ಕರ್ನಾಟಕ

karnataka

ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವುದು ಮತ್ತು ಸಂತೃಪ್ತಿಯ ನೀತಿ ಪರಸ್ಪರ ಪೂರಕ: ಮೋದಿ

By

Published : Feb 27, 2023, 3:21 PM IST

ಬಜೆಟ್​ ನಂತರ ಅದಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ಚರ್ಚಿಸುವ ಯೋಜನೆಯ ಭಾಗವಾಗಿ ಕೇಂದ್ರವು 12 ವೆಬಿನಾರ್​ ಸರಣಿ ಆಯೋಜಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Approach of reaching last mile policy
Approach of reaching last mile policy

ನವದೆಹಲಿ: ಕೇಂದ್ರ ಸರಕಾರ ಆಯೋಜಿಸುತ್ತಿರುವ ಬಜೆಟ್​ ನಂತರದ 12 ವೆಬಿನಾರ್‌ಗಳ ಸರಣಿಯ ನಾಲ್ಕನೇ ವೆಬಿನಾರ್‌ನಲ್ಲಿ 'ರೀಚಿಂಗ್‌ ದಿ ಲಾಸ್ಟ್‌ ಮೈಲ್‌' ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾತನಾಡಿದರು. ಇಂದಿನ ವೆಬಿನಾರ್‌ನ ವಿಷಯವಾದ ಸಂತೃಪ್ತಿ ನೀತಿಯ ಹಿಂದಿನ ಚಿಂತನೆ ವಿವರಿಸಿದ ಪ್ರಧಾನಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ವಿಧಾನ ಮತ್ತು ಸಂತೃಪ್ತಿ ನೀತಿ ಪರಸ್ಪರ ಪೂರಕ ಎಂದು ಹೇಳಿದರು.

ದೇಶದ ಪ್ರತಿಯೊಂದು ಭಾಗದ ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ನಾವು ನಿರ್ಧರಿಸಿದ ದಿನ ಸ್ಥಳೀಯ ಮಟ್ಟದಲ್ಲಿ ಕೆಲಸದಲ್ಲಿ ತುಂಬಾ ದೊಡ್ಡ ಬದಲಾವಣೆಯನ್ನು ನಾವು ಕಾಣುತ್ತೇವೆ. ಸಂತೃಪ್ತಿ ನೀತಿಯ ಹಿಂದಿನ ಗುರಿ ಇದೇ ಆಗಿದೆ. ನಾವು ಪ್ರತಿಯೊಬ್ಬರನ್ನೂ ತಲುಪುವ ನಿರ್ಧಾರ ಮಾಡಿದಾಗ ಅಲ್ಲಿ ತಾರತಮ್ಯ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದವೇ ಇರಲ್ಲ. ಆಗ ಮಾತ್ರ ನಾವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯ ಎಂದು ಎಂದರು.

ಈ ಹಿಂದೆ ಮೂಲ ಸೌಕರ್ಯಗಳಿಗಾಗಿ ಬಡವರು ಸರಕಾರದ ಹಿಂದೆ ಓಡುತ್ತಿದ್ದರು. ಆದರೆ ಈಗ ಸರಕಾರವೇ ಬಡವರ ಮನೆಬಾಗಿಲಿಗೆ ತಲುಪುತ್ತಿದೆ ಎಂದು ಅವರು ಹೇಳಿದರು. ವೆಬಿನಾರ್‌ಗಳನ್ನು ಆಯೋಜಿಸುವ ಹಿಂದಿನ ಉದ್ದೇಶವು ಕೇಂದ್ರ ಬಜೆಟ್​ 2023 ರಲ್ಲಿ ಘೋಷಿತ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆಗಳನ್ನು ಪಡೆಯುವುದಾಗಿದೆ. ತಮ್ಮ ಭಾಷಣದ ಆರಂಭಿಕ ಭಾಗದಲ್ಲಿ ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ಮಹತ್ವವನ್ನು ಒತ್ತಿ ಹೇಳಿದ ಮೋದಿ, ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಬಜೆಟ್ ನಂತರ ಅದಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ಚರ್ಚೆ ನಡೆಸುವ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ಅನುಷ್ಠಾನ ಮತ್ತು ಕಾಲಮಿತಿಯಲ್ಲಿ ವಿತರಣೆ ಪೂರೈಸುವ ದೃಷ್ಟಿಯಿಂದ ಇದು ಮುಖ್ಯವಾಗಿದೆ. ಇದು ತೆರಿಗೆದಾರರ ಹಣದ ಪ್ರತಿ ಪೈಸೆ ಸರಿಯಾಗಿ ಬಳಕೆಯಾಗುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು. ಅವರು ಉತ್ತಮ ಆಡಳಿತದ ಶಕ್ತಿ ಮತ್ತು ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ತಲುಪಿಸುವುದನ್ನು ವಿವರಿಸಲು ಮಿಷನ್ ಇಂದ್ರಧನುಷ್ ಮತ್ತು ಕೋವಿಡ್​ -19 ಲಸಿಕಾ ಯೋಜನೆಯ ಜಾರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.

ನಾವು ಉತ್ತಮ ಆಡಳಿತಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಕೊನೆಯ ಮೈಲಿಯನ್ನು ತಲುಪುವ ನಮ್ಮ ಗುರಿಯನ್ನು ಹೆಚ್ಚು ಸುಲಭವಾಗಿ ಸಾಧಿಸಲಾಗುತ್ತದೆ ಎಂದು ಅವರು ಹೇಳಿದರು. ಗಟ್ಟಿಯಾದ ತಾಳಿಕೆ ಬರುವ ಆದರೆ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಿಸಲು ಯಾವ ರೀತಿ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂಬುದರ ಕುರಿತು ಚರ್ಚಿಸುವಂತೆ ಸಂಬಂಧಿಸಿದ ಎಲ್ಲರಿಗೂ ಪ್ರಧಾನಿ ಮೋದಿ ಕೇಳಿದರು. ಸೌರಶಕ್ತಿಯಿಂದ ಪ್ರಯೋಜನ ಪಡೆಯುವ ಸುಲಭ ಮಾರ್ಗಗಳ ಬಗ್ಗೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವೀಕಾರಾರ್ಹವಾದ ಗುಂಪು ವಸತಿ ಮಾದರಿಗಳ ಬಗ್ಗೆ ಚರ್ಚಿಸುವಂತೆಯೂ ಅವರು ಹೇಳಿದರು. ಈ ವರ್ಷದ ಯೂನಿಯನ್ ಬಜೆಟ್‌ನಲ್ಲಿ ವಸತಿ ಯೋಜನೆಯಡಿ ಸುಮಾರು 80,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಇದು ಶೇ 66ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ:449.22 ಕೋಟಿ ರೂ. ವೆಚ್ಚದ ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನೆ: ಹಲವು ವಿಶೇಷತೆಗಳಿಂದ ಕೂಡಿದ ರಾಜ್ಯದ 9ನೇ ಏರ್​​ಪೋರ್ಟ್​​

ABOUT THE AUTHOR

...view details