ETV Bharat / state

ಮೈಸೂರು ಕೋರ್ಟ್​ಗೆ ಬಾಂಬ್ ಬೆದರಿಕೆ ಸಂದೇಶ

ಕೋರ್ಟ್​ಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ನ್ಯಾಯಧೀಶರಾದ ಉಷಾರಾಣಿ ಅವರಿಗೆ ಇಮೇಲ್ ಬಂದಿದೆ.

Lawyers and clients gathered in the court premises
ಕೋರ್ಟ್​ ಆವರಣದಲ್ಲಿ ವಕೀಲರು, ಕಕ್ಷಿದಾರರು ಸೇರಿರುವುದು (ETV Bharat)
author img

By ETV Bharat Karnataka Team

Published : January 6, 2026 at 2:53 PM IST

1 Min Read
Choose ETV Bharat

ಮೈಸೂರು: ಮೈಸೂರಿನ ಕೋರ್ಟ್​ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕಗೊಂಡ ವಕೀಲರು ಹಾಗೂ ಕಕ್ಷಿದಾರರು ನ್ಯಾಯಾಲಯದಿಂದ ಹೊರಬಂದ ಘಟನೆ ಇಂದು ನಡೆಯಿತು.

ಜಿಲ್ಲಾ ಪಂಚಾಯಿತಿ ಬಳಿ ಇರುವ ಕೋರ್ಟ್​ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪರಿಶೀಲನೆ ನಡೆಸಿದ ನ್ಯಾಯಾಧೀಶರು ಈ ವಿಚಾರವನ್ನು ನಗರ ಪೊಲೀಸ್ ಕಮಿಷನರ್​ಗೆ ತಿಳಿಸಿದ್ದಾರೆ. ತಕ್ಷಣ ವಕೀಲರು ಹಾಗೂ ಕಕ್ಷಿದಾರರು ಕೋರ್ಟ್​ನಿಂದ ಹೊರ ಬಂದಿದ್ದಾರೆ. ಪೊಲೀಸರು ಹಾಗೂ ಬಾಂಬ್ ತಪಾಸಣೆ ತಂಡ ಕೋರ್ಟ್​ಗೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.

ಮೈಸೂರು ಕೋರ್ಟ್​ಗೆ ಬಾಂಬ್ ಬೆದರಿಕೆ ಸಂದೇಶ: ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಪ್ರತಿಕ್ರಿಯೆ (ETV Bharat)

ಮೈಸೂರು ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಅವರು ಮಾಹಿತಿ ನೀಡಿ, ಬೆಳಗ್ಗೆ 10.30ಕ್ಕೆ ಕೋರ್ಟ್ ಕಲಾಪಕ್ಕೆ ನಾವೆಲ್ಲ ಬಂದಿದ್ದೆವು. ಸುಮಾರು 10.45ರ ಸಮಯದಲ್ಲಿ ಕೋರ್ಟ್​ಗೆ ಇಮೇಲ್ ಸಂದೇಶ ಬಂದಿದೆ. ಅದರಲ್ಲಿ 1.55 ವೇಳೆಗೆ 3 RDX ಬಾಂಬ್ ಹಾಕಿ ಕೋರ್ಟ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಮುಖ್ಯ ನ್ಯಾಯಧೀಶರಾದ ಉಷಾರಾಣಿ ಅವರು ನಗರ ಪೊಲೀಸ್ ಕಮಿಷನರ್​ಗೆ ಮಾಹಿತಿ ನೀಡಿದರು. ತಕ್ಷಣ ಎರಡು ಬಾಂಬ್ ತಪಾಸಣೆ ಹಾಗೂ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಸದ್ಯ ಎರಡು ಕೋರ್ಟ್​ಗಳಲ್ಲಿ ಕಲಾಪ ನಡೆಯುತಿಲ್ಲ ಎಂದು ತಿಳಿಸಿದರು.

2016ರಲ್ಲಿ ಹಳೆಯ ಕೋರ್ಟ್​ನ ದಕ್ಷಿಣ ಭಾಗದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಆರೋಪಿಯನ್ನು ಬಂಧಿಸಲಾಗಿತ್ತು. ಇದೊಂದು ಹುಸಿ ಬಾಂಬ್​ ಬೆದರಿಕೆ ಸಂದೇಶ ಎನ್ನುವ ಗುಮಾನಿ ಇದೆ ಎಂದರು.

ಇದನ್ನೂ ಓದಿ: ಉತ್ತರ ಕನ್ನಡದ ಎರಡು ತಹಶೀಲ್ದಾರ್ ಕಚೇರಿಗಳಿಗೆ ಬಾಂಬ್ ಬೆದರಿಕೆ: ಖಾಕಿ ಪಡೆ ಹೈ ಅಲರ್ಟ್