕ್ತಿ ಮತ್ತು ಉತ್ಸಾಹದಿಂದ ತುಂಬಿ ತುಳುಕುವ ದಿನವಾಗಿದೆ. ನಿಮಗೆ ಜೀವನ ಕುರಿತು ಭರವಸೆಯ ನೋಟವಿದೆ, ಮತ್ತು ಇದು ನಿಮಗೆ ಯಶಸ್ಸು ತಂದುಕೊಡುವಲ್ಲಿ ನೆರವಾಗುತ್ತದೆ. ನಿಮ್ಮ ಮುಕ್ತವಾದ ಇಚ್ಛಾಶಕ್ತಿಯನ್ನು ಬಳಸಿ ನೀವು ಇಷ್ಟಪಡುವ ಕೆಲಸಗಳನ್ನು ತೆಗೆದುಕೊಳ್ಳುತ್ತೀರಿ. ಈ ದಿನ ಒತ್ತಡದಿಂದ ಕೂಡಿದ್ದರೂ ಅದು ನಿಮಗೆ ಪುರಸ್ಕಾರ ತಂದುಕೊಡುತ್ತದೆ.

ಕರ್ಕಾಟಕ :ಕುಟುಂಬ ಸದಸ್ಯರಿಂದ ಬೆಂಬಲದ ಕೊರತೆ ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಮಕ್ಕಳು ಕೂಡಾ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಕುಟುಂಬದಲ್ಲಿ ನಿರ್ಲಕ್ಷ್ಯ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ. ಪರಿಸ್ಥಿತಿಗಳನ್ನು ಕಿರುನಗೆಯಿಂದ ನಿಭಾಯಿಸಿ.

ಸಿಂಹ :ಇಂದು ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ದೃಢ ನಿರ್ಧಾರ ಕೈಗೊಳ್ಳಲು ಶಕ್ತರಾಗುತ್ತೀರಿ. ಇಂದು ನಿಮ್ಮ ಕೆಲಸಗಳನ್ನು ಪೂರೈಸುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ ಮತ್ತು ಯಶಸ್ಸು ಸಾಧಿಸುತ್ತೀರಿ.

ಕನ್ಯಾ :ಇಂದು ಕೊಂಚ ಬಿಡುವು ತೆಗೆದುಕೊಳ್ಳಿರಿ, ಮತ್ತು ನಿಮ್ಮಲ್ಲಿ ನೀವು ನೋಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಕಛೇರಿಯಲ್ಲಿ ಕೆಲ ಕಹಿ ಜಗಳಗಳು ನಡೆಯಬಹುದು, ಆದ್ದರಿಂದ ನೀವು ಎಚ್ಚರಿಕೆಯಿಂದ ಇರುವುದು ಅಗತ್ಯ ಮತ್ತು ವಿಷಯಗಳು ಬಹಳ ಕಠಿಣವಾಗುವುದನ್ನು ತಡೆಯಲು ಪ್ರಯತ್ನಿಸಿ. ಪ್ರೀತಿಯ ವಿಷಯದಲ್ಲಿ, ಹೊಸ ಪ್ರಣಯವೊಂದು ರೂಪುಗೊಳ್ಳಬಹುದು.

ತುಲಾ :ಬಾಕಿ ಇರುವ ಯಾವುದೇ ಕಾನೂನು ಸಮಸ್ಯೆಗಳು ಇಂದು ನ್ಯಾಯಾಲಯದಲ್ಲಿ ಅಥವಾ ನ್ಯಾಯಾಲಯದ ಹೊರಗಡೆ ಪರಿಹಾರವಾಗಬಹುದು. ನಿಮ್ಮ ಕಾರ್ಯದೊತ್ತಡ ಇಂದು ಕಡಿಮೆಯಾಗಲಿದೆ, ಮತ್ತು ನೀವು ಕೆಲ ಸಮಸ್ಯಾತ್ಮಕ ಸನ್ನಿವೇಶಗಳಿಂದ ದೂರ ಹೋಗಲು ಶಕ್ತರಾಗುತ್ತೀರಿ.

ವೃಶ್ಚಿಕ :ಇಂದು ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗುತ್ತೀರಿ. ಹಗಲಿನ ವೇಳೆ, ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆಗೆ ನಿಮ್ಮ ಕಥೆ ಬೇರೆಯದೇ ಆಗಿರುತ್ತದೆ. ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.

ಧನು :ಇಂದು ನಿಮ್ಮ ಹಡಗು ಪ್ರಚಂಡ ವಿವಾದದ ಅಲೆಗಳಿಗೆ ಸಿಲುಕಿಕೊಳ್ಳುತ್ತದೆ. ನೀವು ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಚಂಡಮಾರುತ ತಣ್ಣಗಾಗುತ್ತದೆ ಮತ್ತು ಅವರ ಅಭಿಪ್ರಾಯಗಳನ್ನು ಸ್ವೀಕರಿಸಲು ಪ್ರಯತ್ನಿಸಿ.

ಮಕರ :ಇಂದು ನೀವು ಬೆನ್ನು ಬಾಗುವಷ್ಟು ಕೆಲಸದಲ್ಲಿ ಸಿಲುಕುತ್ತೀರಿ. ದಿನದ ಅಂತ್ಯಕ್ಕೆ ನೀವು ಅತ್ಯಂತ ಆಯಾಸಗೊಳ್ಳುತ್ತೀರಿ. ವ್ಯಾಪಾರ ಜಗತ್ತಿಗೆ ಬಂದರೆ ತೀವ್ರ ಸ್ಪರ್ಧೆಯಿದೆ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಆದರೆ ನೀವೇನೂ ಕಡಿಮೆಯಿಲ್ಲ.

ಕುಂಭ :ಶೈಕ್ಷಣಿಕವಾಗಿ ನೀವು ಅತ್ಯಂತ ಉತ್ತಮ ಸಾಧನೆ ಮಾಡಿದ್ದೀರಿ. ನೀವು ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬುತ್ತೀರಿ ಮತ್ತು ಉತ್ತೇಜಿಸುತ್ತೀರಿ ಮತ್ತು ಅಭಿಮಾನಿಗಳನ್ನೂ ಗಳಿಸುತ್ತೀರಿ. ಆದರೆ ಇದರ ಅರ್ಥ ನೀವು ಎದೆಯುಬ್ಬಿಸಿ ನಡೆಯಬೇಕಿಲ್ಲ. ಇತರರ ಕುರಿತು ವಿನಯ ಹಾಗೂ ಸೌಜನ್ಯಪೂರಿತರಾಗಿರಿ.

ಮೀನ :ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವವರು ಇಂದು ಉತ್ತಮ ಸಾಧನೆ ತೋರುತ್ತಾರೆ. ವ್ಯಾಪಾರಕ್ಕೆ ಇದು ಒಳ್ಳೆಯ ದಿನ. ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಮಾಡಲು ನೀವು ಶಕ್ತರಾಗುತ್ತೀರಿ. ದೇವರ ಕೃಪೆಯಿಂದ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ, ಆದರೆ ನೀವು ನಿರುತ್ಸಾಹಗೊಳ್ಳದೆ ಕಠಿಣ ಪರಿಶ್ರಮ ಪಡಬೇಕು.

ABOUT THE AUTHOR

...view details