ಕರ್ನಾಟಕ

karnataka

ಮರ್ಯಾದಾ ಹತ್ಯೆ ಪ್ರಕರಣ: ತಂದೆ, ಪುತ್ರನಿಂದ ಜೋಡಿ ಕೊಲೆ, ಆರೋಪಿಗಳಿಬ್ಬರು ಅಂದರ್..!

By ETV Bharat Karnataka Team

Published : Aug 24, 2023, 10:44 AM IST

Gonda honor killing case: ಗೊಂಡಾ ಮರ್ಯಾದಾ ಹತ್ಯೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಆರೋಪಿಗಳಾದ ತಂದೆ ಮತ್ತು ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಯುವಕನ ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದಿದ್ದು, ಪುತ್ರಿಯ ಶವವನ್ನು ಅಯೋಧ್ಯೆಯಲ್ಲಿ ಹೂತು ಹಾಕಿದ್ದಾರೆ.

Gonda honor killing case
ಮರ್ಯಾದೆ ಹತ್ಯೆ ಪ್ರಕರಣ: ತಂದೆ, ಪುತ್ರನಿಂದ ಜೋಡಿ ಕೊಲೆ, ಆರೋಪಿಗಳಿಬ್ಬರು ಅಂದರ್..!

ಗೊಂಡಾ (ಉತ್ತರ ಪ್ರದೇಶ):ಜಿಲ್ಲೆಯ ಧನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಕೊಲೆ ಆರೋಪಿ ತಂದೆ ಮತ್ತು ಆತನ ಪುತ್ರನನ್ನು ಬಂಧಿಸಿದ್ದಾರೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಮತ್ತು ಆಕೆಯ ಸಹೋದರ ಮಂಗಳವಾರ ಪ್ರಿಯಕರ - ಗೆಳತಿಯನ್ನು ಕೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಇಬ್ಬರೂ ಆರೋಪಿಗಳು ತಮ್ಮ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾಣೆಪುರ ಪೊಲೀಸರು ಹೇಳಿದ್ದೇನು?:ಧಾಣೆಪುರ ಪೊಲೀಸರು ಹೇಳುವ ಪ್ರಕಾರ, ’’ಅದೇ ಗ್ರಾಮದ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೇಮಿಗಳಿಬ್ಬರು ಆಗಾಗ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಸೋಮವಾರ ತಡರಾತ್ರಿ ಕೂಡಾ ಇಬ್ಬರು ಭೇಟಿಯಾಗಿದ್ದರು. ಯುವತಿ ತಂದೆ ಹಾಗೂ ಆಕೆಯ ಸಹೋದರ ನೋಡಿದ್ದಾರೆ. ಇದರಿಂದ ಕೋಪಗೊಂಡ ತಂದೆ ಮತ್ತು ಮಗ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದಿದ್ದಾರೆ. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. 24 ಗಂಟೆಯೊಳಗೆ ಈ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಮರ್ಯಾದಾ ಹತ್ಯೆ ಪ್ರಕರಣ ಬಯಲು:ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ಪ್ರಜಾಪತಿ ಪ್ರತಿಕ್ರಿಯೆ ನೀಡಿದ್ದಾರೆ. ’’ತಮ್ಮ 19 ವರ್ಷದ ಪುತ್ರ ನಾಪತ್ತೆಯಾಗಿರುವ ಕುರಿತು ಸ್ಥಳೀಯ ಮಹಿಳೆಯೊಬ್ಬರು ಥಾಣೆಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ ವೇಳೆಯಲ್ಲಿ, ಆ ಯುವಕ ಗ್ರಾಮದ ಹುಡುಗಿಯೊಬ್ಬಳೊಂದಿಗೆ ಪ್ರೇಮ ಸಂಬಂಧವಿರುವುದು ಪತ್ತೆಯಾಗಿದೆ. ಪೊಲೀಸರು ಬಾಲಕಿಯ ಮನೆಗೆ ತಲುಪಿದಾಗ ಆಕೆ ಮೃತಪಟ್ಟಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಇದಾದ ನಂತರ ಪೊಲೀಸರಿಗೆ ಸ್ವಲ್ಪ ಆತಂಕ ಉಂಟಾಗಿದ್ದು, ಬಾಲಕಿಯ ಕುಟುಂಬ ಸದಸ್ಯರನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ ಪ್ರಕರಣ ಬಯಲಿಗೆ ಬಂದಿದೆ’’ ಎಂದು ಎಸ್​​​ಪಿ ಮಾಹಿತಿ ನೀಡಿದ್ದಾರೆ.

ತಂದೆ - ಮಗನನ್ನು ಬಂಧಿಸಿದ ಧಣೆಪುರ ಪೊಲೀಸರು:ಹಂತಕ ತಂದೆ- ಮಗನನ್ನು ಧಣೆಪುರ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ನೀಡಿ ಮಾಹಿತಿ ಆಧರಿಸಿ, ಯುವತಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಇಬ್ಬರೂ ಯುವತಿಯ ಮೃತದೇಹವನ್ನು ಅಯೋಧ್ಯೆಯ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದರು. ಈ ಸಂಬಂಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಕರಣ ಬೇಧಿಸಿದ ಪೊಲೀಸ್​ ತಂಡಕ್ಕೆ ಉನ್ನತ ಅಧಿಕಾರಿಗಳು ಬಹುಮಾನ ಸಹ ಘೋಷಿಸಿದ್ದಾರೆ.

ಇದನ್ನೂ ಓದಿ:ಸಿಜೇರಿಯನ್​ ವೇಳೆ ಹೊಟ್ಟೆಯಲ್ಲಿ ಹತ್ತಿ ಬಿಟ್ಟಿದ್ದ ಆರೋಪ : ಗಂಡು ಮಗುವಿಗೆ ಜನ್ಮ ನೀಡಿದ 3 ದಿನಗಳ ನಂತರ ಮಹಿಳೆ ಸಾವು..!

ABOUT THE AUTHOR

...view details