ಭಾನುವಾರದ ಪಂಚಾಂಗ, ರಾಶಿ ಭವಿಷ್ಯ: ನಿಮಗಿಂದು ದಿಢೀರ್ ಪ್ರಯಾಣ ಭಾಗ್ಯ
ಇಂದಿನ ಪಂಚಾಂಗ ಮತ್ತು 12 ರಾಶಿಗಳ ಭವಿಷ್ಯ ಹೀಗಿದೆ.

Published : May 31, 2026 at 7:14 AM IST
ದಿನಾಂಕ : 31-05-2026
ವಾರ : ಭಾನುವಾರ
ಸಂವತ್ಸರ : ಶ್ರೀ ಪರಾಭವ ನಾಮ
ಆಯನ : ಉತ್ತರಾಯಣ
ಪಕ್ಷ : ಆಷಾಢ
ತಿಥಿ : ಪೂರ್ಣಿಮ
ನಕ್ಷತ್ರ : ಪೂರ್ಣಿಮ
ಸೂರ್ಯೋದಯ : ಮುಂಜಾನೆ 5:22 ಗಂಟೆಗೆ
ಅಮೃತಕಾಲ : ಮಧ್ಯಾಹ್ನ 03:47 ರಿಂದ 07:31ರವರೆಗೆ
ದುರ್ಮುಹೂರ್ತ : ಮಧ್ಯಾಹ್ನ 03:46 ರಿಂದ 04:34ರವರೆಗೆ
ರಾಹುಕಾಲ : ಸಂಜೆ 05:31 ರಿಂದ 07:15ರವರೆಗೆ
ಸೂರ್ಯಾಸ್ತ : ಸಂಜೆ 07:15ಕ್ಕೆ
ದಿನ ಭವಿಷ್ಯ:
ಮೇಷ: ಇಂದು ನೀವು ಆಳವಾಗಿ ಅತೀಂದ್ರಿಯ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ, ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಮಾಡಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡಲೂಬಹುದು. ನೀವು ಅಂತಹ ಜ್ಞಾನವನ್ನು ಶಾಂತಿಯುತ ಕಾರಣಗಳಿಗೆ ಮಾತ್ರ ಬಳಸಬೇಕು.
ವೃಷಭ: ಇಂದು ನೀವು ನಿಮ್ಮನ್ನು ಪ್ರಚೋದಿಸುವ ಮತ್ತು ನಿಮಗೆ ಸಿಟ್ಟು ಬರಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ನೀವು ಪ್ರತೀಕಾರ ತೆಗೆದುಕೊಳ್ಳದೇ ಇರುವುದು ಉತ್ತಮ ಮತ್ತು ನಿಮ್ಮ ಒಳ್ಳೆಯ ಸ್ವಭಾವಕ್ಕೆ ಹೊಂದಿಕೊಳ್ಳದ ವಿಷಯಗಳನ್ನು ಮಾಡದಿರಿ. ಶಾಂತ ಮತ್ತು ಕ್ಷೋಭೆರಹಿತವಾಗಿರಿ. ನಿಮ್ಮ ಒಳ್ಳೆಯ ಸ್ವಭಾವಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ ಮತ್ತು ವರ್ತಿಸಿ.
ಮಿಥುನ: ನೀವು ಕುಟುಂಬದ ಸಂತೋಷಕೂಟ ಆಯೋಜಿಸಲು ಬಯಸುತ್ತಿದ್ದೀರಿ. ಎಲ್ಲ ವಿಷಯಗಳನ್ನೂ ಪರಿಗಣಿಸಿದರೆ, ಈ ದಿನ ಅತ್ಯಂತ ಸೂಕ್ತವಾದ ದಿನ. ಅಲ್ಲದೆ ಕುಟುಂಬ ಮಾತ್ರ ಏಕೆ? ನಿಮ್ಮ ಪ್ರೀತಿಪಾತ್ರರು ಮತ್ತು ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸುತ್ತೀರಿ. ನಿಮ್ಮ ಜೀವನ ಸಂಗಾತಿ ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ.
ಕರ್ಕಾಟಕ: ನೀವು ಇಂದು ಹೆಚ್ಚು ನಿರುತ್ಸಾಹದ ಮನಸ್ಥಿತಿಯಲ್ಲಿರುತ್ತೀರಿ. ಗಾಸಿಪ್, ವಿನೋದ, ನಗು ಮತ್ತು ಕೆಲ ಹಾನಿರಹಿತ ಫ್ಲರ್ಟಿಂಗ್ ನಿಮ್ಮ ದಿನವನ್ನು ಆಸಕ್ತಿದಾಯಕವಾಗಿಸುತ್ತದೆ, ಆದರೆ ಇವು ನೀವು ಆನಂದಿಸುವ ಕಾಲಹರಣಗಳಲ್ಲ. ಆದ್ದರಿಂದ, ದಿನ ಮುಂದುವರಿದಂತೆ, ನೀವು ಬಿಗುಮಾನದ, ಕಡಿಮೆ ಮಾತಿನ ಸ್ವಯಂ ಗಮನದ ಕೆಲಸ ಪೂರೈಸುವ ಹಂಬಲದಲ್ಲಿರುತ್ತೀರಿ.
ಸಿಂಹ: ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಉದ್ಯಮಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲು ಶಕ್ತರಾಗುತ್ತಾರೆ. ಗೃಹಿಣಿಯರು ತಮ್ಮ ದೈನಂದಿನ ಸಾಧಾರಣತೆಯ ಹೊರಗಡೆ ಏನನ್ನಾದರೂ ಪ್ರಯತ್ನಿಸಬಹುದು. ಒಟ್ಟಾರೆ ಇದು ನಿಮಗೆ ಪ್ರಮುಖವಾದ ದಿನವೆಂದು ಸಾಬೀತಾಗಲಿದೆ.
