ಕರ್ನಾಟಕ

karnataka

ಹರಿಯಾಣದಲ್ಲಿ ರೈತರ ಮಹಾಪಂಚಾಯತ್.. ಐದು ಪ್ರಸ್ತಾಪಗಳಿಗೆ ಅಂಗೀಕಾರ..

By

Published : Feb 3, 2021, 3:30 PM IST

Updated : Feb 3, 2021, 4:18 PM IST

ದೆಹಲಿ-ಎನ್‌ಸಿಆರ್‌ನಲ್ಲಿರುವ ಸಿಂಘು, ಗಾಜಿಪುರ, ಟಿಕ್ರಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಇಂಟರ್​ನೆಟ್ ಸೇವೆ ಕಡಿತಗೊಳಿಸಿರುವುದರ ವಿರುದ್ಧ, 141 ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಅವರಿಗೆ ಪತ್ರ ಬರೆದಿದ್ದಾರೆ..

ರೈತರ ಮಹಾಪಂಚಾಯತ್
ರೈತರ ಮಹಾಪಂಚಾಯತ್

ಚಂಡೀಗಢ (ಹರಿಯಾಣ) :ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡುವ ಸಲುವಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್​ ಬುಧವಾರ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡಿದ್ದಾರೆ.

ರೈತರ ಮಹಾಪಂಚಾಯತ್

ಮಹಾಪಂಚಾಯತ್ ಸುಮಾರು 50ರೈತ ಮುಖಂಡರನ್ನು ಸಹ ಒಳಗೊಂಡಿದೆ. ಇದರಲ್ಲಿ ರೈತ ಚಳವಳಿಯ ಮುಂಬರುವ ಕಾರ್ಯತಂತ್ರವನ್ನು ರೂಪಿಸಲಾಗುವುದು. ಹರಿಯಾಣದಲ್ಲಿ ನಡೆಯುತ್ತಿರುವ ಮಹಾಪಂಚಾಯತ್​ನ ವೇದಿಕೆ ಮುರಿದು ಬಿದ್ದಿದೆ.

ವೇದಿಕೆಯ ಮೇಲೆ ಹೆಚ್ಚಿನ ಜನರು ಹತ್ತಿದ್ದ ಕಾರಣ ಈ ಅವಘಡ ಸಂಭವಿಸಿದೆ. ಈ ಸಮಯದಲ್ಲಿ ರಾಕೇಶ್ ಟಿಕಾಯತ್​ ಕೂಡ ಅಲ್ಲಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ.

ಓದಿ: ರೈತರ ಮತ್ತೊಂದು ನಡೆ: ಒಗ್ಗಟ್ಟು ಪ್ರದರ್ಶಿಸಲು 'ಮಹಾ ಪಂಚಾಯತ್‌' ಶುರು

ಜಿಂದ್ ಮಹಾಪಂಚಾಯತ್‌ನಲ್ಲಿ 5 ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ. ಜನರು ಕೈ ಎತ್ತುವ ಮೂಲಕ ಎಲ್ಲಾ ಪ್ರಸ್ತಾಪಗಳಿಗೆ ಸಮ್ಮತಿ ನೀಡಿದ್ದಾರೆ.

*ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು

* ಎಂಎಸ್‌ಪಿ ಜಾರಿಗೊಳಿಸಬೇಕು

* ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು

* ಟ್ರ್ಯಾಕ್ಟರ್ ಮತ್ತು ದೆಹಲಿಯಲ್ಲಿ ಬಂಧಿಸಲಾದ ರೈತರನ್ನು ಬಿಡುಗಡೆಗೊಳಿಸಬೇಕು

* ರೈತರ ಸಾಲವನ್ನು ಮನ್ನಾ ಮಾಡಬೇಕು ಎಂಬ ಐದು ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ.

ಸುಪ್ರೀಂ ಮೊರೆ ಹೋದ ವಕೀಲರ ನಿಯೋಗ :ದೆಹಲಿ-ಎನ್‌ಸಿಆರ್‌ನಲ್ಲಿರುವ ಸಿಂಘು, ಗಾಜಿಪುರ, ಟಿಕ್ರಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಇಂಟರ್​ನೆಟ್ ಸೇವೆ ಕಡಿತಗೊಳಿಸಿರುವುದರ ವಿರುದ್ಧ, 141 ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಅವರಿಗೆ ಪತ್ರ ಬರೆದಿದ್ದಾರೆ.

ಅಷ್ಟೇ ಅಲ್ಲ, ರೈತರ ಬಗ್ಗೆ ನಕಲಿ ಸುದ್ದಿ ಹರಡುವ ಪತ್ರಕರ್ತರು ಮತ್ತು ಚಾನೆಲ್‌ಗಳು ಹಾಗೂ ಹಿಂಸಾಚಾರದಲ್ಲಿ ತೊಡಗಿರುವ 200 'ಸ್ಥಳೀಯ ಹುಡ್ಲಮ್‌ಗಳ' ವಿರುದ್ಧವೂ ಕ್ರಮಕೈಗೊಳ್ಳುವಂತೆ ವಕೀಲರ ನಿಯೋಗ ಮನವಿ ಮಾಡಿದೆ.

ಈ ವಿಷಯದ ಬಗ್ಗೆ ಸುಮೋಟೊ ಕಾಗ್ನಿಜೆನ್ಸ್ ತೆಗೆದುಕೊಂಡು ಅಂತರ್ಜಾಲ ಅಮಾನತುಗೊಳಿಸಿರುವ ಗೃಹ ಸಚಿವಾಲಯದ ಆದೇಶವನ್ನು ರದ್ದುಗೊಳಿಸುವಂತೆ ವಕೀಲರು ಉನ್ನತ ನ್ಯಾಯಾಲಯವನ್ನು ಕೋರಿದ್ದಾರೆ.

Last Updated : Feb 3, 2021, 4:18 PM IST

ABOUT THE AUTHOR

...view details