ETV Bharat / sports

ಟಿ20 ವಿಶ್ವಕಪ್​ಗಾಗಿ ಬಾಂಗ್ಲಾದೇಶ ತಂಡ ಪ್ರಕಟ; ಲಿಟ್ಟನ್​ ಕುಮಾರ್​ ದಾಸ್​ಗೆ ನಾಯಕ ಪಟ್ಟ

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್​ಗಾಗಿ ಬಾಂಗ್ಲಾದೇಶ ತಂಡ ಪ್ರಕಟಗೊಂಡಿದೆ.

ಬಾಂಗ್ಲಾದೇಶ ಭಾರತ ತಂಡ
ಬಾಂಗ್ಲಾದೇಶ ಭಾರತ ತಂಡ (AFP)
author img

By ETV Bharat Sports Team

Published : January 4, 2026 at 2:32 PM IST

|

Updated : January 4, 2026 at 2:55 PM IST

2 Min Read
Choose ETV Bharat

Bangladesh Team Announced: ಫೆಬ್ರವರಿ 7 ರಿಂದ ಟಿ20 ವಿಶ್ವಕಪ್​ ಸರಣಿ ಪ್ರಾರಂಭಗೊಳ್ಳುತ್ತಿದೆ. ಈಬಾರಿಯ ಪಂದ್ಯಾವಳಿಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿಕೊಳ್ಳುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳು ತಮ್ಮ ತಂಡಗಳನ್ನು ಘೋಷಿಸಿವೆ. ಇದೀಗ, ಬಾಂಗ್ಲಾದೇಶ ತನ್ನ 15 ಸದಸ್ಯರ ತಂಡವನ್ನು ಪ್ರಕಟಗೊಳಿಸಿದೆ.

ಟಿ20 ವಿಶ್ವಕಪ್‌ ತಂಡಕ್ಕೆ ಲಿಟನ್ ದಾಸ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಮೊಹಮ್ಮದ್ ಸೈಫ್ ಹಸನ್ ಉಪನಾಯಕ ಆಗಿರಲಿದ್ದಾರೆ. 2026ರ ಐಪಿಎಲ್​ ನಿಂದ ರಿಲೀಸ್​ ಮಾಡಲಾದ ಮುಸ್ತಾಫಿಜುರ್ ರೆಹಮಾನ್ ಸಹ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮುಸ್ತಾಫಿಜುರ್ ಜೊತೆಗೆ ತಸ್ಕಿನ್ ಅಹ್ಮದ್ ವೇಗದ ಬೌಲಿಂಗ್ ವಿಭಾಗದಲ್ಲಿರಲಿದ್ದಾರೆ. ಮೆಹಿದಿ ಹಸನ್ ಮತ್ತು ರಿಷದ್ ಹೊಸೈನ್ ಅವರನ್ನು ಸ್ಪಿನ್ನರ್‌ಗಳಾಗಿ ತೆಗೆದುಕೊಳ್ಳಲಾಗಿದೆ. ಬಾಂಗ್ಲಾದೇಶ ಬ್ಯಾಟಿಂಗ್‌ನಲ್ಲಿ ಲಿಟನ್ ದಾಸ್, ತಂಜಿದ್ ಹಸನ್ ಮತ್ತು ಪರ್ವೇಜ್ ಹೊಸೈನ್ ಎಮನ್ ಇರಲಿದ್ದಾರೆ.

ಈ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು ಗುಂಪು ಹಂತದಲ್ಲಿ ಬಾಂಗ್ಲಾದೇಶ ಆಡಬೇಕಾದ ನಾಲ್ಕು ಪಂದ್ಯಗಳನ್ನು ಭಾರತದಲ್ಲಿ ನಿಗದಿಪಡಿಸಲಾಗಿದೆ. ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಪಂದ್ಯ ಆಡಿದರೇ, ಫೆಬ್ರವರಿ 14 ರಂದು ಇಂಗ್ಲೆಂಡ್ ಮತ್ತು ಫೆಬ್ರವರಿ 17 ರಂದು ನೇಪಾಳ ವಿರುದ್ಧ ಪಂದ್ಯಗಳು ನಡೆಯಲಿವೆ.

ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತಂಡ: ಲಿಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ, ಶಮೀಮ್ ಹೊಸೈನ್, ಕ್ವಾಜಿ ನೂರುಲ್ ಹಸನ್ ಸೋಹನ್, ಶಕ್ ಮೆಹದಿ ಹಸನ್, ರಿಷಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಜಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶೋರಿಫುಲ್ ಇಸ್ಲಾಂ.

