ETV Bharat / state

ದಲಿತ ಹಿಂದೂ ಮಹಿಳೆಯ ಹತ್ಯೆ: ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ ನೀಡಿದ ವಿಜಯೇಂದ್ರ

ಯಲ್ಲಾಪುರದಲ್ಲಿ ನಡೆದ ದಲಿತ ಹಿಂದೂ ಮಹಿಳೆಯ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರವು ಅವರ ಕುಟುಂಬಸ್ಥರಿಗೆ 50 ಲಕ್ಷ ರೂ ಪರಿಹಾರ ನೀಡಬೇಕೆಂದು ವಿಜಯೇಂದ್ರ ಒತ್ತಾಯಿಸಿದರು.

DALIT WOMEN MURDER  UTTARAKANNADA  BJP BY VIJAYENDRA  DALIT WOMEN STABBED TO DEATH
ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ ನೀಡಿದ ವಿಜಯೇಂದ್ರ (ETV Bharat)
author img

By ETV Bharat Karnataka Team

Published : January 4, 2026 at 9:49 PM IST

1 Min Read
Choose ETV Bharat

ಶಿರಸಿ (ಉತ್ತರ ಕನ್ನಡ): ಯಲ್ಲಾಪುರದಲ್ಲಿ ನಡೆದ ದಲಿತ ಹಿಂದೂ ಮಹಿಳೆಯ ಹತ್ಯೆಯನ್ನು ಖಂಡಿಸ್ತೇನೆ. ಈ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಜೊತೆಗೆ ಕಾನೂನು ಪ್ರಕಾರ ಪರಿಹಾರ ಘೋಷಣೆ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಕಾಂಗ್ರೆಸ್ ಸರಕಾರ ಬಂದ‌ ಮೇಲೆ ನಡೆಯುತ್ತಿರೋ ಲವ್ ಜಿಹಾದ್ ಹಾಗೂ ಮರ್ಡರ್ ಪ್ರಕರಣ ಖಂಡಿಸಿತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.‌

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ETV Bharat)
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಹತ್ಯೆಯಾದ ರಂಜಿತಾ ಮನೆಗೆ ಭಾನುವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹೀರೇಮಠ ಪ್ರಕರಣ ಇನ್ನೂ ಸರಿಯಾದ ತನಿಖೆಯಾಗಿಲ್ಲ. ನೇಹಾ ಪ್ರಕರಣವನ್ನು ಸರ್ಕಾರವೇ ಮುಚ್ಚಿ ಹಾಕುವ ಗುಮಾನಿ ವ್ಯಕ್ತವಾಗಿದೆ. ಈ ಪ್ರಕರಣ ಸರಿಯಾಗಿ ತನಿಖೆಯಾಗಿದಿದ್ರೆ ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

50 ಲಕ್ಷ ಪರಿಹಾರಕ್ಕೆ ಆಗ್ರಹ: ಈಗ ನಡೆದ ದಲಿತ ಹಿಂದೂ ಮಹಿಳೆಯ ಹತ್ಯೆಯನ್ನು ಖಂಡಿಸ್ತೇನೆ. ಲವ್ ಜಿಹಾದ್ ಕಾಶ್ಮೀರದಲ್ಲೇ ಆಗಬೇಕೆಂದೇನಿಲ್ಲ, ಎಲ್ಲೂ ನಡೆಯಬಹುದು. ಈ ಪ್ರಕರಣ ಸಂಬಂಧಿಸಿ ಸರಿಯಾದ ತನಿಖೆಯಾಗಬೇಕು. ಕುಟುಂಬಕ್ಕೆ ಸಿಎಂ ಸರಿಯಾದ ಪರಿಹಾರ, ಜಾಗ ಹಾಗೂ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು. ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹತ್ಯೆಯಾದಾಗ 25 ಲಕ್ಷ ರೂ‌‌. ಪರಿಹಾರ ನೀಡಿದರು. ಆದ್ದರಿಂದ ಬಡ ದಲಿತ ಮಹಿಳೆಯ ಕುಟುಂಬವನ್ನು ಸರ್ಕಾರರ ತಾತ್ಸಾರ ಮಾಡಬಾರದು ಎಂದು ಒತ್ತಾಯಿಸಿದರು.

ಬಿಜೆಪಿಯವರು ಹೆಣದ ಮೇಲೆ ರಾಜಕಾರಣ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಮನುಷ್ಯತ್ವ ಇರುವವರು ಈ ರೀತಿ ಮಾತನಾಡದೇ, ರಂಜಿತಾ ಕುಟುಂಬಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು.

ಬಿಜೆಪಿಯಿಂದ 5 ಲಕ್ಷ ರೂ ಪರಿಹಾರ: ಇದೇ ವೇಳೆ ಮೃತ ರಂಜಿತಾ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿ ವಿಜಯೇಂದ್ರ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರ ವತಿಯಿಂದ ರಂಜಿತಾ ಪುತ್ರನಿಗೆ ಉಚಿತ ಶಿಕ್ಷಣ ಭರವಸೆ ನೀಡಲಾಯಿತು.

ಘಟನೆಯ ಹಿನ್ನೆಲೆ: ಯಲ್ಲಾಪುರ ನಗರದ ಕಾಳಮ್ಮ ನಗರದ ಆಶ್ರಯ ಬಡಾವಣೆಯ ನಿವಾಸಿ ರಂಜಿತಾ ಎಂಬವರನ್ನು ಕತ್ತು ಕೊಯ್ದು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದ. ಬಳಿಕ ಆರೋಪಿ ರಫೀಕ್ ಎಂಬಾತ ಕೂಡ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ನಡುತೋಪಿನಲ್ಲಿ ಕುನ್ನೇರಲೆ ಮರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: