ಕರ್ನಾಟಕ

karnataka

ಸೋಮವಾರದ ಪಂಚಾಂಗ, ರಾಶಿ ಭವಿಷ್ಯ: ಈ ರಾಶಿಯವರಿಗೆ ಸಂಭ್ರಮದ ದಿನ

By ETV Bharat Karnataka Team

Published : Jan 15, 2024, 4:01 AM IST

ಸೋಮವಾರದ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

Etv Bharatetv-bharat-horoscope-today
Etv Bharatಸೋಮವಾರದ ಪಂಚಾಂಗ, ರಾಶಿ ಭವಿಷ್ಯ: ಈ ರಾಶಿಯವರಿಗಿಂದು ಶುಭ

ಇಂದಿನ ಪಂಚಾಂಗ :

ದಿನಾಂಕ: 15-01-2024, ಸೋಮವಾರ

ಸಂವತ್ಸರ: ಶುಭಕೃತ್

ಆಯನ: ಉತ್ತರಾಯಣ

ಮಾಸ: ಪುಷ್ಯ

ಪಕ್ಷ: ಶುಕ್ಲ

ತಿಥಿ:ಪಂಚಮಿ

ನಕ್ಷತ್ರ: ಸ್ತಭಿಷ

ಸೂರ್ಯೋದಯ: ಮುಂಜಾನೆ 06:45 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 01:53 ರಿಂದ 03:18 ಗಂಟೆ ವರೆಗೆ

ವರ್ಜ್ಯಂ: ಸಂಜೆ 6:15 ರಿಂದ 7:50 ಗಂಟೆಗೆ

ದುರ್ಮುಹೂರ್ತ​:ಮಧ್ಯಾಹ್ನ 01:09 ರಿಂದ 01:57 ಗಂಟೆ ವರೆಗೆ ಹಾಗೂ 3:33 ರಿಂದ 4:21 ಗಂಟೆ ವರೆಗೆ

ರಾಹುಕಾಲ: ಬೆಳಗ್ಗೆ 8:10 ರಿಂದ 09:36 ಗಂಟೆ ವರೆಗೆ

ಸೂರ್ಯಾಸ್ತ: ಸಂಜೆ 06:09 ಗಂಟೆಗೆ

ಇಂದಿನ ರಾಶಿಭವಿಷ್ಯ:

ಮೇಷ: ನಿಮಗೆ ದೊಡ್ಡ ಮಿತ್ರವೃಂದವಿದೆ, ಮತ್ತು ಅವರಲ್ಲಿ ಬಹುತೇಕರು ಸಾಂದರ್ಭಿಕ ಮಿತ್ರರಾದರೂ, ಕೆಲವೊಮ್ಮೆ ಅವರು ಅನುಕೂಲಕರವಾಗುತ್ತಾರೆ. ಅವರು ಕೆಲ ತಿರಸ್ಕಾರಗಳಿಂದ ನೀವು ಹೊರಬರಲು ನೆರವಾಗಬಹುದು. ಇದು ಮಿತ್ರರು ವಹಿಸುವ ಪಾತ್ರ ಕುರಿತೂ ತಿಳಿಸುತ್ತದೆ.

ವೃಷಭ: ನೀವು ಇಂದು ಜನರು ಮತ್ತು ವಸ್ತುಗಳ ಕುರಿತು ಅತ್ಯಂತ ಪೊಸೆಸಿವ್ ಭಾವನೆ ಅನುಭವಿಸುತ್ತೀರಿ. ನೀವು ಇದರ ಪರಿಣಾಮದಿಂದ ಪ್ರತಿಯೊಂದರ ಕುರಿತೂ ಮುಖ್ಯವಾಗಿ ಜನರ ಕುರಿತು ಅನುಮಾನ, ಅನಿಶ್ಚಿತತೆ ಮತ್ತು ಅಭದ್ರತೆಯ ಭಾವನೆ ಅನುಭವಿಸುತ್ತೀರಿ. ನೀವು ನಿಮಗೆ ಹತ್ತಿರವಾಗಿರುವವರ ಭಾವನೆಗಳು ಮತ್ತು ಉದ್ದೇಶಗಳನ್ನೂ ಅನುಮಾನಿಸುತ್ತೀರಿ. ಮನೆಯಲ್ಲಿ ಅಹಿತಕರ ಆತಂಕ ಮತ್ತು ಉದ್ವೇಗ ಇರುತ್ತದೆ. ಇದು ನಿಮಗೆ ಮುಖ್ಯವಾಗಿ ಸಂತೋಷದ ದಿನವಲ್ಲ. ವಿವೇಕ ಮತ್ತು ಎಚ್ಚರಿಕೆಯಿಂದ ವರ್ತಿಸಿ.

