ರಾಂಚಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ: ವಿಡಿಯೋ - WILD ELEPHANT

🎬 Watch Now: Feature Video

thumbnail
ರಾಂಚಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ (ETV Bharat)

By ETV Bharat Karnataka Team

Published : February 27, 2026 at 2:22 PM IST

1 Min Read
Choose ETV Bharat

ರಾಂಚಿ (ಜಾರ್ಖಂಡ್): ಶುಕ್ರವಾರ ಬೆಳಗ್ಗೆ ರಾಜಧಾನಿಯ ಜನವಸತಿ ಪ್ರದೇಶಕ್ಕೆ ಕಾಡು ಆನೆಯೊಂದು ನುಗ್ಗಿದ್ದು, ಆತಂಕ ಸೃಷ್ಟಿಸಿತ್ತು. ಕಾಡಿನಿಂದ ದಾರಿ ತಪ್ಪಿದ ಆನೆ ಬೀದಿಗಳಲ್ಲಿ ಓಡಾಡಲು ಆರಂಭಿಸಿತ್ತು. ಇದರಿಂದಾಗಿ ನಿವಾಸಿಗಳು ಭಯಭೀತಗೊಂಡಿದ್ದರು. ಘಟನೆಯ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಆನೆಯನ್ನು ಕಾಡಿಗೆ ಹಿಂತಿರುಗಿಸುವ ಪ್ರಯತ್ನಗಳು ಆರಂಭವಾಗಿವೆ.

ಶುಕ್ರವಾರ ಬೆಳಗ್ಗೆ ರಾಂಚಿಯ ಜನನಿಬಿಡ ಹವಾನಗರ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಒಂದು ದೊಡ್ಡ ಆನೆಯನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದರು. ಈ ವೇಳೆ ಕೆಲ ಜನರು ತಮ್ಮ ಮನೆಗಳಲ್ಲಿ ಅಡಗಿಕೊಂಡರೆ, ದಾರಿಹೋಕರು ಬೇರೆ ಬೇರೆ ದಿಕ್ಕುಗಳಲ್ಲಿ ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆಯಿತು.

ಬೆಳಗ್ಗೆ 7 ಗಂಟೆ ಸುಮಾರಿಗೆ ರಾಂಚಿಯ ಬೋರಿಯಾಕ್ಲಾ ಪ್ರದೇಶದ ಕಾಡಿನಿಂದ ಹೊರಬಂದು ಆನೆ ನಗರವನ್ನು ಪ್ರವೇಶಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆನೆ ಕೆಲವು ಅಂಗಡಿಗಳನ್ನು ನಾಶಪಡಿಸಿತು ಮತ್ತು ದಾರಿ ಉದ್ದಕ್ಕೂ ನಿಲ್ಲಿಸಿದ್ದ ಕೆಲ ವಾಹನಗಳನ್ನು ತಳ್ಳಿ ಬೀಳಿಸಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಾಂಚಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಆನೆಯನ್ನು ಶಾಂತಗೊಳಿಸಿ ನಗರದಿಂದ ಓಡಿಸಲು ಕಾರ್ಯಾಚರಣೆ ನಡೆಸಿದರು. 

ಇದನ್ನೂ ಓದಿ : ದಾಂಡೇಲಿಯಲ್ಲಿ ಬಸ್​ ತಡೆದು ನಿಲ್ಲಿಸಿದ ಗಜರಾಜ: ವಿಡಿಯೋ ವೈರಲ್! - WILD ELEPHANT STOPS BUSES

ರಾಂಚಿ (ಜಾರ್ಖಂಡ್): ಶುಕ್ರವಾರ ಬೆಳಗ್ಗೆ ರಾಜಧಾನಿಯ ಜನವಸತಿ ಪ್ರದೇಶಕ್ಕೆ ಕಾಡು ಆನೆಯೊಂದು ನುಗ್ಗಿದ್ದು, ಆತಂಕ ಸೃಷ್ಟಿಸಿತ್ತು. ಕಾಡಿನಿಂದ ದಾರಿ ತಪ್ಪಿದ ಆನೆ ಬೀದಿಗಳಲ್ಲಿ ಓಡಾಡಲು ಆರಂಭಿಸಿತ್ತು. ಇದರಿಂದಾಗಿ ನಿವಾಸಿಗಳು ಭಯಭೀತಗೊಂಡಿದ್ದರು. ಘಟನೆಯ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಆನೆಯನ್ನು ಕಾಡಿಗೆ ಹಿಂತಿರುಗಿಸುವ ಪ್ರಯತ್ನಗಳು ಆರಂಭವಾಗಿವೆ.

ಶುಕ್ರವಾರ ಬೆಳಗ್ಗೆ ರಾಂಚಿಯ ಜನನಿಬಿಡ ಹವಾನಗರ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಒಂದು ದೊಡ್ಡ ಆನೆಯನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದರು. ಈ ವೇಳೆ ಕೆಲ ಜನರು ತಮ್ಮ ಮನೆಗಳಲ್ಲಿ ಅಡಗಿಕೊಂಡರೆ, ದಾರಿಹೋಕರು ಬೇರೆ ಬೇರೆ ದಿಕ್ಕುಗಳಲ್ಲಿ ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆಯಿತು.

ಬೆಳಗ್ಗೆ 7 ಗಂಟೆ ಸುಮಾರಿಗೆ ರಾಂಚಿಯ ಬೋರಿಯಾಕ್ಲಾ ಪ್ರದೇಶದ ಕಾಡಿನಿಂದ ಹೊರಬಂದು ಆನೆ ನಗರವನ್ನು ಪ್ರವೇಶಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆನೆ ಕೆಲವು ಅಂಗಡಿಗಳನ್ನು ನಾಶಪಡಿಸಿತು ಮತ್ತು ದಾರಿ ಉದ್ದಕ್ಕೂ ನಿಲ್ಲಿಸಿದ್ದ ಕೆಲ ವಾಹನಗಳನ್ನು ತಳ್ಳಿ ಬೀಳಿಸಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಾಂಚಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಆನೆಯನ್ನು ಶಾಂತಗೊಳಿಸಿ ನಗರದಿಂದ ಓಡಿಸಲು ಕಾರ್ಯಾಚರಣೆ ನಡೆಸಿದರು. 

ಇದನ್ನೂ ಓದಿ : ದಾಂಡೇಲಿಯಲ್ಲಿ ಬಸ್​ ತಡೆದು ನಿಲ್ಲಿಸಿದ ಗಜರಾಜ: ವಿಡಿಯೋ ವೈರಲ್! - WILD ELEPHANT STOPS BUSES

ABOUT THE AUTHOR

...view details