ನವದೆಹಲಿ: ಕಾನೂನು ಆಯೋಗ ರಚನೆಯಾದ ಎರಡೂವರೆ ವರ್ಷಗಳ ನಂತರ ಕೇಂದ್ರ ಸರ್ಕಾರ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಕಾನೂನು ಸಚಿವ ಕಿರಣ್ ರಿಜಿಜು ಈ ಕುರಿತು ಟ್ವೀಟ್ ಮಾಡಿದ್ದು, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಹೇಳಿದ್ದಾರೆ.
ಇದು 22ನೇ ಕಾನೂನು ಆಯೋಗವಾಗಿದ್ದು, ಮೂರು ವರ್ಷಗಳ ಅವಧಿಗೆಂದು 2020ರ ಫೆಬ್ರವರಿ 24 ರಂದು ರಚಿಸಲಾಗಿತ್ತು. ಆ ಸಂದರ್ಭದಲ್ಲಿ ಅಧಿಕೃತವಾಗಿ ಈ ಆಯೋಗಕ್ಕೆ ಅಧ್ಯಕ್ಷರಾಗಿ ಯಾರನ್ನೂ ನೇಮಕ ಮಾಡದೇ ಇದ್ದರೂ, ರಚನೆಯಾದ ದಿನಾಂಕದ ಪ್ರಕಾರ ಮುಂದಿನ ವರ್ಷ ಫೆಬ್ರುವರಿಗೆ ಅಯೋಗದ ಮೊದಲ ಅವಧಿ ಕೊನೆಗೊಳ್ಳುತ್ತದೆ.