ಕರ್ನಾಟಕ

karnataka

'ನಂಗೆ ಉಸಿರಾಡಲು ಆಗ್ತಿಲ್ಲ, ನನ್ನ ಹೆಂಡತಿಯನ್ನ ಹುಷಾರಾಗಿ ನೋಡಿಕೊಳ್ಳಿ'... ಕೊರೊನಾಗೆ ಬಲಿಯಾದವನ ಕೊನೆಯ ಮಾತು!

By

Published : May 8, 2021, 12:26 PM IST

Updated : May 8, 2021, 12:42 PM IST

ಕೋವಿಡ್​ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತ ಸಾಯುವ ಮುನ್ನ ಪೋಷಕರಿಗೆ ಕರೆ ಮಾಡಿ ನನಗೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ. ನನ್ನ ಹೆಂಡತಿಯನ್ನು ಹುಷಾರಾಗಿ ನೋಡಿಕೊಳ್ಳುವಂತೆ ಹೇಳಿ ಕೊನೆಯುಸಿರೆಳೆದಿದ್ದಾರೆ.

newly married groom died with corona at hyderabad
ಕೊರೊನಾಗೆ ಬಲಿಯಾದ ನವವಿವಾಹಿತ

ಹೈದರಾಬಾದ್‌: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ತಿಂಗಳಲ್ಲೇ ತೆಲಂಗಾಣದ 28 ವರ್ಷದ ವ್ಯಕ್ತಿಯನ್ನು ಮಹಾಮಾರಿ ಕೊರೊನಾ ಬಲಿ ತೆಗೆದುಕೊಂಡಿದೆ.

ಹೈದರಾಬಾದ್​ನ ಮಲ್ಲಾಪುರದಲ್ಲಿ ವಾಸವಾಗಿರುವ ದಿನಕರ್​ ಯಾದವ್​ ಎಂಬುವರು ತನ್ನ ಪತ್ನಿಯೊಂದಿಗೆ ಎಲ್​​ಬಿ ನಗರದಲ್ಲಿರುವ ಅತ್ತೆ ಮನೆಗೆ ಹೋಗಿ ಬಂದ ಮರುದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಅವರ ಕೋವಿಡ್​ ವರದಿ ಪಾಸಿಟಿವ್​ ಬಂದಿದ್ದು, ಮನೆಯಲ್ಲಿಯೇ ಕ್ವಾರಂಟೈನ್​ ಆಗಿದ್ದರು.

ಇದನ್ನೂ ಓದಿ: ಆಮ್ಲಜನಕ ಇಲ್ಲವೆಂದು ರಾತ್ರಿ ವಿಡಿಯೋ ಕಾಲ್, ಮುಂಜಾನೆ ಸಾವು: ನವವಿವಾಹಿತನ ದುರಂತ ಅಂತ್ಯ

ಆದರೆ ಅವರ ಆರೋಗ್ಯ ಹದಗೆಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೇ 4ರಂದು ಪೋಷಕರಿಗೆ ಆಸ್ಪತ್ರೆಯಿಂದ ಕರೆ ಮಾಡಿದ್ದ ದಿನಕರ್, ನನಗೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ. ನನ್ನ ಹೆಂಡತಿಯನ್ನು ಹುಷಾರಾಗಿ ನೋಡಿಕೊಳ್ಳಿ ಎಂದು ಹೇಳಿ ಕೊನೆಯುಸಿರೆಳೆದಿದ್ದಾರೆ.

Last Updated :May 8, 2021, 12:42 PM IST

ABOUT THE AUTHOR

...view details