ಮಿಥುನ: ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಟ್ರಿಪ್ ಹೋಗುವ ಬಯಕೆಯಲ್ಲಿದ್ದೀರಿ. ಈ ಟ್ರಿಪ್ ಅನ್ನು ಕೆಲ ಕಾಲಗಳಿಂದಲೂ ಯೋಜಿಸುತ್ತಿದ್ದೀರಿ. ಈ ದಿನ ವಿನೋದ, ಉಲ್ಲಾಸ ಮತ್ತು ಮನರಂಜನೆಯಿಂದ ಕೂಡಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ.

ಕರ್ಕಾಟಕ: ನೀವು ಬದ್ಧತೆಯಿಂದ ಕೆಲಸ ಮಾಡಿದರೂ ನೀವು ತಿರಸ್ಕಾರಕ್ಕೆ ಒಳಗಾಗುತ್ತೀರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಬದ್ಧತೆಯನ್ನಯ ಪೂರ್ಣ ಪ್ರಶಂಸೆ ಮಾಡುವುದಿಲ್ಲ. ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ ಮತ್ತು ದುಃಖಿತರಾಗಬೇಡಿ. ಕೊನೆಯಲ್ಲಿ ನೀವು ನಿಮ್ಮ ದೃಢತೆಯಿಂದ ಮತ್ತು ದಿಟ್ಟತೆಯಿದ ಗೆಲ್ಲುತ್ತೀರಿ. ಸಂಜೆಯ ವೇಳೆಗೆ ನಿಮಗೆ ಆತಂಕದ ಕ್ಷಣಗಳ ಸಾಧ್ಯತೆ ಇದೆ.

ಸಿಂಹ: ವ್ಯಾಪಾರಿಗಳು ಮತ್ತು ಉದ್ಯಮದಾರರು ಇಂದು ಎತ್ತರಿಸಿದ ಸ್ಪರ್ಧೆ ಎದುರಿಸುತ್ತಾರೆ. ಹಣಕಾಸಿನ ನಷ್ಟಗಳು ಸಾಧ್ಯ. ಹೂಡಿಕೆಗಳು ಮತ್ತು ಸಟ್ಟಾ ವ್ಯವಹಾರಕ್ಕೆ ಇದು ಒಳ್ಳೆಯ ದಿನವಲ್ಲ. ಜನರೊಂದಿಗೆ ವಾಗ್ವಾದ ತಪ್ಪಿಸಿ. ಇಂದು ನಿಮ್ಮ ಎಲ್ಲ ವಹಿವಾಟುಗಳಲ್ಲೂ ಎಚ್ಚರಿಕೆ ವಹಿಸಿ.

ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.

ತುಲಾ: ನೀವು ಇಂದು ವಿಭಿನ್ನ ವ್ಯಕ್ತಿಯಾಗಿದ್ದೀರಿ, ಸಂಪೂರ್ಣ ಹುರುಪು ಮತ್ತು ಉತ್ಸಾಹ. ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸಲು ಶಕ್ತರಾಗುತ್ತೀರಿ, ಅದೇ ಸಮಯಕ್ಕೆ ನೀವು ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುನ್ನಡೆದು ಪ್ರತಿಷ್ಠೆಯನ್ನೂ ಸಂಪಾದಿಸುತ್ತೀರಿ. ನೀವು ವಿದೇಶದಲ್ಲಿ ಉನ್ನತ ಶಿಕ್ಷಣ ಕುರಿತು ನಿರ್ಧರಿಸಬೇಕಾಗುತ್ತದೆ.