ಬಾಂಗ್ಲಾದೇಶ ಟಿ20 ವಿಶ್ವಕಪ್ ವೇಳಾಪಟ್ಟಿ

  • ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ (ಫೆಬ್ರವರಿ 7, 2026 - ಈಡನ್ ಗಾರ್ಡನ್ಸ್, ಕೋಲ್ಕತ್ತಾ)
  • ಬಾಂಗ್ಲಾದೇಶ vs ಇಟಲಿ (ಫೆಬ್ರವರಿ 9, 2026 - ಈಡನ್ ಗಾರ್ಡನ್ಸ್, ಕೋಲ್ಕತ್ತಾ)
  • ಇಂಗ್ಲೆಂಡ್ vs ಬಾಂಗ್ಲಾದೇಶ (ಫೆಬ್ರವರಿ 14, 2026 - ಈಡನ್ ಗಾರ್ಡನ್ಸ್, ಕೋಲ್ಕತ್ತಾ)
  • ಬಾಂಗ್ಲಾದೇಶ vs ನೇಪಾಳ (ಫೆಬ್ರವರಿ 17, 2026 – ವಾಂಖೆಡೆ ಕ್ರೀಡಾಂಗಣ, ಮುಂಬೈ)

ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಲಾಗುತ್ತದೆಯೇ?

ಐಪಿಎಲ್​ ಮಿನಿ ಹರಾಜಿನಲ್ಲಿ ₹9.2 ಕೋಟಿಗೆ ಹರಾಜಾಗಿದ್ದ ಬಾಂಗ್ಲಾ ಬೌಲರ್​ ಮುಸ್ತಾಫಿಜುರ್​ ರೆಹಮಾನ್​ ಅವರನ್ನು ಬಿಸಿಸಿಐ ನಿರ್ದೇಶನದ ಮೇರೆಗೆ ಕೆಕೆಆರ್, ತಂಡದಿಂದ ರಿಲೀಸ್​ ಮಾಡಿದೆ. ಇದು ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಬಾಂಗ್ಲಾದೇಶ ಕ್ರೀಡಾ ಸಚಿವ (ಸಲಹೆಗಾರ) ಆಸಿಫ್ ನಜ್ರುಲ್, ಐಸಿಸಿ ಬಾಂಗ್ಲಾದೇಶ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ವಿನಂತಿಸುವಂತೆ ಬಿಸಿಬಿಗೆ ಸೂಚನೆ ನೀಡಿದ್ದಾರೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ 4 ಲೀಗ್​ ಹಂತದ ಪಂದ್ಯಗಳನ್ನು ಆಡಲಿದೆ. ಇದೀಗ ಬಾಂಗ್ಲಾ ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಐಸಿಸಿ ಬಿಸಿಬಿಯ ಕೋರಿಕೆಯನ್ನು ಸ್ವೀಕರಿಸಿದರೆ, ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಇದೆ.

ಬಾಂಗ್ಲಾದಲ್ಲಿ ಹಿಂದೂಕಗಳ ಮೇಲಿನ ನಿರಂತರ ದಾಳಿಯಿಂದಾಗಿ ಬಾಂಗ್ಲಾ ಬೌಲರ್​ ಮುಸ್ತಾಫಿಜುರ್​ ರೆಹಮಾನ್​ರನ್ನು ಐಪಿಎಲ್​ನಲ್ಲಿ ಆಡಿಸದಂತೆ ಟೀಕೆಗಳು ವ್ಯಕ್ತವಾದವು. ಇದರ ಬೆನ್ನಲ್ಲೆ ಬಿಸಿಸಿಐ ಕೆಕೆಆರ್​ ತಂಡದಿಂದ ರೆಹಮಾನ್​ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿತ್ತು.

ಇದನ್ನೂ ಓದಿ: ನಾಳೆಯಿಂದ ಬೆಂಗಳೂರು ಓಪನ್‌ ಟೆನ್ನಿಸ್ ಟೂರ್ನಿ: ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್​ಗೆ ಪ್ರಜ್ವಲ್ ಡಿ.ಎಸ್ ಮೊದಲ ಎದುರಾಳಿ

Last Updated : January 4, 2026 at 2:55 PM IST