ದಾವಣಗೆರೆ: ಅಗ್ನಿ ಅವಘಡದಿಂದ ಗ್ಯಾರೇಜ್​ನಲ್ಲಿದ್ದ 4 ಕಾರುಗಳು ಬೆಂಕಿಗಾಹುತಿ - 4 CARS IN GARAGE GUTTED

🎬 Watch Now: Feature Video

thumbnail
ಅಗ್ನಿ ಅವಘಡದಿಂದ ಗ್ಯಾರೇಜ್​ನಲ್ಲಿದ್ದ 4 ಕಾರುಗಳು ಬೆಂಕಿಗಾಹುತಿ (ETV Bharat)

By ETV Bharat Karnataka Team

Published : February 17, 2026 at 5:23 PM IST

1 Min Read
Choose ETV Bharat

ದಾವಣಗೆರೆ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ನಾಲ್ಕು ಕಾರು ಹಾಗೂ ಒಂದು ಕ್ರೂಸರ್ ಸುಟ್ಟು ಕರಕಲಾದ ಘಟನೆ ನಗರದ‌ ಹಳೇ ಪಿಬಿ ರಸ್ತೆಯ ಎಲ್​​ಐಸಿ‌ ಎದುರಿರುವ ಮಾರುತಿ ಗ್ಯಾರೇಜ್​​ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು. 

ಬೇರೆ ಕಡೆ ಬೆಂಕಿ ಆವರಿಸದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರಮ ವಹಿಸಿದರು.‌ ಅರುಣ್ ಎಂ.ಪಿ ಎಂಬುವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಒಂದು ಬುಲೇರೋ, ಇಕಾನ್, ಐ-20 ಕಾರು ಹಾಗೂ ಕ್ರೂಸರ್ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.‌ ಅಕ್ಕ ಪಕ್ಕದಲ್ಲಿ ಹತ್ತಾರು ಶಾಪ್, ಗ್ಯಾರೇಜ್, ಶೋ‌ ರೂಮ್ ಇದ್ದ ಹಿನ್ನೆಲೆ ಜನ ಕೆಲಕಾಲ ಆತಂಕಗೊಂಡಿದ್ದರು, ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ. 

ಗಾಂಧಿ ನಗರ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ.‌ ಗ್ಯಾರೇಜ್​ಗೆ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಬೇಕಿದೆ.‌ ಇದೀಗ ಬೇಸಿಗೆ ಕಾಲ ಆರಂಭ ಹಿನ್ನೆಲೆ ಅಂಗಡಿ ಮುಂಗಟ್ಟು, ಗ್ಯಾರೇಜ್ ಮುಂತಾದ ಅಂಗಡಿ ಮಾಲೀಕರು ಕ್ರಮವಹಿಸಬೇಕಿದೆ.‌ ಮಾಲೀಕ ಅರುಣ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 

ಇವುಗಳನ್ನೂ ಓದಿ:

ದಾವಣಗೆರೆ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ನಾಲ್ಕು ಕಾರು ಹಾಗೂ ಒಂದು ಕ್ರೂಸರ್ ಸುಟ್ಟು ಕರಕಲಾದ ಘಟನೆ ನಗರದ‌ ಹಳೇ ಪಿಬಿ ರಸ್ತೆಯ ಎಲ್​​ಐಸಿ‌ ಎದುರಿರುವ ಮಾರುತಿ ಗ್ಯಾರೇಜ್​​ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು. 

ಬೇರೆ ಕಡೆ ಬೆಂಕಿ ಆವರಿಸದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರಮ ವಹಿಸಿದರು.‌ ಅರುಣ್ ಎಂ.ಪಿ ಎಂಬುವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಒಂದು ಬುಲೇರೋ, ಇಕಾನ್, ಐ-20 ಕಾರು ಹಾಗೂ ಕ್ರೂಸರ್ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ.‌ ಅಕ್ಕ ಪಕ್ಕದಲ್ಲಿ ಹತ್ತಾರು ಶಾಪ್, ಗ್ಯಾರೇಜ್, ಶೋ‌ ರೂಮ್ ಇದ್ದ ಹಿನ್ನೆಲೆ ಜನ ಕೆಲಕಾಲ ಆತಂಕಗೊಂಡಿದ್ದರು, ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ. 

ಗಾಂಧಿ ನಗರ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ.‌ ಗ್ಯಾರೇಜ್​ಗೆ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಬೇಕಿದೆ.‌ ಇದೀಗ ಬೇಸಿಗೆ ಕಾಲ ಆರಂಭ ಹಿನ್ನೆಲೆ ಅಂಗಡಿ ಮುಂಗಟ್ಟು, ಗ್ಯಾರೇಜ್ ಮುಂತಾದ ಅಂಗಡಿ ಮಾಲೀಕರು ಕ್ರಮವಹಿಸಬೇಕಿದೆ.‌ ಮಾಲೀಕ ಅರುಣ್‌ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 

ಇವುಗಳನ್ನೂ ಓದಿ:

ABOUT THE AUTHOR

Karnataka holds a perpetual importance due to its distinctive political dynamics. ETV Bharat Karnataka’s commitment is demonstrated by the presence of a specialised bureau and a team of journalists focused on amplifying the state's voice on a national scale. Its coverage encompasses not only comprehensive updates on current events but also endeavours to bring out exceptional narratives from around the state, country and from the rest of the world....view details