ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ವಿವಾದಿತ ಕೃಷಿ ಕಾಯ್ದೆ ರದ್ಧತಿ ಹೊರತಾಗಿಯೂ ಕನಿಷ್ಠ ಬೆಂಬಲ ಬೆಲೆ ಜಾರಿ, ಲಖೀಂಪುರಿ ಖೇರಿ ಹಾಗೂ ಟ್ರ್ಯಾಕ್ಟರ್ ಮೋರ್ಚಾ ವೇಳೆ ಅನ್ನದಾತರ ಮೇಲೆ ದಾಖಲಾಗಿದ್ದ ಎಫ್ಐಆರ್ ಹಿಂಪಡೆದುಕೊಳ್ಳುವಂತೆ ರೈತರು ಪಟ್ಟು ಹಿಡಿದು, ತಮ್ಮ ಹೋರಾಟ ಮುಂದುವರೆಸಿದ್ದರು.
ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಮಧ್ಯೆ ಮಹತ್ವದ ಒಪ್ಪಂದವಾಗಿದೆ. ಮೋದಿ ಸರ್ಕಾರ ರೈತ ಸಂಘಟನೆಗಳ ಎಲ್ಲ ಬೇಡಿಕೆ ಈಡೇರಿಸುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸಿ ದೆಹಲಿ-ಹರಿಯಾಣದ ಸಿಂಘು, ಗಾಜಿಪುರ ಗಡಿಯಿಂದ ರೈತರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ.
ವಾಪಸ್ ಮನೆಗೆ ಮರಳಲು ರೈತರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಒಂದಿಷ್ಟು ಮಂದಿ ತಾವಿದ್ದ ಸ್ಥಳದಿಂದ ತೆರಳಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ಸೇರಿದ್ದ ರೈತರ ನಡುವೆ ಒಂದು ಗಟ್ಟಿ ಬಾಂಧವ್ಯ ಏರ್ಪಟ್ಟಿದೆ. ಒಬ್ಬರನ್ನೊಬ್ಬರು ಬಹಳಾನೇ ಹಚ್ಚಿಕೊಂಡಿದ್ದರು. ಇದೀಗ ವಾಪಸ್ ತೆರಳುವ ವೇಳೆ ಅನೇಕ ರೈತರ ಕಣ್ಣುಗಳು ತೇವವಾಗಿವೆ.