ಕರ್ನಾಟಕ

karnataka

ಛತ್ತೀಸಗಢ; ಎನ್​ಕೌಂಟರ್​ನಲ್ಲಿ ಇಬ್ಬರು ನಕ್ಸಲರು ಹತ, ಶಸ್ತ್ರಾಸ್ತ್ರ ವಶ

By

Published : Jun 20, 2021, 7:28 PM IST

ಛತ್ತೀಸಗಢದಲ್ಲಿ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಜೂನ್ ತಿಂಗಳಲ್ಲಿ ಇದುವರೆಗೆ ಎಕೆ47 47 ರೈಫಲ್, ಒಂದು ಎಸ್‌ಎಲ್‌ಆರ್ ರೈಫಲ್, ಎರಡು 303 ರೈಫಲ್, ಎರಡು 315 ರೈಫಲ್ ಜೊತೆಗೆ ನಕ್ಸಲರ 5 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Chhattisgarh
ಛತ್ತೀಸ್​ಗಢ

ನಾರಾಯಣಪುರ (ಛತ್ತೀಸ​ಗಢ): ನಾರಾಯಣಪುರ ಜಿಲ್ಲೆಯ ಅಭೂಜ್‌ಮಾದ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ನಂತರ ಇಬ್ಬರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಸಂಘಟನಾ ತಂಡದ ಸಿಪಿಐ ಮಾವೋವಾದಿ ಕಾರ್ಯಕರ್ತರು ಮತ್ತು ಮಾಡ್ ವಿಭಾಗದ ಪ್ರದೇಶ ಸಮಿತಿ ಸದಸ್ಯರು ಅಡಗಿ ಕುಳಿತಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿ, ಡಿಆರ್‌ಜಿ ನಾರಾಯಣಪುರದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

"ಬೆಳಗ್ಗೆ ಸುಮಾರು 9 ಗಂಟೆಗೆ ಇಟುಲ್ ಜಂಗಲ್ (ಪಿಎಸ್ ಓರ್ಚಾ, ನಾರಾಯಣಪುರ) ಬಳಿ ಡಿಆರ್​ಜಿ ತಂಡದ ನಡುವೆ ಗುಂಡಿನ ಚಕಮಕಿ ನಡೆದಿದೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಒಬ್ಬ ನಕ್ಸಲ್ ಮೃತ ದೇಹ, ಒಂದು 303 ರೈಫಲ್ ಮತ್ತು ಕ್ಯಾಂಪಿಂಗ್ ಸ್ಥಳದಿಂದ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

"ಕೊರವಾಯಾ ಕಾಡಿನ ಬಳಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಮಧ್ಯಾಹ್ನದ ಮೇಳೆ ಮತ್ತೊಮ್ಮೆ ಗುಂಡಿನ ಚಕಮಕಿ ಸಂಭವಿಸಿದೆ.ಈ ವೇಳೆ ಮತ್ತೋರ್ವ ಮಾವೋವಾದಿ ಸಾವನ್ನಪ್ಪಿದ್ದು, ಆತನ ದೇಹ ಮತ್ತು 315 ಬೋರ್ ರೈಫಲ್ ಮತ್ತು ಇತರ ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಚಕಮಕಿ ನಂತರ ಸ್ಥಳದಿಂದ ಪರಾರಿಯಾಗಿದ್ದ ಇತರ ನಕ್ಸಲ್ ಕಾರ್ಯಕರ್ತರನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಸುಂದರರಾಜ್ ಪಿ, "ಜೂನ್ ತಿಂಗಳಲ್ಲಿ ಇದುವರೆಗೆ ಎಕೆ47 47 ರೈಫಲ್, ಒಂದು ಎಸ್‌ಎಲ್‌ಆರ್ ರೈಫಲ್, ಎರಡು 303 ರೈಫಲ್, ಎರಡು 315 ರೈಫಲ್ ಜೊತೆಗೆ ನಕ್ಸಲರ 5 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಗಳನ್ನು ನಿರ್ದಿಷ್ಟ ಗುಪ್ತಚರ ಒಳಹರಿವಿನ ಆಧಾರದ ಮೇಲೆ ನಡೆಸಲಾಗಿದೆ. ಮುಂಬರುವ ಮಾನ್ಸೂನ್ ಋತುವಿನಲ್ಲಿ ಬಸ್ತಾರ್ ಶ್ರೇಣಿಯ ಎಲ್‌ಡಬ್ಲ್ಯುಇ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು" ಎಂದರು.

ABOUT THE AUTHOR

...view details