ETV Bharat / bharat

'ಕ್ರಿಮಿನಲ್​ಗಳು ರಾಜಕೀಯಕ್ಕೆ ಬರದಂತೆ ತಡೆಯುವುದು ಸಂಸತ್ತಿನ ಸಾಮೂಹಿಕ ಜವಾಬ್ದಾರಿ'

author img

By

Published : Jul 5, 2022, 2:54 PM IST

ಪ್ರಜಾಪ್ರಭುತ್ವ ಉಳಿಸಲು ಮತ್ತು ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಅಡಿ ಆಡಳಿತ ನಡೆಯಲು ಹಾಗೂ ನೆಲದ ಕಾನೂನಿನ ಪ್ರಕಾರ ದೇಶ ಮುನ್ನಡೆಯುವಂತಾಗಲು ಕ್ರಿಮಿನಲ್​ ವ್ಯಕ್ತಿತ್ವದವರು ರಾಜಕೀಯಕ್ಕೆ ಅಥವಾ ಶಾಸಕಾಂಗಕ್ಕೆ ಪ್ರವೇಶಿಸದಂತೆ ತಡೆಯುವುದು ಸಂಸತ್ತಿನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

Remove criminals from politics: Allahabad High Court to Parliament, Election Commission
Remove criminals from politics: Allahabad High Court to Parliament, Election Commission

ಲಖನೌ: ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ರಾಜಕೀಯದಿಂದ ಹೊರಹಾಕಲು ಮತ್ತು ಕ್ರಿಮಿನಲ್​ಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಮಧ್ಯದ ಅಪವಿತ್ರ ಸಂಬಂಧವನ್ನು ಕೊನೆಗಾಣಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಸಂಸತ್ತು ಹಾಗೂ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠ ಸೂಚನೆ ನೀಡಿದೆ.

ಬಿಎಸ್​ಪಿ ಸಂಸದ ಅತುಲ್ ಕುಮಾರ್ ಸಿಂಗ್ ಉರ್ಫ್ ಅತುಲ್ ರಾಯ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಕುಮಾರ್ ಅವರ ಪೀಠ ಈ ಮಹತ್ವದ ಸೂಚನೆ ನೀಡಿದೆ. ಪ್ರಜಾಪ್ರಭುತ್ವ ಉಳಿಸಲು ಮತ್ತು ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಅಡಿ ಆಡಳಿತ ನಡೆಯಲು ಹಾಗೂ ನೆಲದ ಕಾನೂನಿನ ಪ್ರಕಾರ ದೇಶ ಮುನ್ನಡೆಯುವಂತಾಗಲು ಕ್ರಿಮಿನಲ್​ ವ್ಯಕ್ತಿತ್ವದವರು ರಾಜಕೀಯಕ್ಕೆ ಅಥವಾ ಶಾಸಕಾಂಗಕ್ಕೆ ಪ್ರವೇಶಿಸದಂತೆ ತಡೆಯುವುದು ಸಂಸತ್ತಿನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ರಾಯ್ ವಿರುದ್ಧ 23 ಕೇಸುಗಳ ವಿಚಾರಣೆ ಬಾಕಿ ಇರುವುದು, ಆತನ ಸಂಪತ್ತಿನ ಬಲ ಮತ್ತು ಆತ್ಮ ಸಾಕ್ಷಿಗಳನ್ನು ಹಾಳು ಮಾಡುವ ಸಾಧ್ಯತೆಗಳನ್ನು ಪರಿಗಣಿಸಿದ ನ್ಯಾಯಪೀಠ, ಯಾವುದೇ ಕಾರಣದಿಂದಲೂ ಈತನಿಗೆ ಜಾಮೀನು ನೀಡಲಾಗಲ್ಲ ಎಂದಿತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಎದುರು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದು, ಹಾಗೂ ಈ ಘಟನೆಯ ಸಾಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ ಆರೋಪಗಳಡಿ ರಾಯ್ ವಿರುದ್ಧ ಲಖನೌದ ಹಜರತ್​ಗಂಜ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

2004 ರಲ್ಲಿ ಲೋಕಸಭೆಯ ಶೇ 24 ರಷ್ಟು ಸಂಸದರ ವಿರುದ್ಧ ಕ್ರಿಮಿನಲ್ ಕೇಸ್​ಗಳ ವಿಚಾರಣೆ ಬಾಕಿ ಇರುವುದು ಹಾಗೂ ಈ ಪ್ರಮಾಣ 2009ರ ಚುನಾವಣೆ ವೇಳೆಗೆ ಶೇ 30 ರಷ್ಟಾಗಿದ್ದನ್ನು ನ್ಯಾಯಾಲಯ ಪ್ರಕರಣದ ವಿಚಾರಣೆ ವೇಳೆ ಪ್ರಸ್ತಾಪಿಸಿತು.

2014 ರಲ್ಲಿ ಕ್ರಿಮಿನಲ್ ಕೇಸ್ ವಿಚಾರಣೆ ಬಾಕಿ ಇರುವ ಸಂಸದರ ಸಂಖ್ಯೆ ಶೇ 34ಕ್ಕೆ ಹಾಗೂ 2019 ಕ್ಕೆ ಶೇ 43ಕ್ಕೆ ಹೆಚ್ಚಳವಾಗಿತ್ತು.

ರಾಜಕೀಯದ ಅಪರಾಧೀಕರಣದ ಬಗ್ಗೆ ಮತ್ತು ಚುನಾವಣಾ ಸುಧಾರಣೆಗಳ ಅತಿ ಅಗತ್ಯದ ಬಗ್ಗೆ ಸುಪ್ರೀಂಕೋರ್ಟ್​ ಸಹ ಗಂಭೀರವಾಗಿ ಪರಿಗಣಿಸಿರುವುದನ್ನು ಪ್ರಸ್ತಾಪಿಸಿದ ನ್ಯಾಯಾಲಯ, ಸಂಸತ್ತು ಹಾಗೂ ಚುನಾವಣಾ ಆಯೋಗಗಳು ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿತು.

ಇದನ್ನು ಓದಿ:Exclusive: ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತ.. ಮಾಜಿ ಸಚಿವ ಪೋಖ್ರಿಯಾಲ್ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.