ಮೈಸೂರು: ಅಡುಗೆ ಕೋಣೆಯ ಡಬ್ಬಗಳ ಹಿಂದಿತ್ತು ಹಾರುವ ಹಾವು - FLYING SNAKE

🎬 Watch Now: Feature Video

thumbnail
ಅಡುಗೆ ಕೋಣೆಯಲ್ಲಿ ಅವಿತಿದ್ದ ಹಾರುವ ಹಾವಿನ ರಕ್ಷಣೆ (ETV Bharat)

By ETV Bharat Karnataka Team

Published : March 1, 2026 at 8:59 AM IST

1 Min Read
Choose ETV Bharat

ಮೈಸೂರು: ನಗರದ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡಿದ್ದ, ಹಾರುವ ಹಾವನ್ನು ಉರಗ ರಕ್ಷಕ ಸ್ನೇಕ್​ ಶ್ಯಾಮ್​​ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ವಿಜಯನಗರ ಮೊದಲನೇ ಹಂತದ ನಿವೃತ್ತ ನೌಕರ ಗಂಗಾಧರಪ್ಪ ಅವರ ಅಡುಗೆ ಮನೆಯ ದಿನಸಿ ಡಬ್ಬದ ಹಿಂಭಾಗ ಶುಕ್ರವಾರ ಹಾವು ಕಾಣಿಸಿಕೊಂಡಿತ್ತು. ತಕ್ಷಣ ಮನೆ ಮಾಲೀಕರು ಉರಗ ರಕ್ಷಕ ಸ್ನೇಕ್​ ಶ್ಯಾಮ್​ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಶಾಮ್ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಮಂಗಳೂರು ಭಾಗದಲ್ಲಿ ಹೆಚ್ಚಾಗಿ ಕಾಣುವ ಹಾವು: ಇದು ಅಪರೂಪದ ಹಾರುವ ಹಾವಾಗಿದ್ದು, ವಿಷ ಇರುವುದಿಲ್ಲ. ಹೆಚ್ಚಾಗಿ ಮಂಗಳೂರು ಭಾಗದಲ್ಲಿ ಕಂಡುಬರುತ್ತದೆ. ಮೈಸೂರು ಭಾಗದಲ್ಲಿ ಕಂಡಿರುವುದು ಅಪರೂಪ ಎಂದು ಉರಗ ರಕ್ಷಕ  ಹೇಳಿದ್ದಾರೆ. ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ತಾಪ ತಾಳಲಾರದೆ ಹಾವುಗಳು ತಣ್ಣನೆಯ ಜಾಗವನ್ನು ಹುಡುಕಿಕೊಂಡು ಬರುತ್ತವೆ. ಕೆರೆ-ಕಟ್ಟೆಗಳ ಸಮೀಪ, ಕಾಡಂಚಿನ, ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಂಚಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ: ವಿಡಿಯೋ

ಮೈಸೂರು: ನಗರದ ಮನೆಯೊಂದರ ಅಡುಗೆ ಕೋಣೆಯಲ್ಲಿ ಸೇರಿಕೊಂಡಿದ್ದ, ಹಾರುವ ಹಾವನ್ನು ಉರಗ ರಕ್ಷಕ ಸ್ನೇಕ್​ ಶ್ಯಾಮ್​​ ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ವಿಜಯನಗರ ಮೊದಲನೇ ಹಂತದ ನಿವೃತ್ತ ನೌಕರ ಗಂಗಾಧರಪ್ಪ ಅವರ ಅಡುಗೆ ಮನೆಯ ದಿನಸಿ ಡಬ್ಬದ ಹಿಂಭಾಗ ಶುಕ್ರವಾರ ಹಾವು ಕಾಣಿಸಿಕೊಂಡಿತ್ತು. ತಕ್ಷಣ ಮನೆ ಮಾಲೀಕರು ಉರಗ ರಕ್ಷಕ ಸ್ನೇಕ್​ ಶ್ಯಾಮ್​ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಶಾಮ್ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. 

ಮಂಗಳೂರು ಭಾಗದಲ್ಲಿ ಹೆಚ್ಚಾಗಿ ಕಾಣುವ ಹಾವು: ಇದು ಅಪರೂಪದ ಹಾರುವ ಹಾವಾಗಿದ್ದು, ವಿಷ ಇರುವುದಿಲ್ಲ. ಹೆಚ್ಚಾಗಿ ಮಂಗಳೂರು ಭಾಗದಲ್ಲಿ ಕಂಡುಬರುತ್ತದೆ. ಮೈಸೂರು ಭಾಗದಲ್ಲಿ ಕಂಡಿರುವುದು ಅಪರೂಪ ಎಂದು ಉರಗ ರಕ್ಷಕ  ಹೇಳಿದ್ದಾರೆ. ಬೇಸಿಗೆ ಆರಂಭವಾಗಿರುವುದರಿಂದ ಬಿಸಿಲಿನ ತಾಪ ತಾಳಲಾರದೆ ಹಾವುಗಳು ತಣ್ಣನೆಯ ಜಾಗವನ್ನು ಹುಡುಕಿಕೊಂಡು ಬರುತ್ತವೆ. ಕೆರೆ-ಕಟ್ಟೆಗಳ ಸಮೀಪ, ಕಾಡಂಚಿನ, ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸ್ನೇಕ್ ಶ್ಯಾಮ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಂಚಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡಾನೆ: ವಿಡಿಯೋ

ABOUT THE AUTHOR

...view details