ಕರ್ನಾಟಕ

karnataka

ಬೇಡಿಕೆ ಈಡೇರುವವರೆಗೆ ರೈತ ಚಳವಳಿ ಮುಂದುವರೆಯುತ್ತದೆ: ಟಿಕಾಯತ್

By

Published : Jul 15, 2021, 2:58 PM IST

ಜುಲೈ 19ರಿಂದ ಆಗಸ್ಟ್ 13ರವರೆಗೆ ಸಂಸತ್​​ನ ಮಾನ್ಸೂನ್ ಅಧಿವೇಶನ ನಡೆಯಲಿದೆ. ಜುಲೈ 22ರಂದು ಸಂಸತ್​ನ ಹೊರಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಕೇಶ್ ಟಿಕಾಯತ್ ಹೇಳಿದರು.

Farmers' movement to continue until Govt fulfils demands says Tikait
ಬೇಡಿಕೆ ಈಡೇರುವವರೆಗೆ ರೈತ ಚಳವಳಿ ಮುಂದುವರೆಯುತ್ತದೆ: ಟಿಕಾಯತ್ ಟ್ವೀಟ್​

ನವದೆಹಲಿ:ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ರೈತರ ಬೇಡಿಕೆಗಳಿಗೆ ಒಪ್ಪದೇ ಇದ್ದರೆ, ಬೇಡಿಕೆ ಈಡೇರುವವರೆಗೆ ಚಳವಳಿ ಮುಂದುವರೆಯುತ್ತದೆ ಎಂದು ಭಾರತ್ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸರ್ಕಾರ ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದ್ದಾರೆ.

ಬುಧವಾರ ರೈತ ಪ್ರತಿಭಟನೆ ಬಗ್ಗೆ ಮಾತನಾಡುತ್ತಾ, ಜುಲೈ 22ರಂದು ಪಾರ್ಲಿಮೆಂಟ್ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ರೈತರು ಬಸ್​ ಮೂಲಕ ಪಾರ್ಲಿಮೆಂಟ್​ಗೆ ತೆರಳಲಿದ್ದು, ಸುಮಾರು ಇನ್ನೂರು ಮಂದಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಾವೇ ಬಸ್ ಪ್ರಯಾಣ ದರ ನೀಡುವುದಾಗಿಯೂ ತಿಳಿಸಿದ್ದಾರೆ.

ಇದನ್ನೂ ಓದಿ:ನಟ ದರ್ಶನ್​ಗೆ ವಂಚನೆ, ಕೇಸ್​ನ ಸಂಪೂರ್ಣ ತನಿಖೆಗೆ ಸೂಚನೆ: ಗೃಹ ಸಚಿವ ಬೊಮ್ಮಾಯಿ

ABOUT THE AUTHOR

...view details