ಕನ್ಯಾ: ನಿಮ್ಮ ಪ್ರೀತಿಪಾತ್ರರು ಇಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು, ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.
ತುಲಾ: ರಿಸ್ಕ್ ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಪ್ರಯೋಜನ ಪಡೆಯಲು ಶಕ್ತರಾಗುತ್ತೀರಿ. ಕೆಲಸದಲ್ಲಿ ಮೇಲಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯ ಮತ್ತು ಚೆನ್ನಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಗುರುತಿಸುತ್ತಾರೆ. ಅವರು ನಿಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಹಾಕಲು ಪ್ರೇರೇಪಿಸುತ್ತಾರೆ.
ವೃಶ್ಚಿಕ: ಪ್ರೀತಿ ಮತ್ತು ಅತ್ಯಂತ ಉತ್ಸಾಹ ನಿಮಗೆ ಜೀವನ ವಿಧಾನದಂತೆ. ಈ ಅಂಶಗಳನ್ನು ಇಂದು ನೀವು ಎತ್ತಿ ಹೇಳಲಿದ್ದೀರಿ. ಆದಾಗ್ಯೂ ಇದು ನಿಮಗೆ ಅತಿಯಾಗಿ ಮಾಡದೇ ಇರಲು ನೆರವಾಗುತ್ತದೆ. ಯಾವುದು ಅತಿಯಾದರೂ ಅದು ವಿನಾಶಕರ.
ಧನು: ಆಶ್ಚರ್ಯವಿಲ್ಲ, ನೀವು ಬಹಳ ಕಾಲದಿಂದ ಅದೇ ಕೆಲಸವನ್ನು ಮಾಡುತ್ತಿರುವಂತೆ ಭಾವಿಸುತ್ತೀರಿ. ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್, ನಿಮ್ಮ ತಾರೆಗಳು ಕೂಡಾ ಇಂದು ಸೋಮಾರಿಯಾಗಿವೆ, ಮತ್ತು ನೀವು ಉತ್ಸಾಹಗೊಳ್ಳಲು ಏನೂ ಉಳಿದಿಲ್ಲ. ಈ ದಿನ ಶಾಂತವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.
ಮಕರ: ನೀವು ಮಹತ್ತರ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ; ಇದು ನಿಮ್ಮ ಸುತ್ತಲೂ ಇರುವ ಅತ್ಯಂತ ಮೊಂಡುತನದ ವ್ಯಕ್ತಿಗಳನ್ನೂ ಮನ ಒಲಿಸುತ್ತದೆ. ಆದಾಗ್ಯೂ, ನೀವು ಈ ಸಾಮರ್ಥ್ಯವನ್ನು ಹೆಚ್ಚು ಹೆಚ್ಚು ತೀಕ್ಷ್ಣಗೊಳಿಸಿಕೊಳ್ಳಬೇಕು. ನೀವು ಸಮಸ್ಯೆಯ ಕೇಂದ್ರವನ್ನು ಕಂಡುಕೊಂಡು ಅದಕ್ಕೆ ನೀವು ಎದುರು ನೋಡುತ್ತಿರುವ ಸೂಕ್ತ ಪ್ರತಿಕ್ರಿಯೆಗಳನ್ನು ಆವಿಷ್ಕರಿಸಿಕೊಳ್ಳುತ್ತೀರಿ.
ಕುಂಭ: ಕೆಲ ಪ್ರಕರಣಗಳಲ್ಲಿ ನೀವು ಇರುಕಾದ ಸ್ಥಳದಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ, ಮತ್ತು ಪಲಾಯನಕ್ಕೆ ದಾರಿಯೇ ಇಲ್ಲ. ಆದಾಗ್ಯೂ ಸ್ವತಂತ್ರವಾದ ವ್ಯಕ್ತಿಯಾಗಿ ನೀವು ಯಾರ ಸಹಾಯವೂ ಇಲ್ಲದೆ ಕಷ್ಟಗಳನ್ನು ನಿಭಾಯಿಸಬಲ್ಲಿರಿ. ಅದೇ ಸಾಮರ್ಥ್ಯ ನಿಮ್ಮನ್ನು ಇಂದಿಗೂ ದಿಟ್ಟವಾಗಿ ನಿಲ್ಲುವಂತೆ ಮಾಡುತ್ತದೆ.
ಮೀನ: ನಿಮಗೆ ಪ್ರಯಾಣವೆಂದರೆ ಇಷ್ಟ ಮತ್ತು ಅದಕ್ಕೆ ಹಲವು ಕಾರಣಗಳನ್ನು ಹುಡುಕುತ್ತೀರಿ. ಆದ್ದರಿಂದ ನೀವು ಇಂದು ದಿಢೀರ್ ಎಂದು ಸಾಹಸಯಾತ್ರೆ ಕೈಗೊಂಡರೆ ಆಶ್ಚರ್ಯಪಡಬೇಡಿ. ಏನೇ ಆಗಲಿ, ಇದು ಜೀವನೋಪಾಯ ಗಳಿಸುವ ದೈನಂದಿನ ಸಾಧಾರಣ ಸಮಸ್ಯೆಗಳಲ್ಲಿ ನಿಮಗೆ ಅತ್ಯಂತ ಅಗತ್ಯವಾದ ಬಿಡುವು.
ಇದನ್ನೂ ಓದಿ: ಗುರುಕುಲ ಮಾದರಿ ಶಿಕ್ಷಣ: ಆಲದ ಮರದಡಿ ಮಕ್ಕಳಿಗೆ ಗೀತೆಯ ಶ್ಲೋಕ ಹೇಳಿಕೊಡುವ ಮಹಿಳಾ ಅಧಿಕಾರಿ