ವೃಶ್ಚಿಕ: ಇಂದು ನಿಮ್ಮ ಎಲ್ಲ ಶಕ್ತಿಗಳೂ ಪ್ರೀತಿಯ ವಸ್ತುವಿನತ್ತ ತಿರುಗಿವೆ. ಸಂಶೋಧನೆ ಆಧರಿತ ಕೆಲಸ ಒಂದು ಆಯ್ಕೆಯೂ ಆಗಿದೆ. ನೀವು ಹಳೆಯ ಒಳ್ಳೆಯ ಸಮಯದ ಬಗ್ಗೆ ಮಾತನಾಡಲು ಮತ್ತು ಮಹತ್ತರ ಸಮಯ ಕಳೆಯಲು ವಿಶೇಷ ವ್ಯಕ್ತಿಯನ್ನು ಕಂಡುಕೊಳ್ಳುತ್ತೀರಿ.

ಧನು: ಪರೋಪಕಾರ ಇಂದು ನಿಮ್ಮ ಮಧ್ಯದ ಹೆಸರು. ನೇರ ಹಾಗೂ ಮುಕ್ತ ಮನಸ್ಸು ಹೊಂದಿರುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ನೀವು ನಿಮ್ಮ ಜೀವನಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತೀರಿ. ಇದು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂಬ ಭಾವನೆ ತರುತ್ತದೆ.

ಮಕರ: ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವುದು ಸುಲಭ. ಆದರೆ ನೀವು ನಿಮ್ಮ ತಾಳ್ಮೆಯನ್ನು ಉಳಿಸಿಕೊಳ್ಳುವುದು ನಿಮ್ಮ ಗುರಿ ತಲುಪಲು ನೆರವಾಗುತ್ತದೆ. ಕೆಲಸದಲ್ಲಿ ಯಾರೊಂದಿಗೂ ವಾಗ್ಯುದ್ಧ ಮಾಡಬೇಡಿ, ಅದು ನಿಮ್ಮನ್ನು ಗಂಭೀರವಾಗಿ ಹಾನಿಯುಂಟು ಮಾಡುತ್ತದೆ. ವೈಯಕ್ತಿಕವಾಗಿ, ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿರುತ್ತೀರಿ ಮತ್ತು ಅವರು ವಿಶೇಷ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತೀರಿ.

ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ: ನೀವು ಹೆಚ್ಚು ಹಣದ ಬೆನ್ನು ಹತ್ತಿದ ವ್ಯಕ್ತಿಯಲ್ಲ. ಭವಿಷ್ಯಕ್ಕೆ ನಿಮ್ಮ ಹಣ ಯೋಜಿಸುವುದು ನಿಜಕ್ಕೂ ಸುಲಭವಲ್ಲ. ಪ್ರತಿದಿನವನ್ನೂ ಅದು ಬಂದಂತೆ ತೆಗೆದುಕೊಳ್ಳುತ್ತೀರಿ. ಆದರೆ, ಇಂದು ನಿಮಗೆ ಒಂದು ಬಗೆಯ ಸಾಕ್ಷಾತ್ಕಾರವಾಗುತ್ತದೆ ಮತ್ತು ಜೀವನ ಕುರಿತು ಹೆಚ್ಚು ಗಂಭೀರವಾಗುತ್ತೀರಿ. ಅಂತಿಮವಾಗಿ ನೀವು ನಿಮ್ಮ ಹಣಕಾಸಿನ ಯೋಜನೆಯ ಮೌಲ್ಯ ಕಂಡುಕೊಳ್ಳುತ್ತೀರಿ. ಅದನ್ನು ಅಪಮೌಲ್ಯ ಮಾಡದಿರಿ.

ABOUT THE AUTHOR

...view details