ಕರ್ನಾಟಕ

karnataka

ವೈದ್ಯನ ಮೇಲಿನ ಸೇಡು.. ಮಗನನ್ನು ಕಿಡ್ನಾಪ್​​ ಮಾಡಿ ಕೊಂದ ಮಾಜಿ ಉದ್ಯೋಗಿಗಳು!

By

Published : Jan 31, 2022, 11:22 AM IST

ವೈದ್ಯನ ಮಾಜಿ ಉದ್ಯೋಗಿಗಳೇ ಆತನ 8 ವರ್ಷದ ಮಗನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಘಟನೆ ಬುಲಂದ್​ಶಹರ್​ ಜಿಲ್ಲೆಯಲ್ಲಿ ನಡೆದಿದೆ.

Doctor son kidnapped and killed by his ex employees  Doctor son kidnapped and killed in Uttar Pradesh  Uttar Pradesh crime news  ಮಾಜಿ ಉದ್ಯೋಗಿಗಳಿಂದ ವೈದ್ಯ ಮಗನ ಕಿಡ್ನ್ಯಾಪ್​ ಮತ್ತು ಕೊಲೆ  ಉತ್ತರಪ್ರದೇಶದಲ್ಲಿ ವೈದ್ಯ ಮಗನ ಅಪಹರಣ ಮತ್ತು ಕೊಲೆ  ಉತ್ತರಪ್ರದೇಶ ಅಪರಾಧ ಸುದ್ದಿ
ಮಗನನ್ನು ಕಿಡ್ನ್ಯಾಪ್​ ಮಾಡಿ ಕೊಂದ ಮಾಜಿ ಉದ್ಯೋಗಿಗಳು!

ಬುಲಂದ್‌ಶಹರ್: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಎಂಟು ವರ್ಷದ ವೈದ್ಯರೊಬ್ಬರ ಪುತ್ರನ ಶವವನ್ನು ಬುಲಂದ್‌ಶಹರ್ ಪೊಲೀಸರು ಭಾನುವಾರ ಪತ್ತೆ ಮಾಡಿದ್ದಾರೆ.

ಶುಕ್ರವಾರ ರಾತ್ರಿ ಮಗುವನ್ನು ಅಪಹರಿಸಿ ಕೊಂದ ಆರೋಪದಲ್ಲಿ ಬಂಧಿತರಾಗಿರುವ ವೈದ್ಯರ ನೌಕರರಾದ ನಿಜಾಮ್ ಮತ್ತು ಶಾಹಿದ್ ಅವರ ನಿದರ್ಶನದಲ್ಲಿ ಮಗುವಿನ ಶವವನ್ನು ಛಾತಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ದೇಬಾಯಿಯ ವೃತ್ತ ಅಧಿಕಾರಿ ವಂದನಾ ಶರ್ಮಾ ಭಾನುವಾರ ತಿಳಿಸಿದ್ದಾರೆ. .

ಶುಕ್ರವಾರ ಸಂಜೆ ಮಗ ನಾಪತ್ತೆಯಾದ ನಂತರ ಮಗುವಿನ ತಂದೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದರು ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು.

ಓದಿ:16ರ ಬಾಲೆ ಪುಸಲಾಯಿಸಿ ಕರೆದೊಯ್ದು ತಾಳಿ ಕಟ್ಟಿದ..ಮೂರು ದಿನ ಸಂಸಾರ ನಡೆಸಿದ ಯುವಕನ ಬಂಧನ

ಪ್ರಾಥಮಿಕ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯದ ಮೇಲೆ ಪೊಲೀಸರು ವೈದ್ಯರ ಇಬ್ಬರು ಮಾಜಿ ಉದ್ಯೋಗಿಗಳನ್ನು ವಶಕ್ಕೆ ತೆಗೆದುಕೊಂಡರು. ಈ ಹಿಂದೆ ವೈದ್ಯರ ಬಳಿ ಕಾಂಪೌಂಡರ್‌ಗಳಾಗಿ ಕೆಲಸ ಮಾಡುತ್ತಿದ್ದ ನಿಜಾಮ್ ಮತ್ತು ಶಾಹಿದ್ ತಮ್ಮ ಕಾರ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾಗೊಳಿಸಿದ್ದರು.

ಹೀಗಾಗಿ ಅವರಿಬ್ಬರು ವೈದ್ಯನ ಮೇಲಿನ ದ್ವೇಷ ಸಾಗಿಸುತ್ತಲೇ ಬಂದರು. ಹೀಗಾಗಿ ನಾವರಿಬ್ಬರು ಮಗುವನ್ನು ಅಪಹರಿಸಿ ಹತ್ಯೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಇನ್ನು ಮಗುವಿನ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details