ದಾಸಯ್ಯನ ಕುಣಿತ: ಹೆಣ್ಣು ಮಕ್ಕಳ ವೇಷ, ನಕ್ಕು ನಗಿಸುವ ಯುವಕರು- ವಿಡಿಯೋ - DASAYYANA KUNITHA

🎬 Watch Now: Feature Video

thumbnail
ದಾಸಯ್ಯನ ಕುಣಿತ (ETV Bharat)

By ETV Bharat Karnataka Team

Published : April 16, 2026 at 4:25 PM IST

1 Min Read
Choose ETV Bharat

ಚಿಕ್ಕಮಗಳೂರು: ಜಿಲ್ಲೆಯ ಪ್ರತೀ ಭಾಗದಲ್ಲೂ ವಿಶಿಷ್ಟ ಆಚರಣೆಗಳಿವೆ. ಅವುಗಳಲ್ಲಿ ಒಂದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಬಯಲು ಸೀಮೆ ಭಾಗದ ದಾಸಯ್ಯನ ಕುಣಿತ. ಇದು ಇಂದಿಗೂ ಚಾಲ್ತಿಯಲ್ಲಿದೆ. ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನರಂಜನೆ ನೀಡುವುದೇ ದಾಸಯ್ಯನ ಕುಣಿತದ ಪ್ರಮುಖ ಉದ್ದೇಶ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಾಗರಾಳು, ನಿಡಘಟ್ಟ, ಎಸ್​.ಬಿದರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ರಥೋತ್ಸವದ ಮರುದಿನ ದಾಸಯ್ಯನ ಕುಣಿತ ಎಂಬ ವಿಶೇಷ ಗ್ರಾಮೀಣ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಊರಿನ ಗಂಡು ಮಕ್ಳಳು ತಮ್ಮಿಷ್ಟದ ವೇಷಭೂಷಣ ಧರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಮನರಂಜನೆ ನೀಡುತ್ತಾರೆ.

"ದಾಸಯ್ಯನ ಕುಣಿತದ ಪ್ರಾಮುಖ್ಯ ಆಕರ್ಷಣೆಯೇ ವಿಭಿನ್ನ ವೇಷಭೂಷಣ ಹಾಗೂ ಹಾಸ್ಯಭರಿತ ಮಾತುಗಳು. ಗಂಡು ಮಕ್ಕಳು ಹೆಚ್ಚಾಗಿ ಭಾಗವಹಿಸುವುದು ಇದರ ವಿಶೇಷ. ದಾಸಯ್ಯನ ಕುಣಿತದಲ್ಲಿ ದೇವರ ಮೂರ್ತಿಯ ವೇಷಗಳಿಂದ ಹಿಡಿದು, ಊರಿನ ಪಟೇಲನ ವೇಷ, ಕಾಡು ಮನುಷ್ಯನ ವೇಷ, ಭೂತ ಪ್ರೇತಗಳ ವೇಷ, ನವ ವಧು-ವರರ ವೇಷ, ಗಂಡು ಮಕ್ಕಳು ಹೆಣ್ಣು ಮಕ್ಕಳ ವೇಷ ಧರಿಸಿ ಊರು ತುಂಬಾ ತಿರುಗುತ್ತಾರೆ. ಇದು ನೋಡುಗರಿಗೆ ಭರಪೂರ ಮನರಂಜನೆ ನೀಡುತ್ತದೆ" ಎನ್ನುತ್ತಾರೆ ಗ್ರಾಮಸ್ಥ ಹೇಮಂತ್.

ಇದನ್ನೂ ಓದಿ: ಉಡುಪಿ: ಕರಾವಳಿಯಲ್ಲಿಂದು ಯುಗಾದಿ ಸಂಭ್ರಮ: ಕೃಷ್ಣಮಠದಲ್ಲಿ ಸೌರಮಾನ ಯುಗಾದಿ ಆಚರಣೆ, ವಿಶೇಷ ಪೂಜೆ

ಚಿಕ್ಕಮಗಳೂರು: ಜಿಲ್ಲೆಯ ಪ್ರತೀ ಭಾಗದಲ್ಲೂ ವಿಶಿಷ್ಟ ಆಚರಣೆಗಳಿವೆ. ಅವುಗಳಲ್ಲಿ ಒಂದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಬಯಲು ಸೀಮೆ ಭಾಗದ ದಾಸಯ್ಯನ ಕುಣಿತ. ಇದು ಇಂದಿಗೂ ಚಾಲ್ತಿಯಲ್ಲಿದೆ. ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನರಂಜನೆ ನೀಡುವುದೇ ದಾಸಯ್ಯನ ಕುಣಿತದ ಪ್ರಮುಖ ಉದ್ದೇಶ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಾಗರಾಳು, ನಿಡಘಟ್ಟ, ಎಸ್​.ಬಿದರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ರಥೋತ್ಸವದ ಮರುದಿನ ದಾಸಯ್ಯನ ಕುಣಿತ ಎಂಬ ವಿಶೇಷ ಗ್ರಾಮೀಣ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಊರಿನ ಗಂಡು ಮಕ್ಳಳು ತಮ್ಮಿಷ್ಟದ ವೇಷಭೂಷಣ ಧರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಮನರಂಜನೆ ನೀಡುತ್ತಾರೆ.

"ದಾಸಯ್ಯನ ಕುಣಿತದ ಪ್ರಾಮುಖ್ಯ ಆಕರ್ಷಣೆಯೇ ವಿಭಿನ್ನ ವೇಷಭೂಷಣ ಹಾಗೂ ಹಾಸ್ಯಭರಿತ ಮಾತುಗಳು. ಗಂಡು ಮಕ್ಕಳು ಹೆಚ್ಚಾಗಿ ಭಾಗವಹಿಸುವುದು ಇದರ ವಿಶೇಷ. ದಾಸಯ್ಯನ ಕುಣಿತದಲ್ಲಿ ದೇವರ ಮೂರ್ತಿಯ ವೇಷಗಳಿಂದ ಹಿಡಿದು, ಊರಿನ ಪಟೇಲನ ವೇಷ, ಕಾಡು ಮನುಷ್ಯನ ವೇಷ, ಭೂತ ಪ್ರೇತಗಳ ವೇಷ, ನವ ವಧು-ವರರ ವೇಷ, ಗಂಡು ಮಕ್ಕಳು ಹೆಣ್ಣು ಮಕ್ಕಳ ವೇಷ ಧರಿಸಿ ಊರು ತುಂಬಾ ತಿರುಗುತ್ತಾರೆ. ಇದು ನೋಡುಗರಿಗೆ ಭರಪೂರ ಮನರಂಜನೆ ನೀಡುತ್ತದೆ" ಎನ್ನುತ್ತಾರೆ ಗ್ರಾಮಸ್ಥ ಹೇಮಂತ್.

ಇದನ್ನೂ ಓದಿ: ಉಡುಪಿ: ಕರಾವಳಿಯಲ್ಲಿಂದು ಯುಗಾದಿ ಸಂಭ್ರಮ: ಕೃಷ್ಣಮಠದಲ್ಲಿ ಸೌರಮಾನ ಯುಗಾದಿ ಆಚರಣೆ, ವಿಶೇಷ ಪೂಜೆ

For All Latest Updates

ABOUT THE AUTHOR

Karnataka holds a perpetual importance due to its distinctive political dynamics. ETV Bharat Karnataka’s commitment is demonstrated by the presence of a specialised bureau and a team of journalists focused on amplifying the state's voice on a national scale. Its coverage encompasses not only comprehensive updates on current events but also endeavours to bring out exceptional narratives from around the state, country and from the rest of the world....view details